ETV Bharat / bharat

ಲವ್​ ಜಿಹಾದ್ ಕೇಸ್​: ಬಿಜೆಪಿ ಸಂಸದೆ ನವನೀತ್​ ರಾಣಾ, ಪೊಲೀಸ್​ ಮಧ್ಯೆ ವಾಗ್ವಾದ

author img

By

Published : Sep 7, 2022, 3:56 PM IST

love-jihad-case
ಲವ್​ ಜಿಹಾದ್ ಕೇಸ್

ಅಮರಾವತಿ ಲವ್​ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ನವನೀತ್​ ರಾಣಾ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.

ಅಮರಾವತಿ(ಮಹಾರಾಷ್ಟ್ರ): ಅನ್ಯ ಧರ್ಮದ ಯುವಕನೊಬ್ಬ ಯುವತಿಯನ್ನು ಅಪಹರಿಸಿ ಲವ್​ ಜಿಹಾದ್​ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಬಿಜೆಪಿ ಸಂಸದೆ ನವನೀತ್​ ರಾಣಾ ಅವರ ಮಧ್ಯೆ ಭಾರೀ ವಾಗ್ವಾದ ನಡೆದಿದೆ. ಯುವಕನನ್ನು ಬಂಧಿಸಿದ್ದರೂ, ಯುವತಿ ಪತ್ತೆಯಾಗದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್​ ಠಾಣೆಯಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.

ಲವ್​ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿಲು ಸಂಸದೆ ರಾಣಾ ಅವರು ಯುವತಿಯ ಕುಟುಂಬಸ್ಥರೊಂದಿಗೆ ಪೊಲೀಸ್​ ಠಾಣೆಗೆ ಹೋಗಿದ್ದರು. ಯುವಕ-ಯುವತಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಯುವತಿಯನ್ನು ಕೂಡಲೇ ಕುಟುಂಬಸ್ಥರಿಗೆ ಒಪ್ಪಿಸಿ ಎಂದು ನವನೀತ್​ ರಾಣಾ ಒತ್ತಾಯಿಸಿದರು.

ಅಲ್ಲದೇ, ಈ ಬಗ್ಗೆ ಕರೆ ಮಾಡಿ ಮಾಹಿತಿ ಕೇಳಿದಾಗ ನನ್ನ ಮಾತನ್ನು ರೆಕಾರ್ಡ್​ ಮಾಡಲಾಗಿದೆ. ರೆಕಾರ್ಡ್​ ಮಾಡುವ ಅಗತ್ಯವೇನಿತ್ತು. ಅಲ್ಲದೇ, ಆ ಅಧಿಕಾರವನ್ನು ನಿಮಗೆ ಯಾರು ನೀಡಿದರು ಎಂದೆಲ್ಲಾ ಸಂಸದೆ ದಬಾಯಿಸಿದ್ದಾರೆ.

ಬಿಜೆಪಿ ಸಂಸದೆ ನವನೀತ್​ ರಾಣಾ, ಪೊಲೀಸ್​ ಮಧ್ಯೆ ವಾಗ್ವಾದ

ಇದು ಪೊಲೀಸ್ ಮತ್ತು ಸಂಸದರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಬಳಿಕ ಪೊಲೀಸರ ವಿರುದ್ಧ ಹರಿಹಾಯ್ದ ಸಂಸದೆ ಅಮರಾವತಿ ಲವ್​ ಜಿಹಾದ್​​ ಪ್ರಕರಣದಲ್ಲಿ ಯುವಕನನ್ನು ಬಂಧಿಸಲಾಗಿದೆ. ಯುವತಿ ಇನ್ನೂ ಪತ್ತೆಯಾಗಿಲ್ಲ. ಶೀಘ್ರವೇ ಅಕೆಯನ್ನು ಕುಟುಂಬಸ್ಥರ ಮುಂದೆ ಹಾಜರುಪಡಿಸಿ. ಯುವಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಓದಿ: ರಕ್ಷಣಾ ಸಚಿವರ ಮಂಗೋಲಿಯಾ ಭೇಟಿ: ಅಧ್ಯಕ್ಷರಿಂದ ಕುದುರೆ ಉಡುಗೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.