ETV Bharat / briefs

ನೀತಿ ಸಂಹಿತೆ ಉಲ್ಲಂಘನೆ: ಮನೇಕಾ ಗಾಂಧಿ, ಅಜಮ್​ ಖಾನ್​​ಗೆ ಬಿಸಿ ಮುಟ್ಟಿಸಿದ ಆಯೋಗ

author img

By

Published : Apr 15, 2019, 11:15 PM IST

ಮನೇಕಾ ಗಾಂಧಿ, ಅಜಮ್​ ಖಾನ್

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಮತ್ತಿಬ್ಬರು ರಾಜಕೀಯ ನಾಯಕರಿಗೆ ಚುನಾವಣಾ ಆಯೋಗ ಶಾಕ್ ನೀಡಿದೆ.

ನವದೆಹಲಿ: ಚುನಾವಣಾ ಪ್ರಚಾರದ ವೇಳೆ ದ್ವೇಷಮಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಇನ್ನಿಬ್ಬರು ಪ್ರಮುಖ ನಾಯಕರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.

ಸುಲ್ತಾನ್​ಪುರದಲ್ಲಿ ನಡೆದ ಪ್ರಚಾರದ ವೇಳೆ ಬಿಜೆಪಿ ನಾಯಕಿ ಹಾಗೂ ಪಿಲಿಭಿಟ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ನೀತಿ ಸಂಹಿತೆ ಉಲ್ಲಂಘಿಸಿದ ಪರಿಣಾಮ 48 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ಆಯೋಗ ನಿಷೇಧಿಸಿದೆ. ಈ ಆದೇಶ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಅನ್ವಯವಾಗಲಿದೆ.

  • Election Commission bars Union Minister and BJP leader Maneka Gandhi from election campaigning for 48 hours starting from 10 am tomorrow, for violating Model Code of Conduct during her election campaign held in Sultanpur. #LokSabhaElections2019 pic.twitter.com/XIFzCm2pQC

    — ANI UP (@ANINewsUP) April 15, 2019 " class="align-text-top noRightClick twitterSection" data=" ">

ಸಂಬಂಧಿತ ಸುದ್ದಿ:

ದ್ವೇಷಪೂರಿತ ಭಾಷಣ: ಯೋಗಿ ಆದಿತ್ಯನಾಥ್​ ಹಾಗೂ ಮಾಯಾವತಿಗೆ ಶಾಕ್​ ನೀಡಿದ ಆಯೋಗ

ಯುಪಿಯ ರಾಮ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಕಾರಣದಿಂದ ಸಮಾಜವಾದಿ ಪಾರ್ಟಿ ನಾಯಕ ಅಜಮ್​ ಖಾನ್​​ಗೂ ಆಯೋಗ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮುಂದಿನ 72 ಗಂಟೆಗಳ ಕಾಲ ಅಜಮ್​ ಖಾನ್​ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ಆಯೋಗ ಆದೇಶಿಸಿದೆ.

  • Election Commission bars Samajwadi Party (SP) leader Azam Khan from election campaigning for 72 hours starting from 10 am tomorrow, for violating Model Code of Conduct during his election campaign held in Rampur. #LokSabhaElections2019 pic.twitter.com/a9GJl385Kk

    — ANI (@ANI) April 15, 2019 " class="align-text-top noRightClick twitterSection" data=" ">
Intro:Body:

ನೀತಿ ಸಂಹಿತೆ ಉಲ್ಲಂಘನೆ: ಮನೇಕಾ ಗಾಂಧಿ, ಅಜಮ್​ ಖಾನ್​​ಗೆ ಬಿಸಿ ಮುಟ್ಟಿಸಿದ ಆಯೋಗ



ನವದೆಹಲಿ: ಚುನಾವಣಾ ಪ್ರಚಾರದ ವೇಳೆ ದ್ವೇಷಪೂರಿತ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬಳಿಕ ಇನ್ನಿಬ್ಬರು ಪ್ರಮುಖ ನಾಯಕರಿಗೆ ಚುನಾವಣಾ ಆಯೋಗ ಬಿಸಿ ಮುಟ್ಟಿಸಿದೆ.



ಸುಲ್ತಾನ್​ಪುರದಲ್ಲಿ ನಡೆದ ಪ್ರಚಾರದ ವೇಳೆ ಬಿಜೆಪಿ ನಾಯಕಿ ಹಾಗೂ ಫಿಲಿಭಿಟ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮನೇಕಾ ಗಾಂಧಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪರಿಣಾಮ 48 ಗಂಟೆಗಳ ಕಾಲ ಚುನಾವಣಾ ಪ್ರಚಾರವನ್ನು ಆಯೋಗ ನಿಷೇಧಿಸಿದೆ. ಈ ಆದೇಶ ನಾಳೆ ಬೆಳಗ್ಗೆ 10 ಗಂಟೆಯಿಂದ ಅನ್ವಯವಾಗಲಿದೆ.



ಯುಪಿಯ ರಾಮ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಕಾರಣದಿಂದ ಸಮಾಜವಾದಿ ಪಾರ್ಟಿ ನಾಯಕ ಅಜಮ್​ ಖಾನ್​​ಗೂ ಆಯೋಗ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ. ನಾಳೆ ಬೆಳಗ್ಗೆ ಹತ್ತು ಗಂಟೆಯಿಂದ ಮುಂದಿನ 72 ಗಂಟೆಗಳ ಕಾಲ ಅಜಮ್​ ಖಾನ್​ ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಬಾರದು ಎಂದು ಆಯೋಗ ಆದೇಶಿಸಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.