ETV Bharat / bharat

ರಾಕೇಶ್ ಟಿಕಾಯತ್ ಕಾರಿನ​ ಮೇಲೆ ದಾಳಿ: ಬಿಜೆಪಿ ವಿರುದ್ಧ ಆಕ್ರೋಶ

author img

By

Published : Apr 2, 2021, 7:00 PM IST

Rakesh Tikait
Rakesh Tikait

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರಾಕೇಶ್ ಟಿಕಾಯತ್ ಮೇಲೆ ರಾಜಸ್ಥಾನದಲ್ಲಿ ಹಲ್ಲೆ ಯತ್ನ ನಡೆದಿದ್ದು, ಅವರ ಕಾರು ಜಖಂಗೊಳಿಸಲಾಗಿದೆ.

ಅಲ್ವಾರ್​​(ರಾಜಸ್ಥಾನ): ಭಾರತೀಯ ಕಿಸಾನ್​ ಯೂನಿಯನ್​​ ಮುಖಂಡ ರಾಕೇಶ್ ಟಿಕಾಯತ್ ಅವರ ಕಾರಿನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.

ಟಿಕಾಯತ್​​ ಅವರು ಅಲ್ವಾರ್​ನ ಹರ್ಸೋರಾ ಗ್ರಾಮದಲ್ಲಿ ಸಭೆ ನಡೆಸಿ ಬನ್ಸೂರ್​ಗೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ರೈತ ಮುಖಂಡ ರಾಕೇಶ್ ಟಿಕಾಯತ್ ಕಾರಿನ​ ಮೇಲೆ ದಾಳಿ

ತಮ್ಮ ಕಾರಿನ ಮೇಲೆ ಹಲ್ಲೆಯಾಗಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಅವರು, ಈ ದಾಳಿಯ ಹಿಂದೆ ಬಿಜೆಪಿ ಗೂಂಡಾಗಳಿದ್ದಾರೆ ಎಂದು ಆರೋಪಿಸಿದ್ದಾರೆ. ಜೊತೆಗೆ ಇದು ಪ್ರಜಾಪ್ರಭುತ್ವದ ಸಾವು ಎಂದಿದ್ದಾರೆ.

  • राजस्थान के अलवर जिले के ततारपुर चौराहा, बानसूर रोड़ पर भाजपा के गुंडों द्वारा जानलेवा पर हमला किए गए, लोकतंत्र के हत्या की तस्वीरें pic.twitter.com/aBN9ej7AXS

    — Rakesh Tikait (@RakeshTikaitBKU) April 2, 2021 " class="align-text-top noRightClick twitterSection" data=" ">

ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ-ಉತ್ತರ ಪ್ರದೇಶ ಗಾಜಿಪುರ ಗಡಿಯಲ್ಲಿ ಕಳೆದ ನಾಲ್ಕು ತಿಂಗಳಿಂದ ರಾಕೇಶ್​ ಟಿಕಾಯತ್​ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಶಿವಮೊಗ್ಗ ಹಾಗೂ ಬೆಳಗಾವಿಯಲ್ಲೂ ಟಿಕಾಯತ್​ ರೈತ ಮಹಾಪಂಚಾಯತ್​ನಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.