ETV Bharat / bharat

'ಮಹಾಪಂಚಾಯತ್​'ನಲ್ಲಿ ರೈತ ಮುಖಂಡ ಟಿಕಾಯತ್​​ ಭಾಷಣ ವೇಳೆ ಕುಸಿದ ವೇದಿಕೆ

author img

By

Published : Feb 3, 2021, 3:16 PM IST

mahapanchayat
'ಮಹಾಪಂಚಾಯತ್​'ನಲ್ಲಿ ಕುಸಿದ ವೇದಿಕೆ

ಹರಿಯಾಣದಲ್ಲಿ ಪ್ರಾರಂಭವಾಗಿರುವ ಮಹಾ ಪಂಚಾಯತ್ ವೇದಿಕೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್​ ಟಿಕಾಯತ್​ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ವೇದಿಕೆ ಕುಸಿದಿದೆ.

ಜಿಂದ್(ಹರಿಯಾಣ): ಹರಿಯಾಣದ ಜಿಂದ್​ನಲ್ಲಿ 'ಮಹಾ ಪಂಚಾಯತ್'​ ನಡೆಯುತ್ತಿದ್ದು, ಪ್ರತಿಭಟನಾಕಾರರಿದ್ದ ವೇದಿಕೆ ಈ ವೇಳೆ ಕುಸಿದಿದೆ. ಘಟನೆಯಲ್ಲಿ ರೈತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್​ ಟಿಕಾಯತ್​ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

'ಮಹಾಪಂಚಾಯತ್​'ನಲ್ಲಿ ಕುಸಿದ ವೇದಿಕೆ

ಇದನ್ನು ಓದಿ: ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್‌' ಶುರು

ಇನ್ನು ರಾಷ್ಟ್ರವ್ಯಾಪಿ ಚಕ್ಕಾ ಜಾಮ್ ಘೋಷಿಸಿದ ಬಳಿಕ ರೈತ ಚಳವಳಿ ಮತ್ತೆ ವೇಗವನ್ನು ಪಡೆಯುತ್ತಿದೆ. ಇನ್ನು ರೈತರನ್ನು ಒಟ್ಟುಗೂಡಿಸಲು ಹರಿಯಾಣದಲ್ಲಿ ಮಹಾ ಪಂಚಾಯತ್‌ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಕೇಶ್​ ಟಿಕಾಯತ್ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಇದ್ದಕ್ಕಿದ್ದಂತೆ ಕುಸಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.