ETV Bharat / bharat

ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷನ ಹತ್ಯೆ: ದೂರು ನೀಡಿದ ಮೃತರ ಪತ್ನಿ ಶೀಲಾ ಶೇಖಾವತ್

author img

By ETV Bharat Karnataka Team

Published : Dec 7, 2023, 9:31 AM IST

Updated : Dec 7, 2023, 10:24 AM IST

Sukhdev Singh Gogamedi Murder Case
ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಹತ್ಯೆ: ಪೊಲೀಸ್ ಠಾಣೆ ದೂರು ನೀಡಿದ ಮೃತರ ಪತ್ನಿ ಶೀಲಾ ಶೇಖಾವತ್

Sukhdev Singh Gogamedi Murder Case: ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆ ಕುರಿತು ಪತ್ನಿ ಶೀಲಾ ಶೇಖಾವತ್ ಶ್ಯಾಮ್ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಡಿಜಿಪಿ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ. ಪ್ರಕರಣ ದಾಖಲಾದ ಬಳಿಕ ಪತ್ನಿ ಶೀಲಾ ಶೇಖಾವತ್, ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಘೋಷಿಸಿದ್ದಾರೆ.

ಜೈಪುರ (ರಾಜಸ್ಥಾನ): ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೇಡಿ ಹತ್ಯೆಗೆ ಸಂಬಂಧಿಸಿದಂತೆ ಗೊಗಮೇಡಿ ಅವರ ಪತ್ನಿ ಶೀಲಾ ಶೇಖಾವತ್ ಅವರು ನೀಡಿದ ದೂರಿನ ಅನ್ವಯ ಶ್ಯಾಮ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.

  • #WATCH | Jaipur: Wife of the national president of Rashtriya Rajput Karni Sena, Sukhdev Singh Gogamedi, Sheela Shekhawat said, "...Rajasthan bandh has to be observed tomorrow also. I call upon the Rajputs of the entire country to come here in maximum numbers because today Sukhdev… pic.twitter.com/cLNme0GsXx

    — ANI MP/CG/Rajasthan (@ANI_MP_CG_RJ) December 6, 2023 " class="align-text-top noRightClick twitterSection" data=" ">

ಶೀಲಾ ಶೇಖಾವತ್ ಸಲ್ಲಿಸಿರುವ ದೂರಿನಲ್ಲಿ ಮಾಜಿ ಸಿಎಂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಡಿಜಿಪಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಇದೇ ವೇಳೆ, ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶೀಲಾ ಶೇಖಾವತ್ ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಘೋಷಿಸಿದರು. ಆಡಳಿತದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಶ್ಯಾಮ್ ನಗರ ಪೊಲೀಸ್ ಠಾಣಾಧಿಕಾರಿ ಮನೀಶ್ ಗುಪ್ತಾ ಮತ್ತು ಬೀಟ್ ಕಾನ್​​ಸ್ಟೇಬಲ್​​​​​​​ನನ್ನು ಅಮಾನತುಗೊಳಿಸಲಾಗಿದೆ. ಗೊಗಮೆಡಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅವರ ಅಂತ್ಯಕ್ರಿಯೆ ಗುರುವಾರ ಅವರ ಹುಟ್ಟೂರು ಗೋಗಮೇಡಿಯಲ್ಲಿ ನಡೆಯಲಿದೆ.

''ಈ ಹತ್ಯೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸಲು ಒಪ್ಪಿಗೆ ನೀಡಲಾಗಿದೆ'' ಶಾಸಕ ಮನೋಜ್ ನ್ಯಾಂಗಲಿ ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ರಜಪೂತ ಸಮುದಾಯದಿಂದ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಮಹಿಪಾಲ್ ಸಿಂಗ್ ಮಕ್ರಾನಾ, ಕರ್ಣಿ ಸೇನೆಯ ಪದಾಧಿಕಾರಿಗಳು ಮತ್ತು ಪೊಲೀಸರ ನಡುವಿನ ಮಾತುಕತೆಯಲ್ಲಿ ಎಲ್ಲ ಬೇಡಿಕೆಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಗೊಗಮೇಡಿ ಅವರ ಪತ್ನಿ ಶೀಲಾ ಶೇಖಾವತ್ ಪ್ರಕಟಿಸಿದರು.

  • #WATCH | Jaipur: Mortal remains of the national president of Rashtriya Rajput Karni Sena, Sukhdev Singh Gogamedi being taken from Metro Mass hospital to SMS Hospital, where a post-mortem will be done.

    The last rites of Sukhdev Singh Gogamedi, who was shot dead on Tuesday, will… pic.twitter.com/FvDP0Zmj8v

    — ANI MP/CG/Rajasthan (@ANI_MP_CG_RJ) December 6, 2023 " class="align-text-top noRightClick twitterSection" data=" ">

''ಗೊಗಾಮೆಡಿ ಅವರ ಪತ್ನಿ ಶೀಲಾ ಶೇಖಾವತ್ ಅವರು 14 ಫೆಬ್ರವರಿ 2023 ರಂದು, ಪಂಜಾಬ್ ಪೊಲೀಸರು ರಾಜಸ್ಥಾನದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಮಾಹಿತಿಯ ಹೊರತಾಗಿಯೂ, ರಾಜ್ಯದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಜವಾಬ್ದಾರಿಯುತ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನನ್ನ ಪತಿಗೆ ಭದ್ರತೆ ಒದಗಿಸಲಿಲ್ಲ" ಎಂದು ಎಫ್‌ಐಆರ್‌ನಲ್ಲಿ ಆರೋಪ ಮಾಡಲಾಗಿದೆ.

ಹತ್ಯೆ ಪ್ರಕರಣದ ಮಾಹಿತಿ: ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಮಂಗಳವಾರ ಹತ್ಯೆ ಮಾಡಲಾಗಿತ್ತು. ಹತ್ಯೆಯ ನಂತರ ಮೃತದೇಹವನ್ನು ಮಾನಸ ಸರೋವರದಲ್ಲಿರುವ ಮೆಟ್ರೋ ಮಾಸ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯ ಹೊರಗೆ ಹೆಚ್ಚಿನ ಸಂಖ್ಯೆಯ ರಜಪೂತ ಸಮುದಾಯದ ಜನರು ಧರಣಿ ಕುಳಿತಿದ್ದರು. ಹತ್ಯೆಯ ನಂತರ ರಜಪೂತ ಸಮುದಾಯದ ಪರವಾಗಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. ಜೊತೆಗೆ ಬುಧವಾರ ರಾಜಸ್ಥಾನ ಬಂದ್​ಗೆ ಕರೆ ನೀಡಿ, ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ಕಂಡುಬಂದವು. ಈ ಮಧ್ಯೆ ಆಡಳಿತದೊಂದಿಗೆ ನಿರಂತರ ಮಾತುಕತೆಯ ನಂತರ ಬುಧವಾರ ರಾತ್ರಿ ಕುಟುಂಬ ಸದಸ್ಯರು ಮತ್ತು ಆಡಳಿತದ ನಡುವೆ ಒಮ್ಮತಕ್ಕೆ ಬರಲಾಯಿತು. ಒಮ್ಮತಕ್ಕೆ ಬಂದ ನಂತರ ಪ್ರತಿಭಟನೆ ಅಂತ್ಯಗೊಳಿಸುವುದಾಗಿ ಘೋಷಿಸಿದ್ದಾರೆ. ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದೆ. ಪಾರ್ಥಿವ ಶರೀರವನ್ನು ಇಂದು (ಗುರುವಾರ) ಬೆಳಗ್ಗೆ ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು.

  • Jaipur: Sukhdev Singh Gogamedi, the national president of Rashtriya Rajput Karni Sena murder | The protest has come to an end, and a consensus has been made. Shyam Nagar Police Station SHO and beat constable have been suspended. The last rites will be performed tomorrow morning.

    — ANI MP/CG/Rajasthan (@ANI_MP_CG_RJ) December 6, 2023 " class="align-text-top noRightClick twitterSection" data=" ">

ಬೇಡಿಕೆಗಳಿಗೆ ಒಪ್ಪಿಗೆ ನೀಡಿದ ಆಡಳಿತ:

  • ಕೊಲೆ ಮಾಡಿದ ಆರೋಪಿಯನ್ನು (ಶೂಟರ್) ಸ್ಥಳೀಯ ಪೊಲೀಸರು ತಡಮಾಡದೇ ಬಂಧಿಸಲು ಕ್ರಮ.
  • ದರೋಡೆಕೋರರಾದ ​​ಲಾರೆನ್ಸ್ ವಿಷ್ಣೋಯ್, ರೋಹಿತ್ ಗೋಡಾರಾ ಮತ್ತು ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಕ್ರಮಕ್ಕಾಗಿ ತನಿಖಾ ಕಡತದಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣವನ್ನು ಎನ್‌ಐಎ ಸಂಸ್ಥೆಯಿಂದ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗುವುದು.
  • ನಿರಂತರ ಬೆದರಿಕೆಗಳ ನಡುವೆಯೂ ಸುಖದೇವ್ ಸಿಂಗ್ ಗೊಗಮೆಡಿ ಅವರಿಗೆ ಪೊಲೀಸ್ ರಕ್ಷಣೆ ನೀಡದ ಜವಾಬ್ದಾರಿಯುತ ಅಧಿಕಾರಿಗಳ ಪಾತ್ರವನ್ನು ಬಯಲಿಗೆಳೆಯಲು ರಾಜಸ್ಥಾನ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
  • ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯ (ವಿಶೇಷ ನ್ಯಾಯಾಲಯ NIA ಪ್ರಕರಣ) ನಡೆಸುತ್ತದೆ. ಘಟನೆಯ ಮೊದಲು ಮತ್ತು ನಂತರ ನಿರ್ಲಕ್ಷ್ಯದ ಬಗ್ಗೆ ಇಲಾಖಾ ವಿಚಾರಣೆ ನಡೆಸಲಾಗುವುದು. ಸುಖದೇವ್ ಸಿಂಗ್ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಮತ್ತು ಅವರಿಗೆ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
  • ಸುಖದೇವ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಜೈಪುರದ ಪೊಲೀಸ್ ಕಮಿಷನರೇಟ್ ಜೈಪುರ ಮತ್ತು ಹನುಮಾನ್‌ಗಢ ಜಿಲ್ಲೆಯ ಜಿಲ್ಲಾ ಪೊಲೀಸ್ ಹನುಮಾನ್‌ಗಢದಿಂದ ಹೆಚ್ಚಿನ ಭದ್ರತೆ ಒದಗಿಸಲಾಗುವುದು.
  • ಸುಖದೇವ್ ಸಿಂಗ್ ಅವರ ಜೈಪುರ ನಿವಾಸಿ ಕುಟುಂಬದ ಸದಸ್ಯರಿಗೆ ಶಸ್ತ್ರಾಸ್ತ್ರ ಪರವಾನಗಿಯ ಅರ್ಜಿಯನ್ನು ಸ್ವೀಕರಿಸಿದ 10 ದಿನಗಳಲ್ಲಿ ಜೈಪುರ ಕಮಿಷನರೇಟ್ ಅನುಮೋದಿಸುತ್ತದೆ.
  • ಈ ಪ್ರಕರಣದ ಎಲ್ಲ ಸಾಕ್ಷಿಗಳಿಗೆ ಜೈಪುರ ಕಮಿಷನರೇಟ್ ಅಥವಾ ಸಂಬಂಧಪಟ್ಟ ಜಿಲ್ಲೆಯಿಂದ ಭದ್ರತೆ ಒದಗಿಸಲಾಗುವುದು.
  • ಘಟನೆಯಲ್ಲಿ ಗಾಯಗೊಂಡಿರುವ ಅಜಿತ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ ಆರ್ಥಿಕ ನೆರವು ನೀಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು.
  • ರಜಪೂತ ಸಮುದಾಯದ ಹಲವು ಗಣ್ಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರದ ಆಡಳಿತವು ಪ್ರತಿಭಟನಾಕಾರರ ಜೊತೆಗೆ ನಡೆದ ಮಾತುಕತೆಯಲ್ಲಿ ಖಚಿತಪಡಿಸಿದೆ.

ಇದನ್ನೂ ಓದಿ: ಅಸ್ಸೋಂನ ಗುವಾಹಟಿಯಲ್ಲಿ 3.5 ತೀವ್ರತೆಯ ಭೂಕಂಪ

Last Updated :Dec 7, 2023, 10:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.