ETV Bharat / briefs

ಪ್ರಕಾಶ್​ ಹುಕ್ಕೇರಿಗೆ ಶಾಕ್​ ನೀಡಿದ್ರಾ ಕೈ ರೆಬಲ್​ ಶಾಸಕ ರಮೇಶ್​ ಜಾರಕಿಹೊಳಿ?

author img

By

Published : May 26, 2019, 9:47 AM IST

ರಮೇಶ ಜಾರಕಿಹೊಳಿ- ಪ್ರಕಾಶ್ ಹುಕ್ಕೇರಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಿಡಿತದಲ್ಲಿರುವ ಅಥಣಿ, ಯಮಕನಮರಡಿ, ಕಾಗವಾಡ ತಾಲೂಕುಗಳಲ್ಲಿಯೇ ಪ್ರಕಾಶ್​ ಹುಕ್ಕೇರಿಗೆ ತೀವ್ರ ಮುಖಭಂಗವಾಗಿದೆ. ಅವರ ವಿರುದ್ಧ ಸ್ವಪಕ್ಷದ ರೆಬಲ್​ ಶಾಸಕ ರಮೇಶ್​ ಜಾರಕಿಹೊಳಿ ಕೆಲಸ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಸೋಲಿನ ಆಘಾತದಿಂದ ಹುಕ್ಕೇರಿ ಅವರು ಕಾರ್ಯಕರ್ತರು ಮತ್ತು ಮುಖಂಡರ ಭೇಟಿಗೆ ನಿರಾಕರಿಸುತ್ತಿದ್ದಾರೆ ಎನ್ನಲಾಗ್ತಿದೆ.

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುನುಭವಿಸಿರುವ ಪ್ರಕಾಶ್​ ಹುಕ್ಕೇರಿ ಅವರು ಇದೀಗ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಭೇಟಿಗೆ ನಿರಾಕರಿಸುತ್ತಿದ್ದಾರೆ. ಸೋಲಿನ ಆಘಾತದಿಂದ ಮಾಜಿ ಸಂಸದ ಪ್ರಕಾಶ್​ ಹುಕ್ಕೇರಿ ಬೆಳಗಾವಿಯ ತಮ್ಮ ನಿವಾಸದಲ್ಲಿ ತಂಗಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್​ ಹಿಡಿತವಿದ್ದ ಅಥಣಿ, ಯಮಕನಮರಡಿ, ಕಾಗವಾಡ ತಾಲೂಕುಗಳಲ್ಲಿಯೇ ಪ್ರಕಾಶ್​ ಹುಕ್ಕೇರಿಗೆ ತೀವ್ರ ಹಿನ್ನಡೆಯಾದ ಹಿನ್ನಲೆಯಲ್ಲಿ ಅವರು ಕಂಗಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ಪ್ರಕಾಶ್​ ಹುಕ್ಕೇರಿ ವಿರುದ್ಧ 1,18,877 ಮತಗಳಿಂದ ಜಯ ಸಾಧಿಸಿದ್ದಾರೆ. ಹೀಗಾಗಿ ಮಾಜಿ ಸಂಸದ ಹುಕ್ಕೇರಿಗೆ ಭಾರಿ ಮುಖಭಂಗವಾಗಿದೆ.
ಕಾಂಗ್ರೆಸ್‌ ಹಿಡಿತವಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಜಿ ಸಚಿವ, ಕಾಂಗ್ರೆಸ್​ ರೆಬಲ್​ ಶಾಸಕ ರಮೇಶ್​ ಜಾರಕಿಹೊಳಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಹಾಗಾಗಿ ಈ ಬಾರಿ ಪ್ರಕಾಶ್​ ಹುಕ್ಕೇರಿ ಸೋಲನುಭವಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Intro:ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಪ್ರಕಾಶ ಹುಕ್ಕೇರಿ ಬೆಳಗಾವಿಗೆ ಶಿಪ್ಟ ಆದರಾ?
Body:
ಚಿಕ್ಕೋಡಿ :

ಕಾರ್ಯಕರ್ತರ ಮತ್ತು ಮುಖಂಡರ ಭೇಟಿಗೆ ನಿರಾಕರಿಸುತ್ತಿರುವ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬೆಳಗಾವಿಯ ತಮ್ಮ ನಿವಾಸದಲ್ಲಿ ತಂಗಿದ್ದಾರೆ.

ಚಿಕ್ಕೋಡಿ ಲೋಕಸಭೆಯಲ್ಲಿ 3 ಕಾಂಗ್ರೇಸ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೇಸಗೆ ಹಿನ್ನಡೆಯಿಂದ ಆಘಾತಗೊಳಗಾದ ಹುಕ್ಕೇರಿ. ಸಚಿವ ಸತೀಶ ಜಾರಕಿಹೋಳಿ ಕ್ಷೇತ್ರವಾದ ಯಮಕನಮರಡಿಯಲ್ಲಿ ಕೂಡ ಕಾಂಗ್ರೇಸಗೆ ಹಿನ್ನಡೆಯಾಗಿದೆ.

ಕಾಂಗ್ರೇಸ ಕ್ಷೇತ್ರಗಳಲ್ಲಿ ಹಿನ್ನಡೆಯಾದ ಹಿನ್ನಲೆಯಲ್ಲಿ ತೀವ್ರ ಹತಾಶೆಗೊಂಡಿರುವ ಹುಕ್ಕೇರಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಬಾರಿ ಅಂತರದಿಂದ 1,18,877 ಮತಗಳಿಂದ ಸೋತಿರುವ ಮಾಜಿ ಸಂಸದ ಸೋಲಿಲ್ಲದ ಸರದಾರ ಪ್ರಕಾಶ ಹುಕ್ಕೇರಿ ಅವರಿಗೆ ಬಾರಿ ಮುಖಭಂಗವಾಗಿದೆ.


ಜಾರಕಿಹೋಳಿಯವರ ರಾಜಕಾರಣದಲ್ಲಿ ಬಲಿ ಯಾದರಾ ಪ್ರಕಾಶ ಹುಕ್ಕೇರಿ?

ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ೮ ವಿಧಾನಸಭೆ ಕ್ಷೇತ್ರಗಳ ಪೈಕಿ ೪ ರಲ್ಲಿ ಕಾಂಗ್ರೇಸ ಶಾಸಕರಿದ್ದಾರೆ ಆ ೪ ರಲ್ಲಿ ೩ ಕಾಂಗ್ರೇಸ್ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೇಸಗೆ ಹಿನ್ನಡೆಯಾಗಿದೆ.

ಅಥಣಿ, ಕಾಗವಾಡ, ಯಮಕನಮರಡಿಯ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದ್ದು ಈ ಮೂರೂ ಕ್ಷೇತ್ರಗಳಲ್ಲಿ ರಮೇಶ ಜಾರಕಿಹೋಳಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಈ ಪ್ರಚಾರಾರ್ಥವಾಗಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಬಲ್ಲಿಯಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಪೊಟೊ ೧ : ಪ್ರಕಾಶ ಹುಕ್ಕೇರಿ
ಪೊ ೨ : ರಮೇಶ ಜಾರಕಿಹೊಳಿ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.