ETV Bharat / bharat

ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್​ಗೆ ಜೀವ ಬೆದರಿಕೆ ಕರೆ

author img

By ETV Bharat Karnataka Team

Published : Nov 13, 2023, 11:00 PM IST

ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್
ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್

ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಹೀಗಾಗಿ ಅವರು ರಕ್ಷಣೆ ನೀಡುವಂತೆ ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ತಿಳಿಸಿದ್ದಾರೆ.

ನಾಗ್ಪುರ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಾಂಗ್ರೆಸ್ ಶಾಸಕ ವಿಜಯ್ ವಡೆತ್ತಿವಾರ್ ಅವರಿಗೆ ಕೊಲೆ ಬೆದರಿಕೆ ಬಂದಿದೆ. ಇದರಿಂದಾಗಿ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಈ ಬೆದರಿಕೆಯ ನಂತರ ವಡೆತ್ತಿವಾರ್ ಅವರು ಈ ವಿಷಯವನ್ನು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ತಿಳಿಸಿದ್ದಾರೆ. ಭದ್ರತೆ ಹೆಚ್ಚಿಸುವಂತೆ ವಿಜಯ್ ವಡೆತ್ತಿವಾರ್ ಅವರು ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದ್ದಾರೆ. ನಾಗ್ಪುರದಲ್ಲಿದ್ದಾಗ ವಿಜಯ್ ವಡೆತ್ತಿವಾರ್ ಅವರಿಗೆ ಬೆದರಿಕೆ ಹಾಕಲಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಯಾವ ಕಾರಣಕ್ಕೆ ಬೆದರಿಕೆ : ಈ ಮಧ್ಯೆ ಒಬಿಸಿಯಿಂದ ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಜಾರಂಗೆ - ಪಾಟೀಲ್ ಬೇಡಿಕೆಗೆ ವಡೆತ್ತಿವಾರ್ ವಿರೋಧ ವ್ಯಕ್ತಪಡಿಸಿದ್ದರು. ಜಾರಂಗೆ - ಪಾಟೀಲ್ ಬಗ್ಗೆ ಮಾತನಾಡಿದ ನಂತರ ವಿಜಯ್ ವಡೆತ್ತಿವಾರ್​ ಅವರಿಗೆ ಬೆದರಿಕೆಗಳು ಬಂದಿರುವ ಬಗ್ಗೆ ವರದಿಯಾಗಿದೆ. ಈ ಬೆದರಿಕೆ ಮೊಬೈಲ್‌ಗೆ ಬಂದಿದೆ. ಜಾರಂಗೆ-ಪಾಟೀಲ್ ಮರಾಠಾ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ವಡೆತ್ತಿವಾರ್ ಟೀಕಿಸಿದ್ದಾರೆ. ಜಾರಂಗೆ-ಪಾಟೀಲ್ ಬಗ್ಗೆ ಹೇಳಿಕೆ ನೀಡಿದ ಬಳಿಕ ವಡೆತ್ತಿವಾರ್ ಅವರಿಗೆ ಬೆದರಿಕೆ ಕರೆ ಹಾಗೂ ಸಂದೇಶ ಬಂದಿದೆ.

ಪ್ರಸ್ತುತ ವಿಜಯ್ ವಡೆತ್ತಿವಾಯ್ ಅವರಿಗೆ ವೈ ಪ್ಲಸ್ ಭದ್ರತೆ, ಮೂವರು ಪೊಲೀಸರು ಮತ್ತು ಅವರ ಕಾರಿಗೆ ಭದ್ರತೆಯನ್ನು ನೀಡಲಾಗಿದೆ. ಆದರೆ ಅವರು ಗೃಹ ಸಚಿವ ದೇವೇಂದ್ರ ಫಡ್ನವೀಸ್ ಮತ್ತು ಮುಖ್ಯಮಂತ್ರಿ ಶಿಂಧೆ ಅವರಿಗೆ ಇನ್ನೂ ಹೆಚ್ಚಿನ ಭದ್ರತೆಯನ್ನು ಕೋರಿದ್ದಾರೆ.

ಇದನ್ನೂ ಓದಿ: ಲಕ್ಷ್ಮಿ ದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ: ಎಸ್​ಪಿ ನಾಯಕನ ವಿರುದ್ಧ ಆಚಾರ್ಯ ಪ್ರಮೋದ್ ಕೃಷ್ಣಂ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.