ETV Bharat / bharat

ಪುದುಚೇರಿಯಲ್ಲಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಾರಿನ ಮೇಲೆ ದಾಳಿ

author img

By

Published : Aug 22, 2022, 11:36 AM IST

Updated : Aug 22, 2022, 12:48 PM IST

leader-dinesh-gundurao-car
ದಿನೇಶ್ ಗುಂಡೂರಾವ್ ಕಾರಿನ ಮೇಲೆ ದಾಳಿ

ಉಸ್ತುವಾರಿ, ರಾಜ್ಯ ಕಾಂಗ್ರೆಸ್ ಹಿರಿಯ​ ನಾಯಕ ದಿನೇಶ್​ ಗುಂಡೂರಾವ್​ ಅವರ ಕಾರಿನ ಮೇಲೆ ಸ್ವಪಕ್ಷೀಯರೇ ದಾಳಿ ಮಾಡಿ ಮುಜುಗರ ಉಂಟು ಮಾಡಿದ ಘಟನೆ ಪುದುಚೇರಿಯಲ್ಲಿಂದು ನಡೆದಿದೆ.

ಪುದುಚೇರಿ: ರಾಜ್ಯ ಕಾಂಗ್ರೆಸ್​ ಹಿರಿಯ ನಾಯಕ ದಿನೇಶ್​ ಗುಂಡೂರಾವ್​ ಅವರ ಕಾರಿನ ಮೇಲೆ ಸ್ವಪಕ್ಷೀಯರೇ ದಾಳಿ ನಡೆಸಿದ ಘಟನೆ ಪುದುಚೇರಿಯಲ್ಲಿ ಇಂದು ನಡೆದಿದೆ. ಕಾರ್ಯಕಾರಿಣಿ ಸಭೆ ಮುಗಿಸಿ ಬರುತ್ತಿದ್ದಾಗ ಮುತ್ತಿಗೆ ಹಾಕಿದ ಕಾರ್ಯಕರ್ತರು ಗುಂಡೂರಾವ್​ರನ್ನು ತಳ್ಳಾಡಿದ ಪ್ರಸಂಗವೂ ನಡೆಯಿತು.

ಇಲ್ಲಿನ ವಯ್ಯಲ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕಾರ್ಯಕಾರಿಣಿ ಸಭೆ ನಡೆಯಿತು. ಪುದುಚೇರಿ ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ಸುಬ್ರಮಣಿಯನ್ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ವೇಳೆ ಪ್ರತ್ಯೇಕ ಗುಂಪೊಂದು ರಾಜ್ಯಾಧ್ಯಕ್ಷರ ಅಧಿಕಾರವಧಿ ಕುರಿತಾಗಿ ಗಲಾಟೆ ಶುರು ಮಾಡಿದೆ. ರಾಜ್ಯಾಧ್ಯಕ್ಷರ ಅಧಿಕಾರ ಅವಧಿ ಮುಗಿದಿದೆ. ಅವರನ್ನು ಬದಲಾಯಿಸಬೇಕು ಎಂದು ಪಟ್ಟು ಹಿಡಿಯಿತು. ಸಭೆಯಲ್ಲಿ ಗದ್ದಲ ಉಂಟಾದ್ದರಿಂದ ಮಾಜಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸಭೆಯಿಂದ ಹೊರ ನಡೆದರು. ಇದರ ಬೆನ್ನಲ್ಲೇ ದಿನೇಶ್​ ಗುಂಡೂರಾವ್ ಅವರು ಸಭೆಯಿಂದ ಹೊರಬಂದಾಗ ಮುತ್ತಿಗೆ ಹಾಕಿದ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ದಿನೇಶ್​ರನ್ನು ತಳ್ಳಾಡಿದ್ದಾರೆ.

ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ. ಅವರನ್ನು ಬದಲಿಸಬೇಕು ಎಂದು ಘೋಷಣೆ ಕೂಗುತ್ತಾ ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಎಲ್ಲರನ್ನು ಸಂತೈಸಲು ಪರದಾಡಿದ ದಿನೇಶ್​ ಗುಂಡೂರಾವ್​ ಅವರು ಬಳಿಕ ಹೇಗೋ ನುಸುಳಿಕೊಂಡು ಕಾರು ಹತ್ತಿದರು. ಆದರೂ ಬಿಡದ ಪಕ್ಷದ ಪದಾಧಿಕಾರಿಗಳು ಕಾರಿನ ಸುತ್ತಲೂ ಮುತ್ತಿಗೆ ಹಾಕಿ ಗಲಾಟೆ ಮಾಡಿದರು.

ಇದನ್ನೂ ಓದಿ: ಕೆಪಿಟಿಸಿಎಲ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಕೂಡ ಲೀಕ್? ಗದಗ ಕಾಲೇಜು ಉಪ ಪ್ರಾಚಾರ್ಯ, ಪುತ್ರನ ಬಂಧನ

Last Updated :Aug 22, 2022, 12:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.