ETV Bharat / city

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್​​​ ಅಭ್ಯರ್ಥಿ ರಾಜು ಕಾಗೆ

author img

By

Published : Nov 21, 2019, 1:16 PM IST

ಕಾಗವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ, ಮಾಧುಸ್ವಾಮಿ ಹೇಳಿಕೆ ನನಗೆ ಲಾಭ ತಂದುಕೊಡಲಿದೆ. ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

ಚಿಕ್ಕೋಡಿ: ಶಾಂತಿ ಸಭೆಯಲ್ಲಿ ಕುರುಬ ಸಮಾಜದ ಕುರಿತು ಮಾತನಾಡಿರುವ ಸಚಿವ ಮಾಧುಸ್ವಾಮಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ವ್ಯಂಗ್ಯವಾಡಿದರು.

ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ

ಕಾಗವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್​ ಅಭ್ಯರ್ಥಿ ರಾಜು ಕಾಗೆ, ಮಾಧುಸ್ವಾಮಿ ಹೇಳಿಕೆ ನನಗೆ ಲಾಭ ತಂದುಕೊಡಲಿದೆ. ಇನ್ನು ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಗಂಗಾ ಕಲ್ಯಾಣ ಆಶ್ರಯ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ತಂದಿದ್ದೇನೆ. ನನಗೆ ಮತ ನೀಡಿ ಅಂತಾ ಮತದಾರರನ್ನು ಕೇಳುವ ಅವಶ್ಯಕತೆ ಇಲ್ಲ ಎಂದರು.

ಜನರು ನನ್ನ ಪರ ಮತ ಚಲಾಯಿಸುವ ವಿಶ್ವಾಸ ಇದೆ. ನನ್ನ ಹೆಸರಲ್ಲಿ ಕಾರ್ಖಾನೆ, ವೈನ್ ಶಾಪ್, ಪೆಟ್ರೋಲ್ ಬ್ಯಾಂಕ್ ಬಿಸಿನೆಸ್​ಗಳು ಇಲ್ಲ. ಜನಪರ ಕೆಲಸ ಮಾಡಿದ ತೃಪ್ತಿ ಇದೆ ಎಂದು ರಾಜು ಕಾಗೆ ಹೇಳಿದರು.

Intro:ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ
Body:
ಚಿಕ್ಕೋಡಿ :

ಕುರುಬ ಸಮಾಜದ ಕುರಿತು ಮಾತನಾಡಿರುವ ಮಾಧುಸ್ವಾಮಿಗೆ ಧನ್ಯವಾದ ಹೇಳಿದ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ, ಜನಪರ ಯೋಜನೆಗಳನ್ನು ತಂದಿದ್ದೇನೆ, ಆತ್ಮಹತ್ಯೆ ಕುರಿತು ಭಾವನಾತ್ಮಕ ವಾಗಿ ಮಾತನಾಡಿದ್ದೇನೆ ಅಷ್ಟೇ. ಗಂಗಾಕಲ್ಯಾಣ ಆಶ್ರಯ ಯೋಜನೆ ಸೇರಿದಂತೆ ಹಲವು ಕೆಲಸ ಮಾಡಿಕೊಟ್ಟಿದ್ದೇನೆ. ನನಗೆ ಮತ ನೀಡಿ ಅಂತ ಮತದಾರರನ್ನು ಕೇಳುವ ಅವಶ್ಯಕತೆ ಇಲ್ಲ‌ ಎಂದು ಹೇಳಿದರು

ಜನ ನನ್ನ ಪರ ಮತಚಲಾಯಿಸುವ ವಿಶ್ವಾಸ ಇದೆ. ನನ್ನ ಹೆಸರಲ್ಲಿ ಕಾರ್ಖಾನೆ, ವೈನ್ ಶಾಪ್, ಪೆಟ್ರೋಲ್ ಬ್ಯಾಂಕ್ ಬ್ಯುಜಿನೆಸ್ ಗಳು ಇಲ್ಲ..
ಜನಪರ ಕೆಲಸ ಮಾಡಿದ ತೃಪ್ತಿ ಇದೆ ಎಂದು ರಾಜು ಕಾಗೆ ಪ್ರತಿಕ್ರಿಯಿಸಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.