ಸುಲ್ತಾನಪುರ್(ಯುಪಿ): ದೇಶದಲ್ಲಿ ಲೋಕಸಭೆ ಕಾವು ರಂಗೇರಿದ್ದು, ಈಗಾಗಲೇ ಮೊದಲ ಹಂತದ ವೋಟಿಂಗ್ ಮುಕ್ತಾಯಗೊಂಡಿದೆ. ಇದರ ಮಧ್ಯೆ ಪ್ರಚಾರ ಸಭೆ ನಡೆಸುತ್ತಿದ್ದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಮೇನಕಾ ಗಾಂಧಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಉತ್ತರಪ್ರದೇಶದ ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದ ಹಳ್ಳಿ ತುರ್ಬಾ ಖಾನಿಯಲ್ಲಿ ಮೇನಕಾ ಗಾಂಧಿ ಚುನಾವಣಾ ರಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಿಮಗೆ ಕೆಲಸ ಕೊಡಿಸುವುದಿಲ್ಲ ಎಂದಿದ್ದಾರೆ.
-
Maneka Gandhi threatening voters that she will watch booth wise votes to decide whom to be helped once she wins.
— Ravi Nair (@t_d_h_nair) April 12, 2019 " class="align-text-top noRightClick twitterSection" data="
Sakshi Maharaj says as a ‘Sanyasi’ he’ll curse people if they won’t vote for him!
BJP is a Party with a Difference 😁
pic.twitter.com/sG1X65WJ5s
">Maneka Gandhi threatening voters that she will watch booth wise votes to decide whom to be helped once she wins.
— Ravi Nair (@t_d_h_nair) April 12, 2019
Sakshi Maharaj says as a ‘Sanyasi’ he’ll curse people if they won’t vote for him!
BJP is a Party with a Difference 😁
pic.twitter.com/sG1X65WJ5sManeka Gandhi threatening voters that she will watch booth wise votes to decide whom to be helped once she wins.
— Ravi Nair (@t_d_h_nair) April 12, 2019
Sakshi Maharaj says as a ‘Sanyasi’ he’ll curse people if they won’t vote for him!
BJP is a Party with a Difference 😁
pic.twitter.com/sG1X65WJ5s
ಈಗಾಗಲೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆಗಿರುವ ಅವರು, ಚುನಾವಣೆಯಲ್ಲಿ ಮುಸ್ಲಿಂರ ಬೆಂಬಲವಿಲ್ಲದೇ ನನಗೆ ಗೆಲುವು ಕಷ್ಟ. ನೀವೂ ವೋಟ್ ಮಾಡದಿದ್ದರೆ ನನಗೆ ನೋವಾಗುವುದು. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ಕೆಲಸ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪಿಲಿಬಿಟ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೇನಕಾ ಈ ಸಲ ಆ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ತಾವೂ ಸುಲ್ತಾನ್ಪುರ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಮೇನಕಾ ಗಾಂಧಿ ಮಾತನಾಡಿರುವ ಮೂರು ನಿಮಿಷಗಳ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಪಕ್ಷಗಳು ಇದೇ ಹೇಳಿಕೆ ಇಟ್ಟುಕೊಂಡು ವಾಗ್ದಾಳಿ ನಡೆಸಿವೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚುನಾಣಾ ಆಯೋಗ ಮೇನಕಾ ಗಾಂಧಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಸುಲ್ತಾನ್ಪುರ್ ಜಿಲ್ಲಾಧಿಕಾರಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದಾರೆಂದು ಅಲ್ಲಿನ ಮುಖ್ಯ ಚುನಾವಣಾಧಿಕಾರಿ ಬಿಆರ್ ತಿವಾರಿ ತಿಳಿಸಿದ್ದಾರೆ.
ಇತ ತಮ್ಮ ಹೇಳಿಕೆ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮೇನಕಾ, ನಾನು ಆ ಅರ್ಥದಲ್ಲಿ ಹೇಳಿಕೆ ನೀಡಿಲ್ಲ. ಸುದ್ದಿಮಾಧ್ಯಮವೊಂದು ಒಂದೇ ಒಂದು ಹೇಳಿಕೆ ಕಟ್ ಮಾಡಿ ಬಿತ್ತರಿಸಿದ್ದು, ನನ್ನ ಸಂಪೂರ್ಣ ಭಾಷಣ ಕೇಳಿದವರಿಗೆ ಅದು ಅರ್ಥವಾಗುತ್ತದೆ ಎಂದಿದ್ದಾರೆ.