ETV Bharat / briefs

10 ನಿಮಿಷ ತಡವಾದ್ರೇ ಲೈನ್‌ಮ್ಯಾನ್‌ಗೆ ಹೀಗೆ ಹೊಡೆಯುವುದಾ..

author img

By

Published : Jun 5, 2019, 9:36 PM IST

10 ನಿಮಿಷ ತಡವಾಗಿದಕ್ಕೆ ಲೈನ್ ಮ್ಯಾನ್ ಗೆ ಹೀಗೆ ಹೊಡೆಯುವುದಾ...?

ಮಳೆಗಾಲದಲ್ಲಿ ಪವರ್ ಕಟ್ ಆಗುವುದು ಸಾಮಾನ್ಯ. ಆದರೆ, ತಮ್ಮ ಕೋಳಿ ಫಾರಂ ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಜಂಪ್ ಕಟ್ ಆದ ಹಿನ್ನೆಲೆಯಲ್ಲಿ ಲೈನ್‌ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ‌ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

ಚಿಕ್ಕಬಳ್ಳಾಪುರ : ಮಳೆಗಾಲದಲ್ಲಿ ಪವರ್ ಕಟ್ ಆಗುವುದು ಸಾಮಾನ್ಯ. ಆದರೆ, ತಮ್ಮ ಕೋಳಿ ಫಾರಂ ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಜಂಪ್ ಕಟ್ ಆದ ಹಿನ್ನೆಲೆ ಲೈನ್‌ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ‌ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.

ಇಂದು ಮುಂಜಾನೆ 9ರ ಸುಮಾರಿಗೆ ಗ್ರಾಮದ ನಿವಾಸಿ ಮಂಜುನಾಥ್ ತಮ್ಮ ಕೋಳಿ ಫಾರಂ ಸೇರಿದಂತೆ ಗ್ರಾಮದಲ್ಲಿ ಕರೆಂಟ್ ಇಲ್ಲದಿರುವ ಕಾರಣ ಕೆಇಬಿ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ.‌ ದೂರು ಪಡೆದ ಅಧಿಕಾರಿಗಳು ಲೈನ್‌ಮ್ಯಾನ್‌ಗೆ ತಿಳಿಸಿದ್ದಾರೆ. ಲೈನ್‌ಮ್ಯಾನ್ ಭರತ್ ಸಮಸ್ಯೆ ಸರಿಪಡಿಸಿದ್ದಾರೆ. ನಂತರ‌ ಹೋಟೆಲ್ ಬಳಿ ತಿಂಡಿತಿನ್ನುತ್ತಿದ್ದ ವೇಳೆ ಲೈನ್‌ಮ್ಯಾನ್ ಮಂಜುನಾಥ್ ಭರತ್​ಗೆ ನೀನು 24 ಗಂಟೆ ಸೇವೆ ಸಲ್ಲಿಸಬೇಕು. ತಡ ಯಾಕೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗಲಾಟೆ ತಾರಕಕ್ಕೇರಿ ಒಬ್ಬರಿಗೊಬ್ಬರು ಕೈ-ಕೈ ಮಿಲಾಯಿಸಿದ್ದಾರೆ. ಈ ವೇಳೆ ಮಂಜುನಾಥ್​ ಲೈನ್​ಮ್ಯಾನ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

10 ನಿಮಿಷ ತಡವಾಗಿದಕ್ಕೆ ಲೈನ್‌ಮ್ಯಾನ್‌ಗೆ ಹೀಗೆ ಹೊಡೆಯುವುದಾ

ಮಂಜುನಾಥ್ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ 6 ವರ್ಷದ ಹಿಂದೆ ಬೆಸ್ಕಾಂ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡು ಜೈಲು ಸೇರಿದ್ದ. ಪದೆಪದೇ ಲೈನ್ ಮ್ಯಾನ್‌ಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಿರುವ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದರೂ ಇಂಥ ಘಟನೆ ನಡೆದಿರುವುದು ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಬೇಸರವನ್ನು ತಂದಿದೆ.

ಲೈನ್‌ಮ್ಯಾನ್ ಹಾಗೂ ಬೆಸ್ಕಾಂ ಅಧಿಕಾರಿಗಳು ಮಂಜುನಾಥ್ ವಿರುದ್ಧ ಆರೋಪಿಸಿದ್ರೇ, ಬೆಸ್ಕಾಂ ಅಧಿಕಾರಿಗಳ ವಿರುದ್ದ ಮಂಜುನಾಥ್ ಆಪಾದಿಸಿದ್ದಾರೆ. ಯಾವುದೇ ಕೆಲಸವನ್ನು ಮಾಡಿಕೊಡಬೇಕಾದರೂ ಲೈನ್‌ಮ್ಯಾನ್‌ಗಳು ಲಂಚ ಪಡೆಯುತ್ತಿದ್ದಾರೆ. ಇದೇ ವಿಷಯಕ್ಕಾಗಿ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿಸಿದ್ದಾರೆ. ಸದ್ಯ ಇಬ್ಬರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಮ್ಮಗೆ ನ್ಯಾಯ ದೊರಕಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮಳೆಗಾಲದಲ್ಲಿ ಪವರ್ ಕಟ್ ಆಗುವುದು ಸರ್ವೆ ಸಾಮಾನ್ಯ ಆದರೆ ತನ್ಮ ಕೋಳಿ ಪಾರ್ಮ್ ಹಾಗೂ ಗ್ರಾಮಕ್ಕೆ ಸಂಭಂದಿಸಿದ ಜಂಪ್ ಕಟ್ ಆದ ಹಿನ್ನೆಲೆ ಲೈನ್ ಮ್ಯಾನ್ ಗೆ ಹಿಗ್ಗಾಮುಗ್ಗಾ ಥಳಿಸಿದ‌ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹಿರೇಕಟ್ಟಿಗೆನಹಳ್ಳಿ ಗ್ರಾಮದಲ್ಲಿ‌ ನಡೆದಿದೆ.


Body:ಇಂದು ಮುಂಜಾನೆ 9 ರ ಸಮಯದಲ್ಲಿ ಗ್ರಾಮದ ನಿವಾಸಿ ಮಂಜುನಾಥ್ ತಮ್ಮ ಕೋಳಿ ಪಾರಂ ಸೇರಿದಂತೆ ಗ್ರಾಮದಲ್ಲಿ ಕರೆಂಟ್ ಇಲ್ಲದಿರುವ ಕಾರಣ ಕೆಐಬಿ ಕಛೇರಿಗೆ ಕರೆ ಮಾಡಿ ತಿಳಿಸಿದ್ದಾನೆ. ಇನ್ನೂ‌ ದೂರು ಪಡೆದ ಅಧಿಕಾರಿಗಳು ಲೈನ್‌ಮ್ಯಾನ್ ಗೆ ತಿಳಿಸಿದ್ದು ನಂತರ ಲೈನ್ ಮ್ಯಾನ್ ಭರತ್ ಸ್ಥಳಕ್ಕೆ ಧಾವಿಸಿ ಸರಿಪಡಿಸಿದ್ದಾನೆ. ನಂತರ‌ ಹೋಟಲ್ ಬಳಿ ತಿಂಡಿ ಸವಿಯುತ್ತಿದ್ದ ವೇಳೆ ಮಂಜುನಾಥ್ ಲೈನ್ ಮ್ಯಾನ್ ಬಳಿ ಧಾವಿಸಿ ನೀನು 24 ಗಂಟೆ ಸೇವೆ ಸಲ್ಲಿಸಬೇಕು ತಡ ಯಾಕೆ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಇನ್ನೂ ಗಲಾಟೆ ತಾರಕಕ್ಕೇರಿದ್ದು ಇಬ್ಬರ ನಡುವೆ ಗಲಾಟೆ ಶುರುವಾಗಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.


ಇನ್ನೂ ಗ್ರಾಮದ ನಿವಾಸಿಯಾದ ಮಂಜುನಾಥ್ ಪೋಸ್ಟ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದು ಕಳೆದ 6 ವರ್ಷದ ಹಿಂದೆ ಬೆಸ್ಕಾಂ ಅಧಿಕಾರಿಗಳ ಜೊತೆ ಕಿರಿಕ್ ಮಾಡಿಕೊಂಡು ಜೈಲು ಸೇರಿದ್ದು ನಂತರ ಬಿಡುಗಡೆಯಾಗಿದ್ದಾನೆ.ಸದ್ಯ ಈಗ ಮತ್ತೇ ಕಿರಿಕ್ ಮಾಡಿಕೊಂಡು ಲೈನ್ ಮ್ಯಾನ್ ಭರತ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಇನ್ನೂ ಪದೇ ಪದೇ ಲೈನ್ ಮ್ಯಾನ್ ಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಿರುವ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸಿದರು ಇಂತಹ ಘಟನೆ ನಡೆದಿರುವುದು ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗೆ ಬೇಸರವನ್ನು ತಂದಿದೆ.


ಇನ್ನೂ ಇದು ಲೈನ್ ಮ್ಯಾನ್ ಹಾಗೂ ಬೆಸ್ಕಾಂ ಅಧಿಕಾರಿಗಳ ದೂರಾದರೆ ಗ್ರಾಮದ ನಿವಾಸಿ ಮಂಜುನಾಥ್ ಬೆಸ್ಕಾಂ ಅಧಿಕಾರಿಗಳ ವಿರುದ್ದ ದೂರಿದ್ದಾರೆ.ಯಾವುದೇ ಕೆಲಸವನ್ನು ಮಾಡಿಕೊಡಬೇಕಾದರು ಲೈನ್ ಮ್ಯಾನ್ ಗಳು ಲಂಚಪಡೆಯುತ್ತಿದ್ದು ಇದೇ ವಿಷಯವನ್ನು ಕೇಳಿದಾಗ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿಸಿದ್ದಾನೆ. ಸದ್ಯ ಇಬ್ಬರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಮ್ಮಗೆ ನ್ಯಾಯದೊರಕಿಸಿಕೊಡಿ ಎಂದು ಠಾಣೆಯ ಮೆಟ್ಟಿಲೇರಿದ್ದಾರೆ.

ಸದ್ಯ ಈ ಪ್ರಕರಣ ಚಿಂತಾಮಣಿ ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.




Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.