ETV Bharat / city

ನಮ್ಮ ಭಾಗಕ್ಕೆ ಮಹದಾಯಿ ನೀರು ಬಿಡದೇ ಹೋದರೆ,ಪ್ರತ್ಯೇಕ ರಾಜ್ಯ ನೀಡಲಿ...ಶಾಸಕ ಉಮೇಶ್​ ಕತ್ತಿ

author img

By

Published : Oct 18, 2019, 1:57 PM IST

ಚುನಾವಣೆ ಬಂದಾಗ ಮಹದಾಯಿ ನೀರು ಮಹಾರಾಷ್ಟ್ರಕ್ಕೆ ಬಿಡ್ತೇವೆ ಅನ್ನೋದು ಹಗುರವಾದ ಮಾತು...ಶಾಸಕ ಉಮೇಶ್​ ಕತ್ತಿ

ಮಹದಾಯಿ ನೀರನ್ನ ನಮ್ಮ ಭಾಗಕ್ಕೆ ಸರಿಯಾಗಿ ಬಿಡದೇ ಹೋದರೆ, ನಮಗೆ ಪ್ರತ್ಯೇಕ ರಾಜ್ಯ ನೀಡಲಿ. ನಾವು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಕರಾಡ, ಸೊಲ್ಲಾಪುರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ, ಪ್ರತ್ಯೇಕ ರಾಜ್ಯ ಮಾಡತ್ತೇವೆ ಎಂದು ಶಾಸಕ ಉಮೇಶ್​ ಕತ್ತಿ,ಬಿಎಸ್​ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಿಕ್ಕೋಡಿ: ಮಹದಾಯಿ ನೀರನ್ನ ನಮ್ಮ ಭಾಗಕ್ಕೆ ಸರಿಯಾಗಿ ಬಿಡದೇ ಹೋದರೆ, ನಮಗೆ ಪ್ರತ್ಯೇಕ ರಾಜ್ಯ ನೀಡಲಿ. ನಾವು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಕರಾಡ, ಸೊಲ್ಲಾಪುರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ, ಪ್ರತ್ಯೇಕ ರಾಜ್ಯ ಮಾಡತ್ತೇವೆ ಎಂದು ಶಾಸಕ ಉಮೇಶ್​ ಕತ್ತಿ,ಬಿಎಸ್​ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಭಾಗಕ್ಕೆ ಮಹದಾಯಿ ನೀರು ಬಿಡದೇ ಹೋದರೆ,ಪ್ರತ್ಯೇಕ ರಾಜ್ಯ ನೀಡಲಿ...ಶಾಸಕ ಉಮೇಶ್​ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೀರಾ ಶುಗರ್ಸ್ ಕಾರ್ಖಾನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,ಮಹದಾಯಿ ಯೋಜನೆ ಅಲಾರ್ಟ್​ಮೆಂಟ್ ಆಗಿ 7 ವರ್ಷವಾದರೂ ಸಹ ಕೆಲಸ ಮಾಡಲು ಆಗಿಲ್ಲ. ಕೆಲಸ ಮಾಡದೆ ಮಹಾರಾಷ್ಟ್ರಕ್ಕೆ ನೀರು ಕೊಡುತ್ತೇವೆ ಎಂಬ ಸಿಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ, ನಮ್ಮಗೆ ಪ್ರತ್ಯೇಕ ರಾಜ್ಯ ನೀಡಲಿ. ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಕರಾಡ, ಸೊಲ್ಲಾಪುರ ಹಾಗೂ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ, ನಾವು ಪ್ರತ್ಯೇಕ ರಾಜ್ಯ ಮಾಡತ್ತೇವೆ. ಈ ಭಾಗಕ್ಕೆ ಅನ್ಯಾಯವಾದರೆ ನಾನು ಸಾಯೋವರೆಗೂ ಸಹ ನನ್ನ ಹೋರಾಟ ಅಛಲ ಎಂದರು.

ಕೃಷ್ಣಾ ಬಚಾವೋ ಯೋಜನೆಯಲ್ಲಿ 740 ಟಿಎಂಸಿ ಸದ್ಬಳಕೆ ಆಗುತ್ತಿಲ್ಲ. ಇದಕ್ಕಾಗಿ ಜಗದೀಶ್​ ಶೆಟ್ಟರ್ ಸರ್ಕಾರ ಈ ಹಿಂದೆ 1700 ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕದ 42 ತಾಲೂಕುಗಳಿಗೆ ಮಹದಾಯಿ ನೀರು ವರದಾನವಾಗಬೇಕಿದೆ. ಮಹದಾಯಿ ನದಿಯಲ್ಲಿ ನಮಗೆ ಬಂದಿರುವ 40 ಟಿಎಂಸಿ ನೀರು ಸದ್ಬಳಕೆ ಆಗಬೇಕಿದೆ. ಚುನಾವಣೆ ಬಂದಾಗ ಮಹಾರಾಷ್ಟ್ರಕ್ಕೆ ನೀರು ಬಿಡುತ್ತೇವೆ ಎನ್ನುವುದು ತುಂಬಾ ಹಗುರವಾದ ಮಾತು. ನಮಗೆ ನೀರು ಬಿಡಿ ಎಂದು ಹೇಳಿದರೂ, ನೀರು ಬಿಟ್ಟಿಲ್ಲ.

ನಮಗೆ ಮೊದಲು ನೀರು ಕೊಡಿ. ವೋಟ್ ಗಿಟ್ಟಿಸಿಕೊಳ್ಳಲು ಎನೇನೋ ಮಾತನಾಡುವುದು ಸರಿಯಲ್ಲ. ಅದು ಚುಣಾವನೆಯಲ್ಲಿ ವೋಟು ಗಿಟ್ಟಿಸಿಕೊಳ್ಳಲು ಮಾಡಿದ ಭಾಷಣವಷ್ಟೆ. ಸುವರ್ಣ ಸೌಧ ಕಟ್ಟಿದ್ದಾರೆ. ಆದರೆ,ಅಲ್ಲಿ ಅಧಿವೇಶನವನ್ನೆ ನಡೆಸುತ್ತಿಲ್ಲ. 400 ಕೋಟಿ ರೂ. ಕೊಟ್ಟು ಸುವರ್ಣ ಸೌಧ ನಿರ್ಮಾಣ ಮಾಡಿದ್ದಾರೆ. ಆದರೆ,ಅದೂ ಸಹ ಬಳಕೆ ಆಗುತ್ತಿಲ್ಲ. ಡಿಸಿಎಂ ಹುದ್ದೆ ನಾಮಕವಸ್ತೆ ಅಷ್ಟೇ. ನಾನು ಆದರೆ ಅಖಂಡ ಕರ್ನಾಟಕದ ಮುಖ್ಯಂಮತ್ರಿಯಾಗುತ್ತೇನೆ ಎಂದರು.

Intro:ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಶಾಸಕ ಉಮೇಶ ಕತ್ತಿ
Body:
ಚಿಕ್ಕೋಡಿ :

ಮಹಾರಾಷ್ಟ್ರಕ್ಕೆ ನೀರು ಬಿಡುವ ವಿಚಾರ ಪ್ರಸ್ತಾಪ ಬಿಎಸ್‌ವೈ ವಿರುದ್ಧ ಕತ್ತಿ ಮಸೆದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಹೀರಾ ಶುಗರ್ಸ್ ಕಾರ್ಖಾನೆಯಲ್ಲಿ ಉಮೇಶ ಕತ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕೃಷ್ಣಾ ಬಚಾವೋ ಯೋಜನೆಯಲ್ಲಿ 740 ಟಿಎಂಸಿ ಸದ್ಭಳಕೆ ಆಗುತ್ತಿಲ್ಲ, ಹಿಂದೆ 1700 ಕೋಟಿ ರೂಪಾಯಿ ಜಗದೀಶ ಶೆಟ್ಟರ್ ಸರ್ಕಾರ ಹಣ ಮೀಸಲಿಟ್ಟಿದೆ,

ಕರ್ನಾಟಕದ 42 ತಾಲೂಕುಗಳಿಗೆ ಮಹದಾಯಿ ನೀರು ವರದಾನವಾಗಬೇಕಿದೆ, ಮಹದಾಯಿ ನದಿಯಲ್ಲಿ ನಮ್ಮಗೆ ಬಂದಿರುವ 40 ಟಿಎಂಸಿ ನೀರು ಸದ್ಭಳಕೆ ಆಗಬೇಕಿದೆ, ಚುನಾವಣೆ ಬಂದಾಗ ಮಹಾಗೆ ನೀರು ಬಿಡುತ್ತೆವೆ ಎಂದು ಹೇಳುವುದು ತುಂಬಾ ಹಗುರವಾದ ಮಾತು, ನಮ್ಮಗೆ ಅವರು ನೀರು ಬಿಡಿ ಎಂದು ಹೇಳಿದರೂ ನೀರು ಬಿಟ್ಟಿಲ್ಲ, ಅದು ಎರಡು ರಾಜ್ಯದವರು ಕುಳಿತು ಮಾತನಾಡಿದಾಗ ಮಾತ್ರ ಸಾಧ್ಯ ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದ ಕತ್ತಿ,

ಮಹದಾಯಿ ಯೋಜನೆ ಅಲಾಟಮೆಂಟ್ ಆಗಿ 7 ವರ್ಷವಾದರೂ ಸಹ ಕೆಲಸ ಮಾಡಲು ಆಗಿಲ್ಲ, ಕೆಲಸ ಮಾಡದೆ ಮಹಾಗೆ ನೀರು ಕೊಡುತ್ತೇವೆ ಎಂಬ ಸಿಎಂ ಹೇಳಿಕೆಯನ್ನು ನಾನು ಖಂಡಿಸುತ್ತೇನೆ, ನಮ್ಮ ಭಾಗಕ್ಕೆ ಸರಿಯಾಗಿ ನೀರು ಕೊಡದೇ ಇದ್ದರೆ ನಮ್ಮಗೆ ಪ್ರತ್ಯೇಕ ರಾಜ್ಯವನ್ನ ನೀಡಲಿ, ಈ ಭಾಗಕ್ಕೆ ಅನ್ಯಾಯವಾದರೆ ನಾನು ಸಾಯೋವರೆಗೂ ಸಹ ನನ್ನ ಹೋರಾಟ ಅಛಲ,

ಕೊಲ್ಹಾಪುರ, ಸಾಂಗ್ಲಿ, ಕರಾಡ, ಸೋಲ್ಹಾಪುರ ಉತ್ತರ ಕರ್ನಾಟಕ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯ ಮಾಡತ್ತೇವೆ, ನಮ್ಮಗೆ ಮೊದಲು ನೀರು ಕೊಡಿ ವೋಟ್ ಗಿಟ್ಟಿಸಿಕೊಳ್ಳಲು ಎನೇನೋ ಮಾತನಾಡುವುದು ಸರಿಯಲ್ಲ,

ಅದು ಚುಣಾವನೆಯಲ್ಲಿ ವೋಟು ಗಿಟ್ಟಿಸಿಕೊಳ್ಳಲು ಮಾಡಿದ ಭಾಷಣವಷ್ಟೆ, ಸುವರ್ಣ ಸೌಧ ಕಟ್ಟಿದ್ದಾರೆ. ಆದರೆ, ಅಲ್ಲಿ ಅಧಿವೇಶನವನ್ನೆ ನಡೆಸುತ್ತಿಲ್ಲ, 400 ಕೋಟಿ ರೂಪಾಯಿ ಕೊಟ್ಟು ಸುವರ್ಣ ಸೌಧ ನಿರ್ಮಾಣ ಮಾಡಿದ್ದಾರೆ. ಆದರೆ, ಅದೂ ಸಹ ಬಳಕೆ ಆಗುತ್ತಿಲ್ಲ,

ಡಿಸಿಎಂ ಹುದ್ದೆ ನಾಮ್ಕೆವಾಸ್ತೆ ಅಷ್ಟೇ, ನಾನು ಆದರೆ ಅಖಂಡ ಕರ್ನಾಟಕದ ಮುಖ್ಯಂಮತ್ರಿಯಾಗುತ್ತೇನೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.