ETV Bharat / bharat

ಕಾರಿನಲ್ಲಿ ಬೆಂಕಿ: ಇಬ್ಬರು ಮಕ್ಕಳು ಸಜೀವ ದಹನ

author img

By ETV Bharat Karnataka Team

Published : Dec 19, 2023, 12:57 PM IST

fire
ಬೆಂಕಿ

ಬಿಹಾರ ರಾಜ್ಯದಲ್ಲಿ ಇಬ್ಬರು ಮಕ್ಕಳು ಕಾರಿನಲ್ಲೇ ಬೆಂಕಿಯಿಂದ ಸುಟ್ಟು ಕರಕರಲಾಗಿರುವ ಘಟನೆ ನಡೆದಿದೆ.

ಪಾಟ್ನಾ(ಬಿಹಾರ): ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ಗೌರಿಚಕ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊಹ್ಗಿ ರಾಂಪುರ ತಾಡ್ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ಮೃತ ಮಕ್ಕಳನ್ನು ಸಂಜಿತ್ ಕುಮಾರ್​ ಎಂಬುವರ ಪುತ್ರ ರಾಜಪಾಲ್ (7) ಮತ್ತು ಸುಕುನ್ ಕುಮಾರ್ ಅಲಿಯಾಸ್ ತುನ್ನಾ ಅವರ ಪುತ್ರಿ ಶ್ರೀಸ್ಟಿ (6) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಘಟನೆಯಲ್ಲಿ ಸುಟ್ಟು ಕರಕಲಾದ ಕಾರು ಮೃತ ರಾಜಪಾಲ್ ಅವರ ತಂದೆ ಸಂಜಿತ್ ಕುಮಾರ್​ ಅವರಿಗೆ ಸೇರಿದ್ದು, ಅವರು ಸೋಮವಾರ ಕಾರಿನಿಂದ ಇಳಿದು ಡೋರ್​ ಲಾಕ್​ ಮಾಡದೇ ಮನೆಯೊಳಗೆ ಹೋಗಿದ್ದರು. ಹೀಗಾಗಿ ಮಕ್ಕಳು ಆಟವಾಡುತ್ತ ಕಾರಿನೊಳಗೆ ತೆರಳಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮಕ್ಕಳು ಆಟವಾಡುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯಿಂದಾಗಿ ಮಕ್ಕಳು ಒಳಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಮಕ್ಕಳನ್ನು ರಕ್ಷಿಸಲು ಕುಟುಂಬದವರಿಗೆ ತಡವಾಗಿತ್ತು. ಬಳಿಕ ಕಾರಿನ ಗಾಜಿನ ಕಿಟಕಿಗಳನ್ನು ಒಡೆದು ಮಕ್ಕಳನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಇಬ್ಬರೂ ಕಂದಮ್ಮಗಳು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕಾರಿನಲ್ಲಿ ಇತ್ತೀಚೆಗೆ ಸಿಎನ್‌ಜಿ ಸಿಲಿಂಡರ್ ಅಳವಡಿಸಲಾಗಿತ್ತು. ಘಟನೆಯಲ್ಲಿ ಸಿಲಿಂಡರ್ ಕೂಡ ಬೆಂಕಿಗೆ ಆಹುತಿಯಾಗಿದೆ.

ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಮೃತ ಮಕ್ಕಳ ಪೋಷಕರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಠಾಣಾಧಿಕಾರಿ ಕೃಷ್ಣ ಕುಮಾರ್ ಹೇಳಿದ್ದಾರೆ.

ಪ್ರತ್ಯೇಕ ಪ್ರಕರಣ: ನವದೆಹಲಿ/ಗುಡಿಸಲಿಗೆ ಬೆಂಕಿ; ಒಂದು ಸಾವು: ಗುಡಿಸಲುಗಳಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವರು ಸಾವನ್ನಪ್ಪಿದರೆ, ಇನ್ನೋರ್ವ ವೃದ್ಧ ವ್ಯಕ್ತಿಗೆ ಗಾಯಗಳಾಗಿರುವ ಘಟನೆ ಪೂರ್ವ ದೆಹಲಿಯಲ್ಲಿ ನಡೆದಿತ್ತು. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ವೃದ್ಧ ವ್ಯಕ್ತಿಯ ದೇಹ ಶೇ.30ರಷ್ಟು ಸುಟ್ಟಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಸೋಮವಾರ ರಾತ್ರಿ 8:00 ಗಂಟೆಗೆ ಘಟನೆ ಬಗ್ಗೆ ಕರೆ ಬಂದಿದ್ದು, 3 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ 8 ಗಂಟೆಗೆ ಗುಡಿಸಲಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಶಕರ್‌ಪುರ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ತಕ್ಷಣ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ತೆರಳಿದ್ದರು. ಬೆಂಕಿಗೆ 3 ಗುಡಿಸಲು ಆಹುತಿಯಾಗಿದ್ದವು. ಘಟನೆಯಲ್ಲಿ ವೃದ್ಧ ಸಿಲುಕಿಕೊಂಡಿರುವುದು ತಿಳಿದು ಅವರ ರಕ್ಷಣೆ ಮಾಡಲಾಯಿತು. ಗುಡಿಸಲ ಪಕ್ಕ ವಾಹನದ ಟೈರ್‌ಗಳು ಇದ್ದುದರಿಂದ ಬೆಂಕಿ ಹರಡಿದೆ. ಗುಡಿಸಲಿನೊಳಗೆ ವೃದ್ಧ ನಾಥು ಲಾಲ್ (62) ಮಲಗಿದ್ದರು. ಪರಿಣಾಮ ಅವರಿಗೆ ಗಾಯಗಳಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ರಕ್ಷಿಸಿ ಸಿಎಟಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿ ದಾಕಲಿಸಲಾಗಿದೆ. ಆದರೆ ಬೆಂಕಿಯನ್ನು ನಂದಿಸಿದ ಬಳಿಕ ಸುಟ್ಟ ಗುಡಿಸಲ ಒಳಗೆ ಕರಕಲಾದ ಮೃತದೇಹ ದೊರಕಿದೆ. ಈ ದೇಹದ ಗುರುತು ಪತ್ತೆ ಆಗಬೇಕಿದೆ. ಮೃತದೇಹವನ್ನು ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.