ETV Bharat / bharat

ಕಾಂಗ್ರೆಸ್ ಸಂಘರ್ಷಕ್ಕೆ 'ಗಾಂಧಿಗಳೇ' ಜವಾಬ್ದಾರಿ : ಕಾಂಗ್ರೆಸ್ ಹಿರಿಯ ನಾಯಕ ನಟವರ್ ಸಿಂಗ್

author img

By

Published : Oct 1, 2021, 10:33 AM IST

ಕಾಂಗ್ರೆಸ್ ಪಕ್ಷದಲ್ಲಿ ಯಾರೂ ಮಾರ್ಗದರ್ಶಕರಿಲ್ಲ. ಎಲ್ಲರೂ ತಾವೇ ತೀಸ್ ಮಾರ್​ ಖಾನ್ ಎಂದು ಭಾವಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ನಟವರ್ ಸಿಂಗ್ ಕಿಡಿಕಾರಿದ್ದಾರೆ.

Gandhis responsible for Congress' mess: Natwar Singh
ಕಾಂಗ್ರೆಸ್ ಸಂಘರ್ಷಕ್ಕೆ 'ಗಾಂಧಿಗಳೇ' ಜವಾಬ್ದಾರಿ : ಕಾಂಗ್ರೆಸ್ ಹಿರಿಯ ನಾಯಕ ನಟವರ್ ಸಿಂಗ್

ನವದೆಹಲಿ: ಪಂಜಾಬ್, ಗೋವಾ, ಛತ್ತೀಸ್​ಗಢ, ಗುಜರಾತ್​ನ ರಾಜ್ಯಗಳ ಕಾಂಗ್ರೆಸ್​ ಪಕ್ಷದಲ್ಲಿ ಅಧಿಕಾರಕ್ಕೋಸ್ಕರ ಅಸಮಾಧಾನಗಳು ಭುಗಿಲೆದ್ದಿವೆ. ಈ ಹಿನ್ನೆಲೆ ಕಾಂಗ್ರೆಸ್​ನ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ನಟವರ್​ ಸಿಂಗ್​ ಅಸಮಾಧಾನವನ್ನು ಹೊರಹಾಕಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ನಟವರ್​ ಸಿಂಗ್ ಕಾಂಗ್ರೆಸ್ ಬಿಜೆಪಿ ಸೋಲಿಸುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅವರು ಒಂದು ನಿಲುವನ್ನು ತೆಗೆದುಕೊಂಡರೇ, ತೀರ್ಪು ಕೆಟ್ಟದಾಗಿ ತೆಗೆದುಕೊಳ್ಳುತ್ತಾರೆ. ಅವರಿಗೆ ಸಲಹೆಗಾರರಿಲ್ಲ. ಅವರು ತಮ್ಮನ್ನು ತೀಸ್ ಮಾರ್ ಖಾನ್ ಎಂದೇ ಭಾವಿಸಿಕೊಳ್ಳುತ್ತಾರೆ ಎಂದು ನಟವರ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಪಂಜಾಬ್​​ ಕಾಂಗ್ರೆಸ್​ನ ದುರವಸ್ಥೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಟವರ್ ಸಿಂಗ್ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ನಂತರ ಕಾಂಗ್ರೆಸ್ ಹೈಕಮಾಂಡನ್ನು ಟೀಕಿಸಿದ್ದು, ರಾಜಕೀಯದಲ್ಲಿ ಸಾಕಷ್ಟು ಅನುಭವ ಇರದ 'ಗಾಂಧಿಗಳು' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಎನ್​ಐನೊಂದಿಗೆ ಈ ಕುರಿತು ಮಾತನಾಡಿದ ನಟವರ್ ಸಿಂಗ್ ಕಾಂಗ್ರೆಸ್​​​ನಲ್ಲಿ ಸಲಹೆ ನೀಡಲು ಮಾರ್ಗದರ್ಶಕರಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿಂಗಳ ಆರಂಭದಲ್ಲೇ ಗ್ರಾಹಕರಿಗೆ ಶಾಕ್​.. ಎಲ್​ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.