ETV Bharat / city

ಕಾಂಗ್ರೆಸ್ ಡೋಂಗಿ ರಾಜಕಾರಣ ಬಟಾಬಯಲಾಗಿದೆ: ಸಚಿವ ಆರ್.ಅಶೋಕ್

author img

By

Published : Dec 23, 2021, 12:57 PM IST

Minister R ashok
ಸಚಿವ ಆರ್.ಅಶೋಕ್

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಕಾಂಗ್ರೆಸ್ ಡೋಂಗಿ ರಾಜಕಾರಣ ಬಟಾಬಯಲಾಗಿದೆ ಎಂದು ಸಚಿವ ಆರ್​. ಅಶೋಕ್​​ ಹೇಳಿದರು.

ಬೆಳಗಾವಿ: ಕಾಂಗ್ರೆಸ್​​ನ ಡೋಂಗಿ ರಾಜಕಾರಣ ಬಟಾಬಯಲಾಗಿದೆ. ಮತಾಂತರ ನಿಷೇಧ ವಿಧೇಯಕಕ್ಕೆ ಒಪ್ಪಿಗೆ ನೀಡಿದರೆ, ಅವರ ಮಾನ ಮರ್ಯಾದೆ ಉಳಿಯುತ್ತದೆ ಎಂದು ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕಾಂಗ್ರೆಸ್​​ ವಿರೋಧ: ಸಚಿವ ಆರ್.ಅಶೋಕ್ ತಿರುಗೇಟು

ಸುವರ್ಣ ಸೌಧದಲ್ಲಿ ‌ಮಾತನಾಡಿದ ಅವರು, ಕಾಂಗ್ರೆಸ್​​ನವರಿಗೆ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸುವ ನೈತಿಕ ಅಧಿಕಾರ ಇಲ್ಲ. ಏಕೆಂದರೆ 2016ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಂದಿನ‌ ಕಾನೂನು ಸಚಿವರಾಗಿದ್ದಾಗ ಟಿ.ಬಿ. ಜಯಚಂದ್ರ ಮತಾಂತರ ನಿಷೇಧ ವಿಧೇಯಕದ ಕರಡು ತಯಾರಿಸಿದ್ದರು. ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರೇ ಆ ಕಡತಕ್ಕೆ ಸಹಿ ಹಾಕಿದ್ದರು‌. ಈಗ ನಾವು ಅದಕ್ಕೆ ಕೆಲ ಅಂಶಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್​​ನವರ ಡೋಂಗಿ ಜಾತ್ಯಾತೀತ ನೀತಿಯನ್ನು ಖಂಡಿಸಬೇಕು. ಕಾಂಗ್ರೆಸ್​​ನವರು ಒಳಗೊಂದು, ಹೊರಗೊಂದು. ಅದು ಇಂದು ಬಟಾಬಯಲಾಗಿದೆ. ಇದರಿಂದ ಕಾಂಗ್ರೆಸ್​​ಗೆ ಮುಖಭಂಗವಾಗಿದೆ. ಅವರು ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಹೊರಟಿದ್ದರು. ಇನ್ಮುಂದೆ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಈಗ ಅವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ ಎಂದು ಸಚಿವ ಅಶೋಕ್​ ಟಾಂಗ್​​ ನೀಡಿದರು.

ಒಗ್ಗಟ್ಟಿನ ನೀತಿಗೆ ಅವರು ವಿರೋಧಿಗಳಾಗಿದ್ದಾರೆ. ಪ್ರತಿಭಟನೆ ಮಾಡುವವರಿಗೆ ನಾನು ಕೇಳುತ್ತೇನೆ?. ಅವರಿಗೆ ಈ ಕಾಯ್ದೆ ಬಗ್ಗೆ ಏಕೆ ಭಯ?. ಅವರ ಅವರ ಧರ್ಮ ಉಳಿಯಬೇಕು. ಇದೀಗ ಸಿದ್ದರಾಮಯ್ಯ ಅವರು ಕಕ್ಕಾಬಿಕ್ಕಿ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಬಿಲ್ ಹರಿದು ಹಾಕಿದ ಡಿಕೆಶಿ ಕ್ಷಮೆ ಕೋರಬೇಕು : ಬಿಎಸ್​​ವೈ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.