ETV Bharat / bharat

ಪ್ರಧಾನಿ ಮೋದಿ ಒತ್ತಡ ತಂತ್ರಗಳಿಗೆ ನಾನು ಬಗ್ಗಲ್ಲ: ರಾಹುಲ್​ ಗಾಂಧಿ ಖಡಕ್​ ಉತ್ತರ

author img

By

Published : Feb 10, 2022, 9:30 PM IST

Rahul Gandhi
ರಾಹುಲ್​ ಗಾಂಧಿ

ಸಂಸತ್​ ಕಲಾಪದಲ್ಲಿ ಭಾಗಿಯಾಗದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ 'ರೈತರ ಸಂಕಷ್ಟದ ಬಗ್ಗೆ ಕೇಳಿಸಿಕೊಳ್ಳದ ಪ್ರಧಾನಿ ಮಾತನ್ನು ನಾನೇಕೆ ಕೇಳಿಸಿಕೊಳ್ಳಲಿ' ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಹರಿದ್ವಾರ​(ಉತ್ತರಾಖಂಡ): ಕೇಂದ್ರ ಸರ್ಕಾರ ಸಿಬಿಐ, ಇಡಿ ಸಂಸ್ಥೆಗಳನ್ನು ಬಳಸಿಕೊಂಡು ನಮ್ಮನ್ನು ಎದುರಿಸಲಾಗಲ್ಲ. ಕೇಂದ್ರದ ಒತ್ತಡ ತಂತ್ರಕ್ಕೆ ನಾನು ತಲೆಬಾಗುವುದಿಲ್ಲ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಇಡಿ, ಸಿಬಿಐ ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಮೇಲೆ ಸವಾರಿ ಮಾಡಲಾಗಲ್ಲ. ಸಾಂವಿಧಾನಿಕ ಸಂಸ್ಥೆಗಳಿಂದ ಒತ್ತಡ ಹೇರುವ ಕೇಂದ್ರದ ತಂತ್ರ ಫಲಿಸಲ್ಲ. ಈ ಬಗ್ಗೆ ನಾನು ಎಂದಿಗೂ ಕುಗ್ಗುವ ವ್ಯಕ್ತಿಯಲ್ಲ ಎಂದು ಗುಡುಗಿದ್ದಾರೆ.

ಸಂಸತ್​ ಕಲಾಪದಲ್ಲಿ ಭಾಗಿಯಾಗದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಹೇಗೆ ಉತ್ತರಿಸಲಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ 'ರೈತರ ಸಂಕಷ್ಟದ ಬಗ್ಗೆ ಕೇಳಿಸಿಕೊಳ್ಳದ ಪ್ರಧಾನಿ ಮಾತನ್ನು ನಾನೇಕೆ ಕೇಳಿಸಿಕೊಳ್ಳಲಿ' ಎಂದು ಹೇಳುವ ಮೂಲಕ ತಿರುಗೇಟು ನೀಡಿದರು.

ಜಿಎಸ್​ಟಿ ಜಾರಿಯಾದ ಬಳಿಕ ದೇಶದ ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡರು. ಜಿಎಸ್​ಟಿ ಅವರ ಜೀವನವನ್ನು ಹಾಳು ಮಾಡಿತು. ಬ್ಲ್ಯಾಕ್​ ಮನಿ ವೈಟ್​ ಆಗಿ ಬಿಜೆಪಿಯ ಬೊಕ್ಕಸಕ್ಕೆ ಸೇರಿಕೊಂಡಿತು. ಕೋವಿಡ್​ ಸಾಂಕ್ರಾಮಿಕದ ವೇಳೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ವ್ಯವಸ್ಥೆ ಹೆಚ್ಚಿಸುವ ಬದಲು ಪ್ರಧಾನಿ ಎಲ್ಲರಿಗೂ ತಟ್ಟೆ ಬಾರಿಸಲು ಹೇಳಿದರು ಎಂದು ವಾಗ್ದಾಳಿ ನಡೆಸಿದರು.

ಕಳೆದ 70 ವರ್ಷಗಳಲ್ಲಿ ದೇಶ ಅಭಿವೃದ್ಧಿ ಸಾಧಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳುತ್ತಾರೆ. ಇದರರ್ಥ ಈ ದೇಶದ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಮ್ಯಾಜಿಕ್​ನಂತೆ ಎಲ್ಲವನ್ನೂ ಪಡೆದುಕೊಂಡರು ಎಂದು ರಾಹುಲ್​ ಛೇಡಿಸಿದ್ದಾರೆ.

ಓದಿ: ಮಂಡ್ಯದಲ್ಲಿ ಘೋಷಣೆ ಕೂಗಿದ ಯುವತಿಗೆ ಮುಸ್ಲಿಂ ರಾಷ್ಟ್ರೀಯ ಮಂಚ್​ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.