ETV Bharat / city

ಸಂಪುಟ ವಿಸ್ತರಣೆ ಆದ್ರೆ ಮಂತ್ರಿ ಆಗೇ ಆಗ್ತೇನೆ: ಕತ್ತಿ ವಿಶ್ವಾಸ

author img

By

Published : Nov 14, 2020, 5:05 PM IST

i-will-be-the-minister-if-cabinet-expansion-had-done
ಉಮೇಶ್​ ಕತ್ತಿ

ಈ ಬಾರಿ ಸಚಿವ ಸಂಪುಟ ವಿಸ್ತರಣೆ ಆದರೆ ನಾನು ಖಂಡಿತವಾಗಿ ಮಂತ್ರಿ ಆಗುತ್ತೇನೆ ಎಂದು ಮಾಚಿ ಸಚಿವ, ಶಾಸಕ ಉಮೇಶ್​ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಮುಹೂರ್ತ ಫಿಕ್ಸ್ ಆದ್ರೆ ನಾನು‌ ಮಂತ್ರಿ ಆಗೇ ಆಗ್ತೇನೆ ಎಂದು ಮಾಜಿ ಸಚಿವ, ಶಾಸಕ ಉಮೇಶ್​ ಕತ್ತಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಚಿಂತನೆ ನಡೆಸಿದ್ದಾರೆ. ಆದಷ್ಟು ಬೇಗ ಮಂತ್ರಿ ಆಗುತ್ತೇನೆ ಎಂದರು.

ಬೆಳಗಾವಿ ಲೋಕಸಭೆ ಚುನಾವಣೆ ಬಿಜೆಪಿ ಟಿಕೆಟ್ ದಿ. ಸಂಸದ ಸುರೇಶ್​ ಅಂಗಡಿ ಅವರ ಕುಟುಂಬದವರಿಗೆ ಸಿಗಬೇಕು. ಇಲ್ಲವಾದರೆ ಮಾಜಿ ಸಂಸದ ರಮೇಶ್​ ಕತ್ತಿ ಅವರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಮಂತ್ರಿ ಸ್ಥಾನದ ಕುರಿತು ಉಮೇಶ್​ ಕತ್ತಿ ಹೇಳಿಕೆ

ಸಿಎಂ ಬದಲಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏಕೆ ಹಾಗೆ ಹೇಳುತ್ತಾರೋ ಗೊತ್ತಿಲ್ಲ. ಅವರು ನನ್ನ ಉತ್ತಮ ಸ್ನೇಹಿತ ಅಷ್ಟೇ ಅಲ್ಲ. ಉತ್ತಮ ನಾಯಕ, ನುರಿತ ರಾಜಕಾರಣಿಯೂ ಹೌದು. ಸಿದ್ದರಾಮಯ್ಯ ಅವರ ಕೆಲಸ ಪ್ರತಿಪಕ್ಷ ನಾಯಕನ ಕೆಲಸ. ಅವರು ಆ ಕೆಲಸ ಮಾಡುವುದನ್ನು ಬಿಟ್ಟು ಸಿಎಂ ಬದಲಾವಣೆ ಬಗ್ಗೆ ಯಾಕೆ ಹೇಳಿಕೆ ನೀಡುತ್ತಾರೋ ಗೊತ್ತಿಲ್ಲ.

ಇದರ ಜೊತೆಗೆ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್​​ ಹೇಳಿಕೆ ವೈಯಕ್ತಿಕವಾಗಿದೆ‌. ಇನ್ನೂ 3 ವರ್ಷ ಸಿಎಂ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಈಗ ಮುಖ್ಯಮಂತ್ರಿ ‌ಹುದ್ದೆ ಖಾಲಿ ಇಲ್ಲ. ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರಲಿದೆ. ಆಗ ಬೇಕಾದ್ರೆ ಚಿಂತನೆ ಮಾಡೋಣ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.