ETV Bharat / bharat

ರಾಯರ ದರ್ಶನಕ್ಕೆ ತೆರಳಿದ್ದ ಮೈಸೂರಿನ ರಾಘವೇಂದ್ರ ಅನುಮಾನಾಸ್ಪದ ರೀತಿ ಸಾವು

author img

By

Published : Oct 18, 2021, 7:52 PM IST

ರಾಘವೇಂದ್ರ
ರಾಘವೇಂದ್ರ

ಲಾಡ್ಜ್ ಬುಕ್ ವೇಳೆ ಆಧಾರ್ ಕಾರ್ಡ್ ಪಡೆದಿದ್ದ ಸಿಬ್ಬಂದಿ, ಆಧಾರ್​ ಕಾರ್ಡ್ ಆಧಾರದ ಮೇಲೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ರು. ಈ ಬಗ್ಗೆ ಪತ್ನಿ ಸುಷ್ಮಿತಾ, ಪೊಲೀಸ್ ಠಾಣೆಗೆ ದೂರು ನೀಡಿದ್ರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಮ್ಮಿಗನೂರು ಠಾಣೆಗೆ ವರ್ಗಾಯಿಸಲಾಗಿದೆ..

ಕರ್ನೂಲ್ (ಆಂಧ್ರಪ್ರದೇಶ) : ಮಂತ್ರಾಲಯಕ್ಕೆ ತೆರಳಿದ್ದ ಮೈಸೂರು ಮೂಲದ ರಾಘವೇಂದ್ರ ಅನುಮಾನಾಸ್ಪದ ರೀತಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದಿದ್ದ ಆತ, ಲಾಡ್ಜ್​ವೊಂದರಲ್ಲಿ ಉಳಿದುಕೊಂಡಿದ್ದ.

ಎಷ್ಟೊತ್ತಾದರೂ ಆತ ಹೊರಗೆ ಬಾರದಿದ್ದಾಗ, ಲಾಡ್ಜ್ ಮಾಲೀಕರು ಮತ್ತೊಂದು ಬೀಗದ ಸಹಾಯದಿಂದ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಈ ವೇಳೆ ಅವರ ಮೃತದೇಹ ಪತ್ತೆಯಾಗಿದೆ.

ಲಾಡ್ಜ್ ಬುಕ್ ವೇಳೆ ಆಧಾರ್ ಕಾರ್ಡ್ ಪಡೆದಿದ್ದ ಸಿಬ್ಬಂದಿ, ಆಧಾರ್​ ಕಾರ್ಡ್ ಆಧಾರದ ಮೇಲೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ರು. ಈ ಬಗ್ಗೆ ಪತ್ನಿ ಸುಷ್ಮಿತಾ, ಪೊಲೀಸ್ ಠಾಣೆಗೆ ದೂರು ನೀಡಿದ್ರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಮ್ಮಿಗನೂರು ಠಾಣೆಗೆ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಹಾವು ಕಚ್ಚಿ ಪ್ರಾಣ ಕಳೆದುಕೊಂಡ ಅಕ್ಕ-ತಮ್ಮ.. ಸಾಂಗ್ಲಿಯಲ್ಲಿ ದಾರುಣ ಘಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.