ETV Bharat / bharat

ತಮಿಳುನಾಡು ವಿಧಾನಸಭೆಯಲ್ಲಿ 'ಕರ್ನಾಟಕ ರತ್ನ' ಪುನೀತ್​ ರಾಜಕುಮಾರ್​ಗೆ ನಮನ

author img

By

Published : Jan 6, 2022, 1:04 PM IST

Updated : Jan 6, 2022, 1:38 PM IST

Tribute to puneeth Rajkumar in Tamil Nadu Legislative Assembly
ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್​ಗೆ ನಮನ

ಇಂದು ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ದಿವಂಗತ ನಟ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ಗೆ ನಮನ ಸಲ್ಲಿಸಲಾಗಿದೆ.

ಚೆನ್ನೈ (ತಮಿಳುನಾಡು): ಕನ್ನಡ ಚಿತ್ರರಂಗದ ಸೂಪರ್​ಸ್ಟಾರ್​, ಕರ್ನಾಟಕ ರತ್ನ ಪುನೀತ್​ ರಾಜ​ಕುಮಾರ್​​ ನಮ್ಮನ್ನಗಲಿ ಅನೇಕ ದಿನಗಳು ಕಳೆದರೂ ಅವರ ನೆನಪು ಮಾತ್ರ ಮಾಸುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್ 29 ರಂದು ಸಂಭವಿಸಿದ ಅವರ ಅಕಾಲಿಕ ಮರಣಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು. ಇದೀಗ ತಮಿಳುನಾಡು ವಿಧಾನಸಭೆಯಲ್ಲಿ ಅಪ್ಪುವಿಗೆ ನಮನ ಸಲ್ಲಿಸಲಾಗಿದೆ.

ನಿನ್ನೆಯಿಂದ ತಮಿಳುನಾಡು ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಕೋವಿಡ್​ ಹೆಚ್ಚಳ ಕಾರಣ ನಾಳೆ ಅಂದರೆ ಕೇವಲ ಮೂರೇ ದಿನಕ್ಕೆ ಕಲಾಪ ಮುಗಿಸಲಾಗುತ್ತಿದೆ. ಇಂದಿನ ಕಲಾಪದ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ಸಾವಿಗೆ ಸಂತಾಪ​ ಸೂಚಿಸಿ ಗಮನ ಸೆಳೆದರು.

ಇದನ್ನೂ ಓದಿ: ಮಗುವಿಗೆ ಪುನೀತ್ ರಾಜಕುಮಾರ್​​ ಹೆಸರಿಟ್ಟ ಕಲಬುರಗಿ ದಂಪತಿ

ಇದೇ ವೇಳೆ ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 12 ರಕ್ಷಣಾ ಸಿಬ್ಬಂದಿ ಹಾಗೂ ಇತ್ತೀಚೆಗೆ ನಿಧನರಾದ ತಮಿಳುನಾಡು ಮಾಜಿ ರಾಜ್ಯಪಾಲ ಕೆ. ರೋಸಯ್ಯ, ಕಮ್ಯುನಿಸ್ಟ್ ನಾಯಕ ವಿ. ದುರೈಮಣಿಕಂ, ಮಾನವ ಹಕ್ಕುಗಳ ಹೋರಾಟಗಾರ ಡೆಸ್ಮಂಡ್ ಟುಟು ಅವರಿಗೂ ನಮಿಸಲಾಯಿತು.

Last Updated :Jan 6, 2022, 1:38 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.