ETV Bharat / bharat

ನಾಯಕರ ಎನ್​ಕೌಂಟರ್​, ಬಂಧನ; ಅಸ್ತಿತ್ವ ಕಳೆದುಕೊಳ್ಳುತ್ತಿರುವ ನಿಷೇಧಿತ ಮಾವೋವಾದಿ ಸಂಘಟನೆ

author img

By ETV Bharat Karnataka Team

Published : Sep 29, 2023, 7:59 PM IST

encounters-and-arrests-of-leaders-banned-maoist-outfit-is-losing-its-existence
encounters-and-arrests-of-leaders-banned-maoist-outfit-is-losing-its-existence

ನಿಷೇಧಿತ ಮಾವೋವಾದಿ ಸಂಘಟನೆಯು ದಿನೇ ದಿನೆ ಬಲ ಕಳೆದುಕೊಳ್ಳುತ್ತಿದೆ.

ಹೈದರಾಬಾದ್: ನಾಲ್ಕೂವರೆ ದಶಕಗಳ ಇತಿಹಾಸ ಹೊಂದಿರುವ ನಿಷೇಧಿತ ಮಾವೋವಾದಿ ಸಂಘಟನೆಯು ಪ್ರಸ್ತುತ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ನಾಯಕರ ಎನ್​ಕೌಂಟರ್​ಗಳು, ಬಂಧನ, ಅನಾರೋಗ್ಯದಿಂದ ಸಾವು ಅಥವಾ ಶರಣಾಗತಿಯಿಂದಾಗಿ ಉನ್ನತ ನಾಯಕರು ಒಬ್ಬೊಬ್ಬರಾಗಿ ಖಾಲಿಯಾಗಿದ್ದರಿಂದ ಮಾವೋವಾದಿ ಸಂಘಟನೆ ದಿಕ್ಕಿಲ್ಲದಂತಾಗಿದೆ.

ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕಟಕಂ ಸುದರ್ಶನ್ ಈ ವರ್ಷದ ಆರಂಭದಲ್ಲಿ ಅನಾರೋಗ್ಯದಿಂದ ನಿಧನರಾದರು. ಮತ್ತೊಬ್ಬ ಪಾಲಿಟ್ ಬ್ಯೂರೋ ಸದಸ್ಯ ಪ್ರಮೋದ್ ಮಿಶ್ರಾ ಅಲಿಯಾಸ್ ಬನ್ಬಿಹಾರಿ ಅವರನ್ನು ಆಗಸ್ಟ್ ನಲ್ಲಿ ಬಿಹಾರದಲ್ಲಿ ಬಂಧಿಸಲಾಯಿತು ಮತ್ತು ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅವರನ್ನು ಒಂದು ವಾರದ ಹಿಂದೆ ಹೈದರಾಬಾದ್ ನಲ್ಲಿ ಬಂಧಿಸಲಾಯಿತು.

ಸೆಪ್ಟೆಂಬರ್ 21, 2004 ರಂದು ಹಿಂದಿನ ಸಿಪಿಐ-ಪೀಪಲ್ಸ್ ವಾರ್ ಮತ್ತು ಮಾವೋವಾದಿ ಕಮ್ಯುನಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಂಸಿಸಿಐ) ಇವುಗಳ ವಿಲೀನದಿಂದ ಸಿಪಿಐ - ಮಾವೋವಾದಿ ಸಂಘಟನೆ ಹೊರಹೊಮ್ಮಿತು. ಆಗ ಇದರ ಕೇಂದ್ರ ಸಮಿತಿಯಲ್ಲಿ 32 ಸದಸ್ಯರು ಮತ್ತು ಪಾಲಿಟ್ ಬ್ಯೂರೋದಲ್ಲಿ 13-14 ಸದಸ್ಯರು ಇದ್ದರು. ಅವರಲ್ಲಿ 11 ಜನರನ್ನು ಬಂಧಿಸಲಾಗಿದ್ದು, ಮೂವರು ಎನ್​ಕೌಂಟರ್​ನಲ್ಲಿ ಮತ್ತು ನಾಲ್ವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಪ್ರಸ್ತುತ, ನೀತಿ ನಿರ್ಧಾರಗಳಿಗೆ ನಿರ್ಣಾಯಕವಾದ ಪಾಲಿಟ್ ಬ್ಯೂರೋದ ಐದು ಸದಸ್ಯರು ಸೇರಿದಂತೆ ಕೇಂದ್ರ ಸಮಿತಿ ಸದಸ್ಯರ ಸಂಖ್ಯೆ 18 ಕ್ಕೆ ಇಳಿದಿದೆ. ಐದು ವರ್ಷಗಳ ಹಿಂದೆ, ದಂಡಕಾರಣ್ಯದ 14,000 ಚದರ ಕಿಲೋಮೀಟರ್ ದಟ್ಟ ಕಾಡಿನ ಮೇಲೆ ಮಾವೋವಾದಿಗಳು ಬಲವಾದ ಹಿಡಿತ ಹೊಂದಿದ್ದರು. ಪ್ರಸ್ತುತ ಈ ಹಿಡಿತ 5 ಸಾವಿರ ಚದರ ಕಿ.ಮೀ.ಗೆ ಇಳಿದಿದೆ ಎಂಬುದು ಗಮನಾರ್ಹ.

ಪ್ರಸ್ತುತ ತೆಲಂಗಾಣ ನಾಯಕರು ಸಿಪಿಐ-ಮಾವೋವಾದಿ ಸಮಘಟನೆಯಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೇಂದ್ರ ಸಮಿತಿಯ 18 ಸದಸ್ಯರಲ್ಲಿ 11 ಮಂದಿ ಈ ರಾಜ್ಯದವರು. ಛತ್ತೀಸ್ ಗಢ ಸರ್ಕಾರವು ಪೊಲಿಟ್ ಬ್ಯೂರೋ ಸದಸ್ಯರಿಗೆ 1 ಕೋಟಿ ರೂ. ಮತ್ತು ಕೇಂದ್ರ ಸಮಿತಿಯ ಸದಸ್ಯರಿಗೆ 40 ಲಕ್ಷ ರೂ ದಂಡ ವಿಧಿಸಿದೆ.

ಪ್ರಸ್ತುತ ಪಾಲಿಟ್ ಬ್ಯೂರೋ ನಾಯಕರು: ತೆಲಂಗಾಣದ ಮುಪ್ಪಲ ಲಕ್ಷ್ಮಣ್ ರಾವ್ ಅಲಿಯಾಸ್ ಗಣಪತಿ, ಮಲ್ಲೋಜುಲಾ ವೇಣುಗೋಪಾಲ್ ಅಲಿಯಾಸ್ ಸೋನು, ತೆಲಂಗಾಣದ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್​ ಜಿ, ಆಂಧ್ರಪ್ರದೇಶದ ನಂಬಲ ಕೇಶವರಾವ್ ಅಲಿಯಾಸ್ ಬಸವರಾಜ್ ಮತ್ತು ಜಾರ್ಖಂಡ್​ನ ಮಿಸಿರ್ ಬೆಸ್ರಾ ಅಲಿಯಾಸ್ ಸುನಿರ್ಮಲ್.

ಕೇಂದ್ರ ಸಮಿತಿ ವಿವರ: ಮಲ್ಲಾ ರಾಜಿರೆಡ್ಡಿ ಅಲಿಯಾಸ್ ಸಂಗ್ರಾಮ್, ಕದರಿ ಸತ್ಯನಾರಾಯಣ ರೆಡ್ಡಿ ಅಲಿಯಾಸ್ ಕೋಸಾ, ಪುಲ್ಲೂರಿ ಪ್ರಸಾದ್ ರಾವ್ ಅಲಿಯಾಸ್ ಚಂದ್ರಣ್ಣ, ಮೊಡೆಮ್ ಬಾಲಕೃಷ್ಣ ಅಲಿಯಾಸ್ ಮನೋಜ್, ಕಟ್ಟಾ ರಾಮಚಂದ್ರ ರೆಡ್ಡಿ ಅಲಿಯಾಸ್ ಗುಡ್ಡಸೌಸೆಂಡಿ, ಗಣೇಶ್ ಯುಕೆ ಅಲಿಯಾಸ್ ಪಾಕಾ ಹನುಮಂತು, ಗಜರ್ಲಾ ರವಿ ಅಲಿಯಾಸ್ ಗಣೇಶ್, ಪೋತುಲಾ ಕಲ್ಪನಾ ಅಲಿಯಾಸ್ ಮೈನಕ್ಕ. ಇವರೆಲ್ಲರೂ ತೆಲಂಗಾಣ ಮೂಲದವರು. ರಾಮಚಂದ್ರ ರೆಡ್ಡಿ, ಪ್ರತಾಪ್ ರೆಡ್ಡಿ ಅಲಿಯಾಸ್ ಚಲಪತಿ ಮತ್ತು ಲಕ್ಷ್ಮೀನರಸಿಂಹಾಚಲಂ ಅಲಿಯಾಸ್ ಸುಧಾಕರ್ ಇವರೆಲ್ಲರೂ ಆಂಧ್ರಪ್ರದೇಶ ಮೂಲದವರು. ಪಥಿರಾಮ್ ಮಂಜಿ ಅಲಿಯಾಸ್ ಅನಲ್ಡಾ ಮತ್ತು ವಿವೇಕ್ ಚಂದರಿಯಾದವ್ ಅಲಿಯಾಸ್ ಪ್ರಯಾಗ್ಡಾ ಇವರು ಜಾರ್ಖಂಡ್ ಮೂಲದವರು. ಪಶ್ಚಿಮ ಬಂಗಾಳದ ಸಬ್ಯಸಾಚಿ ಗೋಸ್ವಾಮಿ ಅಲಿಯಾಸ್ ಅಜಯ್ ದಾ.

ಇದನ್ನೂ ಓದಿ : ಭಾರತದ ವಿದೇಶಿ ವಿನಿಮಯ ಮೀಸಲು ಇಳಿಕೆ: ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.