ETV Bharat / bharat

ಮೂರು ಕೃಷಿ ಕಾನೂನುಗಳು ರದ್ದು: ಪ್ರಧಾನಿಗೆ ಹಿಂದಿಯಲ್ಲೇ ಪ್ರಿಯಾಂಕಾ ಕೌಂಟರ್​ ಅಟ್ಯಾಕ್​

author img

By

Published : Nov 20, 2021, 12:08 PM IST

Updated : Nov 20, 2021, 2:23 PM IST

ಮೂರು ಕೃಷಿ ಕಾನೂನುಗಳನ್ನು (Three farm laws) ರದ್ದುಗೊಳಿಸಿದ ಬಳಿಕ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Congress leader Priyanka Gandhi Vadra) ಟ್ವೀಟ್​ ವಾರ್​ ನಡೆಸಿದ್ದರು.

Three farm laws  Congress leader Priyanka Gandhi Vadra  PM Narendra Modi  Congress General Secretary Priyanka Gandhi  DGP and IG conference in Lucknow  cancel the three farm laws  ಮೂರು ಕೃಷಿ ಕಾನೂನುಗಳು  ಮೂರು ಕೃಷಿ ಕಾನೂನುಗಳು ರದ್ದು  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ  ಧಾನಿ ನರೇಂದ್ರ ಮೋದಿ  ಲಖನೌದಲ್ಲಿ ಡಿಜಿಪಿ ಮತ್ತು ಐಜಿ ಸಮಾವೇಶ
ಪ್ರಧಾನಿ ಮೋದಿ ಕೌಂಟರ್​ ಅಟ್ಯಾಕ್​ ಮಾಡಿದ ಪ್ರಿಯಾಂಕಾ ಗಾಂಧಿ

ನವದೆಹಲಿ: ಮೂರು ಕೃಷಿ ಕಾನೂನುಗಳನ್ನು (Three farm laws) ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರ ಮುಂಬರುವ ಚುನಾವಣೆಯಲ್ಲಿ ಸೋಲು ಅನುಭವಿಸುವ ಸುಳಿವು ಅರಿತು ಇದ್ದಕ್ಕಿದ್ದಂತೆ ದೇಶದ ವಾಸ್ತವವನ್ನು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Congress leader Priyanka Gandhi Vadra) ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಹರಿಹಾಯ್ದಿದ್ದಾರೆ.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು (Three farm laws) ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ ನಂತರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ, ನರೇಂದ್ರ ಮೋದಿ ಜೀ, ಪ್ರತಿಭಟನೆ ವೇಳೆ 600 ರೈತರು ಹುತಾತ್ಮರಾದರು, 350 ದಿನಗಳಿಗಿಂತ ಹೆಚ್ಚು ದಿನ ಹೋರಾಟ, ನಿಮ್ಮ ಸಚಿವರ ಮಗ ರೈತರನ್ನು ತುಳಿದು ಸಾಯಿಸಿದರೂ ಸಹ ನೀವು ಕಾಳಜಿ ವಹಿಸಲಿಲ್ಲ. ನಿಮ್ಮ ಪಕ್ಷದ ನಾಯಕರು ರೈತರನ್ನು ಅವಮಾನಿಸಿದ್ದಾರೆ. ಅವರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಗೂಂಡಾಗಳು, ದುಷ್ಕರ್ಮಿಗಳು ಎಂದು ಕರೆದಿದ್ದಾರೆ. ನೀವೇ ಅವರನ್ನು 'ಆಂದೋಲನಜೀವಿ' ಎಂದು ಕರೆದಿದ್ದೀರಿ. ಲಾಠಿಯಿಂದ ಹೊಡೆದಿದ್ದೀರಿ. ಅವರನ್ನು ಬಂಧಿಸಿದ್ದೀರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Congress General Secretary Priyanka Gandhi) ಟೀಕಿಸಿದ್ದಾರೆ.

Three farm laws  Congress leader Priyanka Gandhi Vadra  PM Narendra Modi  Congress General Secretary Priyanka Gandhi  DGP and IG conference in Lucknow  cancel the three farm laws  ಮೂರು ಕೃಷಿ ಕಾನೂನುಗಳು  ಮೂರು ಕೃಷಿ ಕಾನೂನುಗಳು ರದ್ದು  ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ  ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ  ಧಾನಿ ನರೇಂದ್ರ ಮೋದಿ  ಲಖನೌದಲ್ಲಿ ಡಿಜಿಪಿ ಮತ್ತು ಐಜಿ ಸಮಾವೇಶ
ಪ್ರಧಾನಿ ಮೋದಿ ಕೌಂಟರ್​ ಅಟ್ಯಾಕ್​ ಮಾಡಿದ ಪ್ರಿಯಾಂಕಾ ಗಾಂಧಿ

ಈಗ ಚುನಾವಣೆಯಲ್ಲಿ ಸೋಲು ಅನುಭವಿಸುವ ಸುಳಿವು ಅರಿತು ನೀವು ಈ ದೇಶದ ವಾಸ್ತವವನ್ನು ಇದ್ದಕ್ಕಿದ್ದಂತೆ ಅರಿತುಕೊಂಡಿದ್ದೀರಿ. ಈ ದೇಶವನ್ನು ರೈತರಿಂದ ನಿರ್ಮಿಸಲಾಗಿದೆ. ಇದು ರೈತರ ದೇಶ. ಅವರು ದೇಶದ ನಿಜವಾದ ರಕ್ಷಕರು. ಆದರೆ ರೈತರ ಹಿತಾಸಕ್ತಿಗಳನ್ನು ತುಳಿಯುವ ಮೂಲಕ ದೇಶವನ್ನು ನಾಶಪಡಿಸಲಾಗಿದೆ ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಮೋದಿ ವಿರುದ್ಧ ಹಿಂದಿಯಲ್ಲಿ ಟ್ವೀಟ್ ವಾರ್​ ಮಾಡಿದರು.

ಲಖನೌದಲ್ಲಿ ನಡೆಯಲಿರುವ ಡಿಜಿಪಿ ಮತ್ತು ಐಜಿ ಸಮಾವೇಶದಲ್ಲಿ (DGP and IG conference in Lucknow) ಪ್ರಧಾನಿ ಮೋದಿ (PM Modi) ಭಾಗವಹಿಸಬಾರದು. ಅದೇ ಕುರಿತು ಅವರಿಗೆ ಪತ್ರ ಬರೆದಿದ್ದೇನೆ. ಅವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಅವರು ಲಖಿಂಪುರ ಖೇರಿ ಪ್ರಕರಣದಲ್ಲಿ ಆರೋಪಿಯ ತಂದೆ ಗೃಹ ಸಚಿವ ಅಜಯ್ ಮಿಶ್ರಾ ಜೊತೆ ವೇದಿಕೆ ಹಂಚಿಕೊಳ್ಳಬಾರದು ಎಂದು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ವಾದ್ರಾ ಆಗ್ರಹಿಸಿದ್ದಾರೆ.

Last Updated :Nov 20, 2021, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.