ETV Bharat / bharat

ಎಲ್ಲಿ ಕಳ್ಳತನ ಮಾಡಬೇಕೆಂದು ರಾತ್ರಿಯೇ ಕನಸು.. ಇವನ ಕೈಚಳಕಕ್ಕಿದೆ 30 ವರ್ಷದ ಇತಿಹಾಸ!

author img

By

Published : Apr 4, 2022, 8:35 PM IST

ಬಂಧಿತನ ಕಳ್ಳತನ ಇತಿಹಾಸ 30 ವರ್ಷಗಳಿಗೂ ಮೇಲ್ಪಟ್ಟಿದೆ. 1989ರಿಂದ ಹೈದ್ರಾಬಾದ್ ಹಾಗೂ ಕರ್ನಾಟಕದಲ್ಲಿ ಕಳ್ಳತನ ಶುರುವಿಟ್ಟಿಕೊಂಡಿದ್ದ. ಇದುವರೆಗೆ ಈತನ ವಿರುದ್ಧ ದಾಖಲಾದ ಒಟ್ಟು 43 ಪ್ರಕರಣಗಳ ಪೈಕಿ ಹೈದ್ರಾಬಾದ್ ಒಂದರಲ್ಲೇ 21 ಪ್ರಕರಣಗಳು ದಾಖಲಾಗಿವೆ.

GUNTUR THIEF DREAMING AT NIGHT AND MAKING THE DREAMS COME TRUE IN THE NEXT DAY
ಎಲ್ಲಿ ಕಳ್ಳತನ ಮಾಡಬೇಕೆಂದು ರಾತ್ರಿಯೇ ಕನಸು, ಇವನ ಕೈಚಳಕ್ಕಿದೆ 30 ವರ್ಷಗಳ ಇತಿಹಾಸ

ಹೈದರಾಬಾದ್​ (ತೆಲಂಗಾಣ): ಖದೀಮರು ಕಳ್ಳತನಕ್ಕೂ ಮುನ್ನ ಸರಿಯಾದ ಯೋಜನೆ ರೂಪಿಸಿಕೊಂಡು ಫೀಲ್ಡ್​​ಗೆ ಇಳಿಯುತ್ತಾರೆ. ಆದರೆ, ಇಲ್ಲೋರ್ವ ಕಳ್ಳ ಇವರೆಲ್ಲರಿಗಿಂತ ತುಂಬಾ ಡಿಫರೆಂಟ್​. ಈತನಿಗೆ ಎಲ್ಲಿ ಕಳ್ಳತನ ಮಾಡಬೇಕೆಂಬುದು ರಾತ್ರಿ ಕನಸಿನಲ್ಲಿ ಬರುತ್ತಿತ್ತಂತೆ. ಅದರಂತೆ ಮರುದಿನ ಕಳ್ಳತನ ಮಾಡುತ್ತಿದ್ದನಂತೆ. ಇದು ಯಾವುದೋ ಸಿನಿಮಾ ಕತೆಯಲ್ಲ, ಕಳ್ಳನೊಬ್ಬನ ನಿಜವಾದ ಕತೆ.!

ಇಂತಹ ಕಳ್ಳನೋರ್ವ ತೆಲಂಗಾಣದ ರಾಜಧಾನಿ ಹೈದರಾಬಾದ್​ನ ವನಸ್ಥಲಿಪುರಂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನ ಹೆಸರು ಮುಚ್ಚು ಅಂಬೇಡ್ಕರ್ ಅಲಿಯಾಸ್ ರಾಜು ಅಲಿಯಾಸ್ ಕಂದುಲ ರಾಜೇಂದ್ರ ಪ್ರಸಾದ್. ಮೂಲತಃ ಗುಂಟೂರು ಜಿಲ್ಲೆಯ ಪಿಡುಗುರಾಳ್ಳ ಗಾಂಧಿನಗರದವನು. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಈತನ ವಿರುದ್ಧ ಹೈದರಾಬಾದ್​ ಮತ್ತು ಕರ್ನಾಟಕದಲ್ಲಿ ಒಟ್ಟು 43 ಪ್ರಕರಣಗಳು ದಾಖಲಾಗಿವೆ.

30 ವರ್ಷಗಳಿಂದಲೂ ಕಳ್ಳತನ: ರಾಜುವಿನ ಕಳ್ಳತನದ ಇತಿಹಾಸ 30 ವರ್ಷಗಳಿಗೂ ಮೇಲ್ಪಟ್ಟಿದೆ. 1989ರಿಂದ ಹೈದರಾಬಾದ್ ಹಾಗೂ ಕರ್ನಾಟಕದಲ್ಲಿ ಕಳ್ಳತನ ಶುರುವಿಟ್ಟಿಕೊಂಡಿದ್ದ. 1991ರಲ್ಲಿ ಲಾಲಾಗುಡ ಪೊಲೀಸರು ಈತನನ್ನು ಬಂಧಿಸಿದ್ದರು. ನಂತರ ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಕೈಚಳಕ ಮುಂದುವರೆಸಿದ್ದ. ಕಳೆದ 10 ವರ್ಷಗಳಿಂದ ಹೈದರಾಬಾದ್​ನ ಉಪನಗರಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನದಲ್ಲಿ ತೊಡಗಿದ್ದ. ಇದುವರೆಗೆ ಈತನ ವಿರುದ್ಧ ದಾಖಲಾದ ಒಟ್ಟು 43 ಪ್ರಕರಣಗಳ ಪೈಕಿ ಹೈದರಾಬಾದ್ ಒಂದರಲ್ಲೇ 21 ಪ್ರಕರಣಗಳು ದಾಖಲಾಗಿವೆ.

ಕದ್ದ ವಸ್ತುವನ್ನು ಸುರಕ್ಷಿತವಾಗಿಟ್ಟಿದ್ದ: ಇದೀಗ ವನಸ್ಥಲಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಎಲ್ಲಿ ಕಳ್ಳತನ ಮಾಡಬೇಕೆಂದು ರಾತ್ರಿ ಕನಸಿನಲ್ಲಿ ಬರುತ್ತಿತ್ತು. ಅಂತೆಯೇ ಮರುದಿನ ಅಲ್ಲಿಗೆ ಹೋಗಿ ಕಳ್ಳತನ ಮಾಡುತ್ತಿದ್ದೆ ಎಂದು ಈ ಖದೀಮ ಹೇಳಿಕೊಂಡಿದ್ದಾನೆ. ಇನ್ನೊಂದು ಅಚ್ಚರಿ ಸಂಗತಿಯಂದರೆ ಕದ್ದ ಸ್ವತ್ತುಗಳನ್ನು ಈತ ಮಾರಾಟ ಮಾಡದೇ ಹಾಗೆ ಸುರಕ್ಷಿತವಾಗಿಟ್ಟಿದ್ದ ಎಂಬುದೂ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮೂರು ಅಂತಸ್ತಿನ ಕಟ್ಟಡ: ಬಂಧಿತ ಆರೋಪಿಯಿಂದ 2 ಕೆಜಿ ಚಿನ್ನಾಭರಣ, 10 ಕೆಜಿ ಬೆಳ್ಳಿ ಆಭರಣ ಹಾಗೂ 18 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಇದೆಲ್ಲವನ್ನೂ ಎಲ್ಲೂ ಮಾರಾಟ ಮಾಡದೆ ಮನೆಯಲ್ಲಿ ಬಚ್ಚಿಟ್ಟಿದ್ದ. ಗುಂಟೂರಿನಲ್ಲಿ ಆರೋಪಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವೂ ಇದೆ ಎಂದು ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್ ಭಾಗವತ್ ತಿಳಿಸಿದ್ದಾರೆ. ಅಲ್ಲದೇ, ಕದ್ದ ವಸ್ತುಗಳನ್ನು ಹೇಗೆ ತೆಗೆದುಕೊಂಡು ಹೋಗುತ್ತಿದ್ದನೋ, ಹಾಗೆಯೇ ತಂದು ಮನೆಯಲ್ಲಿಡುತ್ತಿದ್ದ. ಇದರಿಂದ ಒಡವೆ ಮಾಲೀಕರು ತಮ್ಮ ವಸ್ತುಗಳನ್ನು ಸುಲಭವಾಗಿ ಗುರುತಿಸಿದರು. ವನಸ್ಥಲಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಕಳ್ಳತನ ಮಾಡಿದ್ದಾನೆ ಎಂದೂ ಪೊಲೀಸ್​ ಆಯುಕ್ತರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೃಷಿ ಭೂಮಿ ಒತ್ತುವರಿ, ಅಕ್ರಮ ಗಣಿಗಾರಿಕೆ.. ಡೆತ್​ ನೋಟ್ ಬರೆದಿಟ್ಟು ರೈತ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.