ETV Bharat / bharat

ನಿಫಾ ವೈರಸ್​ ಆರ್ಭಟ ಕೇರಳದ ಕೋಯಿಕ್ಕೋಡ್​ಗೆ ಸೀಮಿತ: ಐಸಿಎಂಆರ್​ ಮಹಾನಿರ್ದೇಶಕ

author img

By ETV Bharat Karnataka Team

Published : Sep 16, 2023, 6:49 AM IST

Updated : Sep 16, 2023, 7:45 AM IST

ನಿಫಾ ವೈರಸ್​ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೇರಳ ಸರ್ಕಾರ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

Nipah outbreak
ನಿಫಾ ವೈರಸ್​

ನವದೆಹಲಿ: "ಇದುವರೆಗೆ ಕೇರಳ ರಾಜ್ಯದಲ್ಲಿ ಆರು ನಿಫಾ ವೈರಸ್​ ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸದ್ಯಕ್ಕೆ ಪರಾವೆಗಳನ್ನು ಗಮನಿಸಿದರೆ ನಿಫಾ ವೈರಸ್​ ಸ್ಫೋಟ ಕೇರಳದ ಕೋಯಿಕ್ಕೋಡ್​ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ" ಎಂದು ಸೂಚಿಸುತ್ತದೆ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಹಾನಿರ್ದೇಶಕ ರಾಜೀವ್​ ಬಹ್ಲ್​ ಹೇಳಿದ್ದಾರೆ.

ನಿಫಾ ವೈರಸ್​ ಸಾವಿನ ಪ್ರಮಾಣ ಕೋವಿಡ್​- 19 ಗಿಂತ ಹೆಚ್ಚು: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಕೋವಿಡ್​- 19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್​ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚಿದೆ. ಕೋವಿಡ್​ ಸೋಂಕಿತರಲ್ಲಿ ಸಾವಿನ ಪ್ರಮಾಣ 2-3 ಪ್ರತಿಶತವಾಗಿದ್ದರೆ, ನಿಫಾದಲ್ಲಿ ಸಾವಿನ ಪ್ರಮಾಣ 40-70 ಪ್ರತಿಶತದವರೆಗೆ ಇದೆ. ನಿಫಾ ವೈರಸ್​ 40-70 ಪ್ರತಿಶತದಷ್ಟು ಹೆಚ್ಚಿನ ಮರಣ ಸಾಧ್ಯತೆಯನ್ನು ಹೊಂದಿದ್ದರೂ, ಹಿಂದಿನ ನಿಫಾ ಸ್ಫೋಟ ಪ್ರಮಾಣ ಚಿಕ್ಕದಾಗಿ, ಅಲ್ಪಾವಧಿಯದಾಗಿತ್ತು" ಎಂದು ತಿಳಿಸಿದ್ದಾರೆ.

"2018ರಲ್ಲಿ ಒಟ್ಟು 18 ಲ್ಯಾಬ್​ಗಳು ನಿಫಾ ಪಾಸಿಟಿವ್​ ಪ್ರಕರಣಗಳನ್ನು ದೃಢಪಡಿಸಿದ್ದವು. ಮತ್ತು ಒಂದು ತಿಂಗಳಲ್ಲಿ ನಿಫಾ ವೈರಸ್​ ಸ್ಫೋಟಗೊಂಡು, ಹರಡಿತ್ತು. ಹಾಗಾಗಿ ಆದಷ್ಟು ಬೇಗ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಮುಖ್ಯ. ರಾಜ್ಯದ ಆರೋಗ್ಯ ಅಧಿಕಾರಿಗಳು ಅಗತ್ಯ ಪ್ರೊಟೋಕಾಲ್​ಗಳನ್ನು ಜಾರಿಗೆ ತಂದಿದ್ದಾರೆ.ಎನ್​ಸಿಡಿಸಿ, ಐಸಿಎಂಆರ್​ ಹಾಗೂ ಇತರರ ಸಹಕಾರದೊಂದಿಎಗ ವೈರಸ್​ ಮತ್ತಷ್ಟು ಹರಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ." ಎಂದು ತಿಳಿಸಿದರು.

"ಐಸಿಎಂಆರ್ ಮಾದರಿಗಳ ಪರೀಕ್ಷೆಗಾಗಿ ತನ್ನ ಬಿಎಸ್​ಎಲ್​- 3 ಮೊಬೈಲ್​ ಲ್ಯಾಬ್​ಗಳನ್ನು ಸ್ಥಳದಲ್ಲಿ ನಿಯೋಜಿಸಿದೆ. ಇದಲ್ಲದೇ ಕೋಯಿಕ್ಕೋಡ್​ನಲ್ಲಿ ವೈರಸ್​ ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯಗಳ (ವಿಆರ್​ಡಿಎಲ್​) ಜಾಲವನ್ನೂ ಸಕ್ರಿಯಗೊಳಿಸಿದೆ. ಐಸಿಎಂಆರ್​ನ ನ್ಯಾಷನಲ್​ ಇನ್​​ಸ್ಟಿಟ್ಯೂಟ್​​ ಆಫ್​ ವೈರಾಲಜಿ (ICMR-NIV) ಮತ್ತು ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ (ICMR-NIE) ತಂಡಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸೋಂಕು ಹರಡುವಿಕೆ ನಿಯಂತ್ರಣ ಪ್ರಯತ್ನಗಳನ್ನು ಇನ್ನಷ್ಟು ಗಟ್ಟಿಮಾಡಲು ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲ ಮಾಡುತ್ತಿದೆ" ಎಂದು ಮಾಹಿತಿ ನೀಡಿದರು.

"ಕೈ ತೊಳೆಯುವುದು, ಸೋಂಕಿತ ಅಥವಾ ಶಂಕಿತ ಪ್ರಕರಣಗಳ ದೇಹದ ದ್ರವದ ಸಂಪರ್ಕಕ್ಕೆ ಬರದೇ ಇರುವುದು, ಬಾವಲಿಗಳು ವಾಸಿಸುವ ಸ್ಥಳಗಳಿಗೆ ಹೋಗದೇ ಇರುವುದು, ಅವುಗಳೊಂದಿಗೆ ಸಂಪರ್ಕ ಸಾಧಿಸದೇ ಇರುವುದು, ಬಾವಲಿಗಳು ಮುಟ್ಟಿದಂತಹ ಹಸಿ ಖರ್ಜೂರ ಅಥವಾ ಹಸಿ ಹಣ್ಣುಗಳನ್ನು ತಿನ್ನದೇ ಇರುವುದು ಸೇರಿದಂತೆ ನಿಫಾ ವಿರುದ್ಧ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ನಿಫಾ ವೈರಸ್​ ಹರಡುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಕರಣಗಳು ಯಾಕೆ ಕಾಣಿಸಿಕೊಳ್ಳುತ್ತಿವೆ ಎಂಬುದು ತಿಳಿದಿಲ್ಲ. 2018ರಲ್ಲಿ ನಿಫಾ ವೈರಸ್​ ಸ್ಫೋಟಗೊಂಡಾಗ ಬಾವಲಿಗಳಿಂದ ಬಂದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಬಾವಲಿಗಳಿಂದ ಮನುಷ್ಯರಿಗೆ ಸೋಂಕು ಹೇಗೆ ಹರಡಿತು ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಹರಡಿರುವ ಲಿಂಕ್​ ಇನ್ನೂ ಸಿಕ್ಕಿಲ್ಲ. ಈ ಬಾರಿ ಮತ್ತೆ ನಾವು ಆ ಲಿಂಕ್​ ಅನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಇದು ಯಾವಾಗಲು ಮಳೆಗಾಲದಲ್ಲಿ ಹರಡುತ್ತದೆ" ಎಂದು ಹೇಳಿದರು.

ಐಎಂಸಿಆರ್​ ಪ್ರಕಾರ, ಭಾರತವು ನಿಫಾ ವೈರಸ್​ ಸೋಂಕಿನ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದಿಂದ ಇನ್ನೂ 20 ಡೋಸ್​ ಮೊನೊಕ್ಲೋನಲ್​ ಆ್ಯಂಟಿ ಬಾಡಿಗಳನ್ನು ಸಂಗ್ರಹಿಸಲಿದೆ.

"ನಾವು 2018ರಲ್ಲಿ ಆಸ್ಟ್ರೇಲಿಯಾದಿಂದ ಕೆಲವು ಡೋಸ್​ ಮೊನೊಕ್ಲೋನಲ್​ ಆ್ಯಂಟಿಬಾಡಿಗಳನ್ನು ಸಂಗ್ರಹಿಸಿದ್ದೆವು. ಪ್ರಸ್ತುತ 10 ರೋಗಿಗಳಿಗೆ ಆಗುವಷ್ಟು ಮಾತ್ರ ಡೋಸ್​ಗಳು ಲಭ್ಯವಿವೆ." ಎಂದರು.

ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್​​ ವೈರಾಲಾಜಿ ಘಟಕಕ್ಕೆ ಚಾಲನೆ

ನವದೆಹಲಿ: "ಇದುವರೆಗೆ ಕೇರಳ ರಾಜ್ಯದಲ್ಲಿ ಆರು ನಿಫಾ ವೈರಸ್​ ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸದ್ಯಕ್ಕೆ ಪರಾವೆಗಳನ್ನು ಗಮನಿಸಿದರೆ ನಿಫಾ ವೈರಸ್​ ಸ್ಫೋಟ ಕೇರಳದ ಕೋಯಿಕ್ಕೋಡ್​ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ" ಎಂದು ಸೂಚಿಸುತ್ತದೆ ಎಂದುಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಮಹಾನಿರ್ದೇಶಕ ರಾಜೀವ್​ ಬಹ್ಲ್​ ಹೇಳಿದ್ದಾರೆ.

ನಿಫಾ ವೈರಸ್​ ಸಾವಿನ ಪ್ರಮಾಣ ಕೋವಿಡ್​- 19 ಗಿಂತ ಹೆಚ್ಚು: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, "ಕೋವಿಡ್​- 19 ಸಾಂಕ್ರಾಮಿಕ ರೋಗಕ್ಕೆ ಹೋಲಿಸಿದರೆ ನಿಫಾ ವೈರಸ್​ ಸೋಂಕಿಗೆ ಒಳಗಾದವರಲ್ಲಿ ಮರಣ ಪ್ರಮಾಣ ಹೆಚ್ಚಿದೆ. ಕೋವಿಡ್​ ಸೋಂಕಿತರಲ್ಲಿ ಸಾವಿನ ಪ್ರಮಾಣ 2-3 ಪ್ರತಿಶತವಾಗಿದ್ದರೆ, ನಿಫಾದಲ್ಲಿ ಸಾವಿನ ಪ್ರಮಾಣ 40-70 ಪ್ರತಿಶತದವರೆಗೆ ಇದೆ. ನಿಫಾ ವೈರಸ್​ 40-70 ಪ್ರತಿಶತದಷ್ಟು ಹೆಚ್ಚಿನ ಮರಣ ಸಾಧ್ಯತೆಯನ್ನು ಹೊಂದಿದ್ದರೂ, ಹಿಂದಿನ ನಿಫಾ ಸ್ಫೋಟ ಪ್ರಮಾಣ ಚಿಕ್ಕದಾಗಿ, ಅಲ್ಪಾವಧಿಯದಾಗಿತ್ತು" ಎಂದು ತಿಳಿಸಿದ್ದಾರೆ.

"2018ರಲ್ಲಿ ಒಟ್ಟು 18 ಲ್ಯಾಬ್​ಗಳು ನಿಫಾ ಪಾಸಿಟಿವ್​ ಪ್ರಕರಣಗಳನ್ನು ದೃಢಪಡಿಸಿದ್ದವು. ಮತ್ತು ಒಂದು ತಿಂಗಳಲ್ಲಿ ನಿಫಾ ವೈರಸ್​ ಸ್ಫೋಟಗೊಂಡು, ಹರಡಿತ್ತು. ಹಾಗಾಗಿ ಆದಷ್ಟು ಬೇಗ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಮುಖ್ಯ. ರಾಜ್ಯದ ಆರೋಗ್ಯ ಅಧಿಕಾರಿಗಳು ಅಗತ್ಯ ಪ್ರೊಟೋಕಾಲ್​ಗಳನ್ನು ಜಾರಿಗೆ ತಂದಿದ್ದಾರೆ.ಎನ್​ಸಿಡಿಸಿ, ಐಸಿಎಂಆರ್​ ಹಾಗೂ ಇತರರ ಸಹಕಾರದೊಂದಿಎಗ ವೈರಸ್​ ಮತ್ತಷ್ಟು ಹರಡುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ." ಎಂದು ತಿಳಿಸಿದರು.

"ಐಸಿಎಂಆರ್ ಮಾದರಿಗಳ ಪರೀಕ್ಷೆಗಾಗಿ ತನ್ನ ಬಿಎಸ್​ಎಲ್​- 3 ಮೊಬೈಲ್​ ಲ್ಯಾಬ್​ಗಳನ್ನು ಸ್ಥಳದಲ್ಲಿ ನಿಯೋಜಿಸಿದೆ. ಇದಲ್ಲದೇ ಕೋಯಿಕ್ಕೋಡ್​ನಲ್ಲಿ ವೈರಸ್​ ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯಗಳ (ವಿಆರ್​ಡಿಎಲ್​) ಜಾಲವನ್ನೂ ಸಕ್ರಿಯಗೊಳಿಸಿದೆ. ಐಸಿಎಂಆರ್​ನ ನ್ಯಾಷನಲ್​ ಇನ್​​ಸ್ಟಿಟ್ಯೂಟ್​​ ಆಫ್​ ವೈರಾಲಜಿ (ICMR-NIV) ಮತ್ತು ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ (ICMR-NIE) ತಂಡಗಳನ್ನು ಕೂಡ ಸ್ಥಳದಲ್ಲಿ ನಿಯೋಜಿಸಲಾಗಿದ್ದು, ಸೋಂಕು ಹರಡುವಿಕೆ ನಿಯಂತ್ರಣ ಪ್ರಯತ್ನಗಳನ್ನು ಇನ್ನಷ್ಟು ಗಟ್ಟಿಮಾಡಲು ರಾಜ್ಯದ ಅಧಿಕಾರಿಗಳೊಂದಿಗೆ ನಿರಂತರವಾಗಿ ಕೆಲ ಮಾಡುತ್ತಿದೆ" ಎಂದು ಮಾಹಿತಿ ನೀಡಿದರು.

"ಕೈ ತೊಳೆಯುವುದು, ಸೋಂಕಿತ ಅಥವಾ ಶಂಕಿತ ಪ್ರಕರಣಗಳ ದೇಹದ ದ್ರವದ ಸಂಪರ್ಕಕ್ಕೆ ಬರದೇ ಇರುವುದು, ಬಾವಲಿಗಳು ವಾಸಿಸುವ ಸ್ಥಳಗಳಿಗೆ ಹೋಗದೇ ಇರುವುದು, ಅವುಗಳೊಂದಿಗೆ ಸಂಪರ್ಕ ಸಾಧಿಸದೇ ಇರುವುದು, ಬಾವಲಿಗಳು ಮುಟ್ಟಿದಂತಹ ಹಸಿ ಖರ್ಜೂರ ಅಥವಾ ಹಸಿ ಹಣ್ಣುಗಳನ್ನು ತಿನ್ನದೇ ಇರುವುದು ಸೇರಿದಂತೆ ನಿಫಾ ವಿರುದ್ಧ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ" ಎಂದು ತಿಳಿಸಿದರು.

"ರಾಜ್ಯದಲ್ಲಿ ನಿಫಾ ವೈರಸ್​ ಹರಡುವುದನ್ನು ತಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಪ್ರಕರಣಗಳು ಯಾಕೆ ಕಾಣಿಸಿಕೊಳ್ಳುತ್ತಿವೆ ಎಂಬುದು ತಿಳಿದಿಲ್ಲ. 2018ರಲ್ಲಿ ನಿಫಾ ವೈರಸ್​ ಸ್ಫೋಟಗೊಂಡಾಗ ಬಾವಲಿಗಳಿಂದ ಬಂದಿದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆದರೆ ಬಾವಲಿಗಳಿಂದ ಮನುಷ್ಯರಿಗೆ ಸೋಂಕು ಹೇಗೆ ಹರಡಿತು ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಹರಡಿರುವ ಲಿಂಕ್​ ಇನ್ನೂ ಸಿಕ್ಕಿಲ್ಲ. ಈ ಬಾರಿ ಮತ್ತೆ ನಾವು ಆ ಲಿಂಕ್​ ಅನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಇದು ಯಾವಾಗಲು ಮಳೆಗಾಲದಲ್ಲಿ ಹರಡುತ್ತದೆ" ಎಂದು ಹೇಳಿದರು.

ಐಎಂಸಿಆರ್​ ಪ್ರಕಾರ, ಭಾರತವು ನಿಫಾ ವೈರಸ್​ ಸೋಂಕಿನ ಚಿಕಿತ್ಸೆಗಾಗಿ ಆಸ್ಟ್ರೇಲಿಯಾದಿಂದ ಇನ್ನೂ 20 ಡೋಸ್​ ಮೊನೊಕ್ಲೋನಲ್​ ಆ್ಯಂಟಿ ಬಾಡಿಗಳನ್ನು ಸಂಗ್ರಹಿಸಲಿದೆ.

"ನಾವು 2018ರಲ್ಲಿ ಆಸ್ಟ್ರೇಲಿಯಾದಿಂದ ಕೆಲವು ಡೋಸ್​ ಮೊನೊಕ್ಲೋನಲ್​ ಆ್ಯಂಟಿಬಾಡಿಗಳನ್ನು ಸಂಗ್ರಹಿಸಿದ್ದೆವು. ಪ್ರಸ್ತುತ 10 ರೋಗಿಗಳಿಗೆ ಆಗುವಷ್ಟು ಮಾತ್ರ ಡೋಸ್​ಗಳು ಲಭ್ಯವಿವೆ." ಎಂದರು.

ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್​​ ವೈರಾಲಾಜಿ ಘಟಕಕ್ಕೆ ಚಾಲನೆ

Last Updated : Sep 16, 2023, 7:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.