ETV Bharat / bharat

ಕ್ಷಮಿಸಿ ಮಮ್ಮಿ ನಾವು ನಮ್ಮ ಆಸೆಯಂತೆ ಆತ್ಮಹತ್ಯೆ ಮಾಡಿಕೊಂಡಿದ್ದೇವೆ: ಸಾಮೂಹಿಕ ಆತ್ಮಹತ್ಯೆ

author img

By

Published : Jan 9, 2023, 10:55 PM IST

Updated : Jan 10, 2023, 2:46 PM IST

ಆತ್ಮಹತ್ಯೆ
ಆತ್ಮಹತ್ಯೆ

ಆರ್ಥಿಕ ಹೊರೆ ಹೆಚ್ಚಿದ ಕಾರಣ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಡೋದರಾದಲ್ಲಿ ಬೆಳಕಿಗೆ ಬಂದಿದೆ.

ವಡೋದರಾ (ಗುಜರಾತ್):​ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕುಟುಂಬದ ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ನೋವಿನ ಘಟನೆ ವಡೋದರಾದಲ್ಲಿ ಬೆಳಕಿಗೆ ಬಂದಿದೆ. ಪತಿ, ಪತ್ನಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ವಯಂ ಪ್ರೇರಿತರಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸೂಸೈಡ್ ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಆದರೂ ಪೊಲೀಸರು ಎಲ್ಲ ರೀತಿಯಲ್ಲೂ ಮುಂದಿನ ತನಿಖೆ ಕೈಗೊಂಡಿದ್ದಾರೆ.

ವಡೋದರಾದಲ್ಲಿ ನಡೆದ ನೋವಿನ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಪ್ರಾಣ ಕೊಟ್ಟಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕುಟುಂಬದ ಸದಸ್ಯರೊಬ್ಬರು ಗೋಡೆಯ ಮೇಲೆ ಆತ್ಮಹತ್ಯೆ ಪತ್ರ ಬರೆದಿದ್ದಾರೆ. ಇದರಲ್ಲಿ ಆರ್ಥಿಕ ಹೊರೆ ಹೆಚ್ಚಿದೆ ಎಂದು ಹೇಳಿದ್ದಾರೆ. ಪೊಲೀಸರ ತನಿಖೆಯಿಂದ ಇದಕ್ಕೆ ಸ್ಪಷ್ಟ ಕಾರಣ ಗೊತ್ತಾಗಬೇಕಿದೆ.

ಪ್ರತೇಶ್‌ಭಾಯ್ ಪ್ರತಾಪ್‌ಭಾಯ್ ಮಿಸ್ತ್ರಿ (30 ವರ್ಷ), ಅವರ ಪತ್ನಿ ಸ್ನೇಹಲ್ಬೆನ್ ಪ್ರಿತೇಶ್‌ಭಾಯ್ ಮಿಸ್ತ್ರಿ (32 ವರ್ಷ) ಮತ್ತು ಮಗ ಹರ್ಷಿಲ್ ಪ್ರಿತೇಶ್‌ಭಾಯ್ ಮಿಸ್ತ್ರಿ ಅವರು ವಡೋದರದ ದರ್ಶನಮ್ ಉಪ್ವಾನ್ ಡ್ಯೂಪ್ಲೆಕ್ಸ್‌ನಲ್ಲಿ ವಾಸಿಸುತ್ತಿದ್ದರು. ಇಂದು ಬೆಳಗ್ಗೆ ಪ್ರೀತೇಶ್‌ಭಾಯ್ ತನ್ನ ಮನೆಯ ಎರಡನೇ ಮಹಡಿಯ ಮಲಗುವ ಕೋಣೆಯಲ್ಲಿ ಈ ಘಟನೆ ನಡೆದಿದೆ.

ಮನೆಯಲ್ಲಿ ಉಪಸ್ಥಿತರಿದ್ದ ಕೇತನಭಾಯಿ ಚುನಾರ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರೀತೇಶಭಾಯಿ ತಮ್ಮ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದರು. ನಿನ್ನೆ ರಾತ್ರಿ ಆತನಿಗೆ ತನ್ನ ತಾಯಿಯಿಂದ ಇಂದು ರಾತ್ರಿ ಊಟಕ್ಕೆ ಹೊರಡುವಂತೆ ಸಂದೇಶ ಬಂದಿತ್ತು. ಇಂದು ಆತನ ತಾಯಿ ಬಂದು ನೋಡಿದಾಗ ಪ್ರೀತೇಶ್‌ಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ನೋಡಿದ ಅವರು ಸುತ್ತಮುತ್ತಲಿನವರಿಗೆ ಮಾಹಿತಿ ನೀಡಿದ್ದಾರೆ. ಒಳಗೆ ನೋಡಿದಾಗ ಪ್ರೀತೇಶ್‌ಭಾಯ್ ಅವರ ಪತ್ನಿ ಮತ್ತು ಅವರ ಮಗನ ಶವಗಳು ಕೆಳಗೆ ಬಿದ್ದಿರುವುದು ಕಂಡು ಬಂದಿತ್ತು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಪೋಸ್ಟ್ ಮಾರ್ಟಮ್​ಗಾಗಿ ಇಂದು ಬೆಳಗ್ಗೆ ಎಲ್ಲ ಮೃತದೇಹಗಳನ್ನು ಎಸ್​ಎಸ್​ಜಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದೇ ವೇಳೆ ಮೃತರು ಮನೆಯ ಗೋಡೆಯ ಮೇಲೆ ಆತ್ಮಹತ್ಯೆ ಪತ್ರ ಬರೆದಿದ್ದರು. ಇದರಲ್ಲಿ ಸಾಲ ಹೆಚ್ಚಾಗಿರುವ ಪ್ರಸ್ತಾಪವಿದೆ ಎಂದಿದ್ದಾರೆ.

ಸಾಕಷ್ಟು ಸಾಲ ಹೆಚ್ಚಾಗಿದೆ. ಈಗ ಯಾವುದೇ ಆಯ್ಕೆ ಇಲ್ಲ. ನಾವು 6-7 ವರ್ಷಗಳ ಕಾಲ ಒಬ್ಬರಿಗೊಬ್ಬರು ಬೇರ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕ ಜವಾಬ್ದಾರಿ ನಮ್ಮ ಮೇಲೆ ಕೊನೆಗೊಳ್ಳುತ್ತದೆ. ಕ್ಷಮಿಸಿ ತಾಯಿ, ನಾವು ನಮ್ಮ ಸ್ವಂತ ಇಚ್ಛೆಯಿಂದ ಈ ಕ್ರಮವನ್ನು ತೆಗೆದುಕೊಂಡಿದ್ದೇವೆ. ನಮ್ಮ ಸೂಸೈಡ್ ನೋಟ್ ನಮ್ಮ ಮೊಬೈಲ್‌ನಲ್ಲಿದೆ ಎಂದು ನಾನು ಪೊಲೀಸ್ ಆಯುಕ್ತರಲ್ಲಿ ವಿನಂತಿಸುತ್ತೇನೆ. ನಾವು ನಮ್ಮ ಸ್ವಂತ ಇಚ್ಛೆಯಿಂದ ಇದನ್ನು ಮಾಡಿದ್ದೇವೆ ಮತ್ತು ನಮ್ಮ ಕುಟುಂಬ ಸದಸ್ಯರಿಗೆ ತೊಂದರೆಯಾಗಬಾರದು ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಲಿಫ್ಟ್​ ಟ್ರಾಲಿ ಪತನ: ಇಬ್ಬರು ಕಾರ್ಮಿಕರ ಸಾವು - (ಮುಂಬೈ): ಮಹಾರಾಷ್ಟ್ರದ ಸೆಂಟ್ರಲ್ ಮುಂಬೈನ ವರ್ಲಿ ಪ್ರದೇಶದಲ್ಲಿ ನಿರ್ಮಾಣ ಹಂತದ 15 ಅಂತಸ್ತಿನ ಕಟ್ಟಡದಲ್ಲಿ ಲಿಫ್ಟ್ ಟ್ರಾಲಿ ಸೋಮವಾರ ಪತನಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಕ್ಲೀನರ್‌ಗಳು ಹೈಡ್ರಾಲಿಕ್ ಲಿಫ್ಟ್ ಟ್ರಾಲಿಯಲ್ಲಿದ್ದರು. ಅವಿಘ್ನ ಟವರ್‌ನಲ್ಲಿ ಸಂಜೆ 4.30 ರ ಸುಮಾರಿಗೆ ಕಾರ್ಮಿಕರು ಕಟ್ಟಡದ ಹೊರಭಾಗದಲ್ಲಿರುವ ಗಾಜನ್ನು ಸ್ವಚ್ಛಗೊಳಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಿಫ್ಟ್‌ನ ಹಗ್ಗವು ಹಠಾತ್ತನೆ ಮುರಿದು ನೆಲ ಮಹಡಿಗೆ ಅಪ್ಪಳಿಸಿತು ಎಂದು ಬಿಎಂಸಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಸಂಜೆ 4.30ರ ಸುಮಾರಿಗೆ ಅವಿಘ್ನ ಟವರ್​ನಲ್ಲಿ ಈ ಘಟನೆ ನಡೆದಿದೆ. ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಮತ್ತು ಬಿಎಂಸಿಯ ವಾರ್ಡ್ ಸಿಬ್ಬಂದಿ ಅಪಘಾತ ಸ್ಥಳಕ್ಕೆ ತಲುಪಿದ್ದಾರೆ. ಇಬ್ಬರನ್ನು ನಾಯರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಕಾರ್ಮಿಕ ಗುತ್ತಿಗೆದಾರ ಮತ್ತು ಸೈಟ್ ಮೇಲ್ವಿಚಾರಕರ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ವರ್ಲಿ ಪೊಲೀಸರು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ಓದಿ: ಹೋಟೆಲ್ ಉದ್ಯಮಿ ಆತ್ಮಹತ್ಯೆ ಪ್ರಕರಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿ

Last Updated :Jan 10, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.