ETV Bharat / bharat

ಕಲ್ಲಿದ್ದಲು ಕಳ್ಳತನ ಯತ್ನ: ನಾಲ್ವರ ಹತ್ಯೆಗೈದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ

author img

By

Published : Nov 20, 2022, 10:01 AM IST

encounter in dhanbad
ಧನ್​ಬಾದ್‌ನ ಬಿಸಿಸಿಎಲ್ ಬ್ಲಾಕ್​ನಲ್ಲಿ ನಡೆದ ಎನ್‌ಕೌಂಟರ್‌

ಜಾರ್ಖಂಡ್‌ ರಾಜ್ಯದ ಧನ್​ಬಾದ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಕಲ್ಲಿದ್ದಲು ಕಳ್ಳರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಹತ್ಯೆಗೈದಿದೆ.

ಜಾರ್ಖಂಡ್‌: ನಿನ್ನೆ ತಡರಾತ್ರಿ ಧನ್‌ಬಾದ್ ಜಿಲ್ಲೆಯ ಬಾಗ್ಮಾರಾ ಡುಮ್ರಾ ಎಂಬಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಮತ್ತು ಕಲ್ಲಿದ್ದಲು ಕಳ್ಳರ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ನಾಲ್ವರು ಕಳ್ಳರನ್ನು ಹತ್ಯೆಗೈಯ್ಯಲಾಗಿದೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಧನ್​ಬಾದ್‌ನ ಬಿಸಿಸಿಎಲ್ ಬ್ಲಾಕ್​ನಲ್ಲಿ ನಡೆದ ಎನ್‌ಕೌಂಟರ್‌

ಕಲ್ಲಿದ್ದಲು ಕದಿಯುವ ಉದ್ದೇಶದಿಂದ ಬಾಗ್ಮಾರಾದ ಡುಮ್ರಾದಲ್ಲಿರುವ (ಭಾರತ್ ಕುಕ್ಕಿಂಗ್ ಕೋಲ್ ಲಿಮಿಟೆಡ್) ಬಿಸಿಸಿಎಲ್ ಬ್ಲಾಕ್ 2 ರ ಕೆಕೆಸಿ ಮುಖ್ಯ ಸೈಡಿಂಗ್​ ಮೇಲೆ ಮಾರಕಾಸ್ತ್ರಗಳಸಮೇತ ಕಳ್ಳರ ತಂಡ ದಾಳಿ ಮಾಡಿತು. ಈ ಸಂದರ್ಭದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯೂ ಸಹ ಪ್ರತಿದಾಳಿ ನಡೆಸಿದ್ದಾರೆ. ಎರಡೂ ಕಡೆಯಿಂದ ತೀವ್ರ ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಕಳ್ಳರು ಸಾವನ್ನಪ್ಪಿದ್ದಾರೆ. ಬಾದಲ್ ರವಣಿ ಮತ್ತು ರಮೇಶ್ ರಾಮ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತೀಯ ಮೀನುಗಾರರ ಮೇಲೆ ಲಂಕಾ ನೌಕಾಪಡೆ ದಾಳಿ: 14 ಮಂದಿ ಬಂಧನ

ಇಂದು ಮುಂಜಾನೆ 4 ಗಂಟೆಯ ಸುಮಾರಿಗೆ ಗುಂಡೇಟು ತಿಂದ ಎಲ್ಲಾ ಆರೋಪಿಗಳನ್ನು ಶಹೀದ್ ನಿರ್ಮಲ್ ಮಹತೋ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಇಬ್ಬರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಗೆ ಕಳುಹಿಸಲಾಗಿದೆ. ಈ ಬಗ್ಗೆ ಸಿಐಎಸ್‌ಎಫ್ ಮತ್ತು ಜಿಲ್ಲಾ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಪ್ರಕಟವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.