ETV Bharat / bharat

ತಾಲಿಬಾನ್‌ ಜೊತೆ ಭಾರತ ಮುಕ್ತ, ಪಾರದರ್ಶಕ ಮಾತುಕತೆ ನಡೆಸಬೇಕು: ಯಶ್ವಂತ್‌ ಸಿನ್ಹಾ

author img

By

Published : Aug 20, 2021, 11:57 AM IST

ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಮಾಜಿ ವಿದೇಶಾಂಗ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕ ಯಶವಂತ್ ಸಿನ್ಹಾ, ತಾಲಿಬಾನ್‌ ಜೊತೆ ಭಾರತ ಮುಕ್ತ, ಪಾರದರ್ಶಕ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.

indian delegation should talk to taliban openly and transparently not secretly or in closed doors yashwant sinha
ತಾಲಿಬಾನ್‌ಗಳ ಜೊತೆ ಮಾತುಕತೆಗೆ ಭಾರತ ಉದಾರವಾಗಿರಬೇಕು: ಟಿಎಂಸಿ ನಾಯಕ ಯಶ್ವಂತ್‌ ಸಿನ್ಹಾ ಸಲಹೆ

ನವದೆಹಲಿ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಜೊತೆಗಿನ ಮಾತುಕತೆಯಲ್ಲಿ ಭಾರತ ಉದಾರತೆ ತೋರಿಸಬೇಕು. ಕಾಬೂಲ್‌ನಲ್ಲಿ ನಮ್ಮ ರಾಯಭಾರ ಕಚೇರಿಯನ್ನು ಮರುಸ್ಥಾಪಿಸಬೇಕು. ಅಲ್ಲಿಗೆ ರಾಯಭಾರಿಯನ್ನು ಕಳುಹಿಸಬೇಕು ಎಂದು ಮಾಜಿ ವಿದೇಶಾಂಗ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಯಶವಂತ ಸಿನ್ಹಾ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತ ಭಾರತವನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬುದನ್ನು ನಾವು ಗಮನಿಸಬೇಕು. ತಾಲಿಬಾನಿಗಳು ಪಾಕಿಸ್ತಾನದ ಮಡಿಲಿನಲ್ಲಿವೆ ಎಂಬ ಗ್ರಹಿಕೆಯ ಮೇಲೆ ಭಾರತ ಸರ್ಕಾರವು ಅಲ್ಲಿನ ಜನರಿಗೆ ಬಾಗಿಲು ಮುಚ್ಚುವುದು ಸರಿಯಲ್ಲ. ನಾವು ದೊಡ್ಡ ದೇಶವಾಗಿ, ತಾಲಿಬಾನಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸುಧಾರಿಸುವ ಕೆಲಸ ಮಾಡಬೇಕಾಗಿದೆ. ಪಾಕ್ ಪ್ರಭಾವ ಹೆಚ್ಚಿರುತ್ತದೆ ಎಂಬ ಸಂಶಯವನ್ನು ಬಿಟ್ಟು ಬಿಡಬೇಕು ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪಂಜಶೀರ್‌ನ ಪ್ರಬಲ ನಾಯಕ ಅಹ್ಮದ್ ಶಾ ಮಸೂದ್: ಈತನ ಹೆಸರು ಕೇಳಿದ್ರೆ ತಾಲಿಬಾನಿಗಳಿಗೇಕೆ ನಡುಕ?

ತಾಲಿಬಾನ್ ಬಹುತೇಕ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದೆ ಎಂದು ಹೇಳಿರುವ ಸಿನ್ಹಾ, ಕಾದು ನೋಡುವ ಮನೋಭಾವ ಉತ್ತಮವಾಗಿದೆ. ತಾಲಿಬಾನಿಗಳು ಈಗ ನೀಡುವ ಹೇಳಿಕೆಗಳಲ್ಲಿ ಪ್ರಬುದ್ಧರಾಗಿರುವಂತೆ ಅವರ ವರ್ತನೆಯಲ್ಲೂ ಬದಲಾಗಬಹುದು ಎಂಬ ಆಶಾಭಾವ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.