ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಮಾರೆಣ್ಣ ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಅರ್ಜಿ ನಮೂನೆ-3 ಅನ್ನು ನೀಡಲು 4,000 ರೂಪಾಯಿ ಲಂಚದ ಹಣಕ್ಕೆ ಬಿಲ್ ಕಲೆಕ್ಟರ್ ಮಾರೆಣ್ಣ ಬೇಡಿಕೆ ಇಟ್ಟಿದ್ದಾರೆ ಎಂದು ಹೊಸಪೇಟೆಯ ಪಾಂಡುರಂಗಯ್ಯ ಎಂಬುವರು ಎಸಿಬಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಈ ದಾಳಿ ಮಾಡಲಾಗಿದೆ ಎಂದು ಬಳ್ಳಾರಿ ಎಸಿಬಿ ಅಧಿಕಾರಿ ಶ್ರೀಧರ್ ದೊಡ್ಡಿ ತಿಳಿಸಿದ್ದಾರೆ.
ಪಾಂಡುರಂಗಯ್ಯರ ಬಳಿ 3,000 ರೂ. ಲಂಚ ಪಡೆಯುವ ವೇಳೆ ಬಿಲ್ ಕಲೆಕ್ಟರ್ ಬಲೆಗೆ ಬಿದ್ದಿದ್ದಾನೆ. ಮಾರೆಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.