ETV Bharat / city

ಮಹಾ ಪುಂಡರಿಗೆ ತಕ್ಕ ಪ್ರತ್ಯುತ್ತರ: ಮಹಾರಾಷ್ಟ್ರ ಬಸ್​ಗಳ ಮೇಲೆ ಕನ್ನಡ ಪೋಸ್ಟರ್!

author img

By

Published : Jan 30, 2021, 8:46 AM IST

kannada-posters-on-maharashtra-buses
ಮಹಾ ಪುಂಡರಿಗೆ ತಕ್ಕ ಪ್ರತ್ಯುತ್ತರ: ಮಹಾರಾಷ್ಟ್ರ ಬಸ್​ಗಳ ಮೇಲೆ ಕನ್ನಡ ಪೋಸ್ಟರ್

ಇಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ ಬಸ್ ನಿಲ್ದಾಣಕ್ಕೆ ತೆರಳಿದ ಕನ್ನಡ ಸಂಘಟನೆಗಳು, ಸಾಂಗಲಿ, ಅಕ್ಕಲಕೋಟ, ಸೊಲ್ಲಾಪುರ, ಕೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂದು ಬಸ್​ಗಳ ಮೇಲೆ ಪೋಸ್ಟರ್ ಅಂಟಿಸಿದ್ದಾರೆ.

ಚಿಕ್ಕೋಡಿ: ನಿನ್ನೆ ಕರ್ನಾಟಕದ ಬಸ್‌ಗಳ ಮೇಲೆ ಪೋಸ್ಟರ್ ಅಂಟಿಸಿದ್ದವರಿಗೆ ತಕ್ಕ ಪ್ರತ್ಯುತ್ತರ ನೀಡಿರುವ ಕನ್ನಡ ಸಂಘಟನೆಗಳು, ಮಹಾರಾಷ್ಟ್ರಕ್ಕೆ ನುಗ್ಗಿ ಮಹಾ ಸಾರಿಗೆ ಬಸ್​ಗಳ ಮೇಲೆ ಕನ್ನಡದ ಫೋಸ್ಟರ್ ಹಚ್ಚಿವೆ.

ಬೆಳಗಾವಿ, ನಿಪ್ಪಾಣಿ, ಕಾರವಾರ ಸೇರಿ ಸಂಯುಕ್ತ ಮಹಾರಾಷ್ಟ್ರ ಆಗುವುದು ಎಂದು ನಿನ್ನೆ ಕರ್ನಾಟಕದ ಬೆಳಗಾವಿಯಿಂದ ಪುಣೆ ಹೋಗುವ ಬಸ್‌ಗಳ ಮೇಲೆ ಪೋಸ್ಟರ್ ಹಾಕಿದ್ದರು.

ಓದಿ: ಮುಂದುವರಿದ "ಮಹಾ" ಪುಂಡಾಟಿಕೆ : KSRTC ಬಸ್ ಮೇಲೆ ಮರಾಠಿ ಪೋಸ್ಟರ್ ಅಂಟಿಸಿದ ಪುಂಡರು

ಇಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ ಬಸ್ ನಿಲ್ದಾಣಕ್ಕೆ ತೆರಳಿದ ಕನ್ನಡ ಸಂಘಟನೆಗಳು, ಸಾಂಗಲಿ, ಅಕ್ಕಲಕೋಟ, ಸೊಲ್ಲಾಪುರ, ಕೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂದು ಬಸ್​ಗಳ ಮೇಲೆ ಪೋಸ್ಟರ್ ಅಂಟಿಸಿದ್ದಾರೆ.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.