ETV Bharat / bharat

ಬಲವಂತದ ಮತಾಂತರ ಪ್ರಕರಣ: ಆರು ಮಂದಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ ಕೋರ್ಟ್​

author img

By PTI

Published : Dec 19, 2023, 4:11 PM IST

Supreme Court
ಸುಪ್ರೀಂ ಕೋರ್ಟ್​

SC grants interim protection from arrest: ಪ್ರಕರಣಕ್ಕೆ ಸಂಬಂಧಿಸಿ ಶರಣಾಗುವಂತೆ ನಿರ್ದೇಶಸಿದ್ದ ಅಲಹಾಬಾದ್​ ಹೈಕೋರ್ಟ್​ನ ಆದೇಶವನ್ನು ಪ್ರಶ್ನಿಸಿ, ವಿವಿ ಉಪಕುಲಪತಿ ಹಾಗೂ ಐವರು ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀ ಕೋರ್ಟ್​ ಪೀಠ ಇಂದು ವಿಚಾರಣೆ ನಡೆಸಿತು.

ನವದೆಹಲಿ: ಅತ್ಯಾಚಾರ ಹಾಗೂ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಸ್ಯಾಮ್​ ಹಿಗ್ಗಿನ್​ಬಾಟಮ್​ ಕೃಷಿ, ತಂತ್ರಜ್ಞಾನ ಹಾಗೂ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್​ ಮತ್ತು ಇತರ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್​ ಮಂಗಳವಾರ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.

2023ರ ಡಿಸೆಂಬರ್​ 20ಕ್ಕೆ ರಾಜೇಂದ್ರ ಬಿಹಾರಿ ಲಾಲ್​ ಹಾಗೂ ಇತರ ಬೋಧಕರ ಸಿಬ್ಬಂದಿ ಶರಣಾಗುವಂತೆ ಆದೇಶಿಸಿದ್ದ ಅಲಹಾಬಾದ್​ ಹೈಕೋರ್ಟ್​ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್​ ಹಾಗೂ ಕೆ. ವಿ. ವಿಶ್ವನಾಥನ್​ ಅವರಿದ್ದ ರಜಾಕಾಲದ ಪೀಠ ಈ ಆದೇಶವನ್ನು ನೀಡಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು, 2005ರಲ್ಲಿ ತಮ್ಮ ಮೇಲೆ ಬಲವಂತದ ಮತಾಂತರ ಪ್ರಯತ್ನ ನಡೆದಿತ್ತು ಹಾಗೂ ನಂತರದಲ್ಲಿ ಅತ್ಯಾಚಾರ ನಡೆದಿತ್ತು ಎಂದು ಆರೋಪಿಸಿ, 2023ರ ನವೆಂಬರ್​ 4 ರಂದು ಜಿಲ್ಲೆಯ ಹಮೀರ್​ಪುರದಲ್ಲಿ ಎಫ್​ಐಆರ್ ದಾಖಲಿಸಿದ್ದರು.

ಈ ಎಫ್​ಐಆರ್​ಗೆ ಸಂಬಂಧಿಸಿ ವಿವಿಯ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್​ ಹಾಗೂ ಇತರ ಐವರು ಪ್ರಾಧ್ಯಾಪಕರು ಡಿಸೆಂಬರ್​ 20ರಂದು ಶರಣಾಗುವಂತೆ ಅಲಹಾಬಾದ್​ ಹೈಕೋರ್ಟ್​ ಆದೇಶಿಸಿತ್ತು. ಎಸ್​ಎಚ್​ಯುಎಟಿಎಸ್​ನ ನಿರ್ದೇಶಕ ವಿನೋದ್​ ಬಿಹಾರಿ ಲಾಲ್​, ಅವರ ಸಹೋದರ ವಿವಿಯ ಉಪಕುಲಪತಿ ರಾಜೇಂದ್ರ ಬಿಹಾರಿ ಲಾಲ್​ ಹಾಗೂ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದ ಇತರ ಐವರು ಪ್ರಾಧ್ಯಾಪಕರು ಹೈಕೋರ್ಟ್​ ಆದೇಶವನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಿದ್ಧಾರ್ಥ್​ ದಾವೆ, "ಲಾಲ್​ಗೆ ಶರಣಾಗುವಂತೆ ಅಲಹಾಬಾದ್​ ಹೈಕೋರ್ಟ್​ ಡಿಸೆಂಬರ್​ 11 ರಂದು ನಿರ್ದೇಶಿಸಿದ್ದು, ಆದೇಶದ ಪ್ರತಿಯನ್ನು ಡಿಸೆಂಬರ್​ 14 ರಂದು ಅಪ್​ಲೋಡ್​ ಮಾಡಿತ್ತು. ಅದಲ್ಲದೇ ದೂರುದಾರೆ ಮಹಿಳಾ ಉದ್ಯೋಗಿ 2022ರವರೆಗೆ ವಿಶ್ವವಿದ್ಯಾಲಯದಲ್ಲೇ ಕಾರ್ಯ ನಿರ್ವಹಿಸುತ್ತಿದ್ದರು. ಹಾಗೂ 2021ರಲ್ಲೇ ಮತಾಂತರ ವಿರೋಧಿ ಕಾನೂನು ಕೂಡ ಇತ್ತು. ಆದರೆ, ಮಹಿಳಾ ಉದ್ಯೋಗಿ ವಿಶ್ವವಿದ್ಯಾಲಯದ ಕೆಲಸ ತೊರೆದ ನಂತರ 2023 ನವೆಂಬರ್​ 4ರಂದು ಬಲವಂತದ ಮತಾಂತರ ಹಾಗೂ ಅತ್ಯಾಚಾರ ಆರೋಪ ಹೊರಿಸಿ ದೂರು ದಾಖಲಿಸಿದ್ದಾರೆ ಎಂದು ಕೋರ್ಟ್​ಗೆ ಹೇಳಿದರು.

ವಕೀಲರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್​, ಉತ್ತರ ಪ್ರದೇಶ ಸರ್ಕಾರ ಹಾಗೂ ದೂರುದಾರರಿಗೆ ನೋಟಿಸ್​ ಜಾರಿ ಮಾಡಿದೆ. ಅಲಹಾಬಾದ್​ ಹೈಕೋರ್ಟ್​ನ ಆದೇಶಕ್ಕೆ 2024ರ ಜನವರಿ 12ವರೆಗೆ ಅಥವಾ ಮುಂದಿನ ಆದೇಶದವರೆಗೆ ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟಿರುವ ಸೂಕ್ತ ಪೀಠದ ಮುಂದೆ ಜನವರಿ 3ರಂದು ಹೆಚ್ಚಿನ ವಿಚಾರಣೆಯನ್ನು ನಿಗದಿಪಡಿಸಿದ್ದು, ದಾಖಲಾಗಿರುವ ​ನಲ್ಲಿ ಅರ್ಜಿದಾರರನ್ನು ಬಂಧನದಿಂದ ರಕ್ಷಿಸುವಂತೆ ಮಧ್ಯಂತರ ಆದೇಶವಿರುತ್ತದೆ ಎಂದು ಪೀಠ ಹೇಳಿದೆ.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಅಲಹಾಬಾದ್ ಹೈಕೋರ್ಟ್​ನಿಂದ ಇಂದು ತೀರ್ಪು ಪ್ರಕಟ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.