ETV Bharat / bharat

Maharashtra Political crisis: ಫಡ್ನವಿಸ್ ಮನೆಯಲ್ಲಿ ರಾಹುಲ್ ನಾರ್ವೇಕರ್ ಸಭೆ: ಜಿತೇಂದ್ರ ಅವ್ಹಾದ್ ಆಕ್ಷೇಪ

author img

By

Published : Jul 3, 2023, 3:30 PM IST

Updated : Jul 3, 2023, 5:05 PM IST

Jitendra Awhad
ಜಿತೇಂದ್ರ ಅವ್ಹಾದ್ ಆಕ್ಷೇಪ

ಮಹಾರಾಷ್ಟ್ರದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ದೇವೇಂದ್ರ ಫಡ್ನವಿಸ್ ನಿವಾಸದಲ್ಲಿ ಅಜಿತ್ ಪವಾರ್ ಅವರನ್ನು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಭೇಟಿಯಾಗಿರುವುದಕ್ಕೆ ಜಿತೇಂದ್ರ ಅವ್ಹಾದ್​ ಕಿಡಿಕಾರಿದರು.

ಮುಂಬೈ (ಮಹಾರಾಷ್ಟ್ರ): ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ, ಎನ್‌ಸಿಪಿ 9 ಶಾಸಕರನ್ನು ಅನರ್ಹಗೊಳಿಸಲು ಶಿಫಾರಸು ಮಾಡಿ ವಿಧಾನಸಭೆ ಸ್ಪೀಕರ್‌ಗೆ ಪತ್ರ ಬರೆದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಪ್ರತಿಕ್ರಿಯಿಸಿದ್ದಾರೆ.

ಅದೇ ರೀತಿ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಹೊಸದಾಗಿ ನೇಮಕಗೊಂಡ ಅಜಿತ್ ಪವಾರ್ ಅವರು, ಫಡ್ನವೀಸ್ ಮನೆಯಲ್ಲಿ ಸಭೆ ನಡೆಸಿದರು. ಅನರ್ಹತೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ನೂತನವಾಗಿ ನೇಮಕಗೊಂಡ ವಿರೋಧ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್​ ಈ ಸಭೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

9 ಶಾಸಕರನ್ನು ಅನರ್ಹಗೊಳಿಸುವಂತೆ ಎನ್‌ಸಿಪಿ ಸಲ್ಲಿಸಿರುವ ಮನವಿಯ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ತಿಳಿಸಿದ್ದಾರೆ. ಅನರ್ಹತೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೆ ನೂತನವಾಗಿ ನೇಮಕಗೊಂಡ ವಿರೋಧ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್​ ಈ ಸಭೆ ಬಗ್ಗೆ ಕೆಂಡ ಕಾರಿದ್ದಾರೆ.

ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದು ಹೀಗೆ?: ಅಜಿತ್ ಪವಾರ್ ಸೇರಿದಂತೆ 9 ಎಂಟು ಮಂದಿ ವಿರುದ್ಧ ತಮ್ಮ ಪಕ್ಷವು ಅನರ್ಹತೆ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಭಾನುವಾರ ಹೇಳಿದ್ದರು. ಎನ್‌ಸಿಪಿಯ ಶ್ರೇಣಿ ಮತ್ತು ಫೈಲ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಬಳಿ ಇದೆ ಎಂದು ತಿಳಿಸುವ ಇ-ಮೇಲ್ ಅನ್ನು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದರು.

ಸ್ಪೀಕರ್ ರಾಹುಲ್ ನಾರ್ವೇಕರ್ ಹೇಳಿದ್ದೇನು?: ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ನರ್ವೇಕರ್, ಎನ್‌ಸಿಪಿಯ ಒಂಬತ್ತು ಶಾಸಕರನ್ನು ಅನರ್ಹಗೊಳಿಸುವಂತೆ ಜಯಂತ್ ಪಾಟೀಲ್ ಸಲ್ಲಿಸಿರುವ ಅರ್ಜಿಯನ್ನು ಸ್ವೀಕರಿಸಲಾಗಿದೆ. ನಾನು ಅದನ್ನು ಎಚ್ಚರಿಕೆಯಿಂದ ಗಮನಿಸುತ್ತೇನೆ. ನಾನು ಉಲ್ಲೇಖಿಸಿರುವ ಅಂಶಗಳನ್ನು ಅಧ್ಯಯನ ಮಾಡಿ, ಈ ಅರ್ಜಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಎಷ್ಟು ಎನ್‌ಸಿಪಿ ಶಾಸಕರು ಅಜಿತ್ ಪವಾರ್ ಅವರನ್ನು ಬೆಂಬಲಿಸಿದ್ದಾರೆ ಎಂಬ ಪ್ರಶ್ನೆಗೆ, "ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಉತ್ತರಿಸಿದರು. ಪ್ರಸ್ತುತ ಲೋಪಿ ಅಜಿತ್ ಪವಾರ್ ಏಕನಾಥ್ ಶಿಂಧೆ ಸರ್ಕಾರಕ್ಕೆ ಉಪಮುಖ್ಯಮಂತ್ರಿಯಾಗಿ ಸೇರ್ಪಡೆಗೊಂಡ ನಂತರ ಎನ್‌ಸಿಪಿ ಭಾನುವಾರ ಜಿತೇಂದ್ರ ಅವ್ಹಾದ್ ಅವರನ್ನು ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ. ಥಾಣೆ ಜಿಲ್ಲೆಯ ಮುಂಬ್ರಾ-ಕಲ್ವಾದಿಂದ ಶಾಸಕರಾಗಿರುವ ಅವ್ಹಾದ್, ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ವಿಧಾನಸಭೆಯಲ್ಲಿ ಪಕ್ಷ ಮತ್ತು ಎಲ್‌ಪಿಯ ಮುಖ್ಯ ಸಚೇತಕರನ್ನಾಗಿ ನೇಮಿಸಿದ್ದಾರೆ ಎಂದು ಅವರು ಹೇಳಿದರು.

ಎನ್‌ಸಿಪಿಯನ್ನು ಒಡೆಯುವವರಿಗೆ ಜನರಿಂದಲೇ ಉತ್ತರ-ಶರದ್ ಪವಾರ್: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ದಿವಂಗತ ರಾಜಕೀಯ ಗುರು ಯಶವಂತರಾವ್ ಚವ್ಹಾಣ್​​ ಅವರ ಸಮಾಧಿಯಿರುವ ಸ್ಥಳಕ್ಕೆ ಭೇಟಿ ನೀಡಿದರು. ''ಪಕ್ಷ ಕಟ್ಟುವ ಸಲುವಾಗಿ ನಾಳೆಯಿಂದ ಮಹಾರಾಷ್ಟ್ರದಾದ್ಯಂತ ಹೋಗುತ್ತೇನೆ'' ಎಂದು ಶರದ್ ಪವಾರ ಸಭೆಯಲ್ಲಿ ಹೇಳಿದರು. ಈ ವೇಳೆ ಕಾರ್ಯಕರ್ತರು ಜೋರಾಗಿ ಘೋಷಣೆಗಳನ್ನು ಕೂಗಿದರು. ಮಹಾರಾಷ್ಟ್ರದಲ್ಲಿ ಕ್ರಾಂತಿಯ ಪಾತ್ರವನ್ನು ವಹಿಸಿ ಎನ್‌ಸಿಪಿಯನ್ನು ಒಡೆಯುವವರಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಶರದ್ ಪವಾರ್ ಗುಡುಗಿದರು.

ಬಿರುಕು ಮೂಡಿಸುವ ಯತ್ನ: ರಾಜ್ಯದಲ್ಲಿ ಬಿರುಕು ಮೂಡಿಸುವ ಯತ್ನ ನಡೆಯುತ್ತಿದೆ. ಸೌಹಾರ್ದತೆಯಿಂದ ಬದುಕುತ್ತಿರುವ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಯಾಗಿದೆ ಎಂದು ಶರದ್ ಪವಾರ್ ಗಂಭೀರವಾಗಿ ಆರೋಪ ಮಾಡಿದರು. ಪ್ರಜಾಪ್ರಭುತ್ವದ ಹಕ್ಕನ್ನು ಕಾಪಾಡಬೇಕಾದ ಅಗತ್ಯವಿದೆ. ಕೆಲವು ಶಕ್ತಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ. ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೋಮು ಮತ್ತು ಧಾರ್ಮಿಕ ವಿಭಜನೆಯನ್ನು ಸೃಷ್ಟಿಸುವ ಬಿಜೆಪಿಯ ಪ್ರವೃತ್ತಿಗೆ ಕೆಲವರು ಶರಣಾದರು. ಆದರೆ, ಈ ಸ್ಫೋಟದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಶರದ್ ಪವಾರ್ ಗರಂ ಆದರು.

ಸಮಾಧಿಯಂತಹ ಸ್ಥಳವಿಲ್ಲ: ಯಶವಂತರಾವ್ ಚವ್ಹಾಣ್​ ಅವರ ಸಮಾಧಿಯ ಪವಿತ್ರ ಸ್ಥಳ 'ಪ್ರೀತಿಸಂಗಮ'ದಲ್ಲಿ ಶರದ್ ಪವಾರ್ ಅವರು, ಮಹಾರಾಷ್ಟ್ರದಾದ್ಯಂತ ಪ್ರವಾಸ ಮಾಡುವ ಮುನ್ನ ಗುರುಗಳ ಆಶೀರ್ವಾದ ಪಡೆಯುವುದು ಮುಖ್ಯವಾಗಿದೆ. ಇಂದು ಗುರುಪೂರ್ಣಿಮೆಯಾಗಿರುವುದರಿಂದ ಆಶೀರ್ವಾದ ಪಡೆಯಲು 'ಪ್ರೀತಿಸಂಗಮ'ವಲ್ಲದೇ ಬೇರೆ ಸೂಕ್ತ ಸ್ಥಳವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಪವರ್‌'ಫುಲ್ ಪಾಲಿ'ಟ್ರಿಕ್ಸ್‌': ಪ್ರಫುಲ್​ ಪಟೇಲ್​ಗೆ ಕೇಂದ್ರ ಸಚಿವ ಸ್ಥಾನ?, ಇದು 'ಗೂಗ್ಲಿಯಲ್ಲ ದರೋಡೆ' ಎಂದ ಶರದ್​ ಪವಾರ್​

Last Updated :Jul 3, 2023, 5:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.