ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ನಟಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಬಿಜೆಪಿ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಕೊರೊನಾ ವೈರಸ್ಗಿಂತ ಬಿಜೆಪಿ ಹೆಚ್ಚು ಅಪಾಯಕಾರಿಯಾಗಿದ್ದು, ಇದರಿಂದ ದೂರವಿರಬೇಕು. ಬಿಜೆಪಿ ಬಂದು ಬಂಗಾಳದ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಮಾಡಲು ಸಾಧ್ಯವಿಲ್ಲ. ಜಾತಿ, ಧರ್ಮಗಳ ಹೊರತಾಗಿ ನಾವೆಲ್ಲರೂ ಇಲ್ಲಿ ಒಟ್ಟಾಗಿ ಬಾಳುತ್ತಿದ್ದೇವೆ. ಹೊರಗಿನಿಂದ ಯಾರೂ ಬಂದು ಆ ಐಕ್ಯತೆಯನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ರ್ಯಾಲಿಯಲ್ಲಿ ನುಸ್ರತ್ ಹೇಳಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಭೀಕರ ರಸ್ತೆ ಅಪಘಾತ: ಕಂಬನಿ ಮಿಡಿದ ಪ್ರಧಾನಿ
ಬಿಜೆಪಿಯವರು ಧರ್ಮವನ್ನು ಗಲಭೆ, ಹಿಂಸಾಚಾರ ಉಂಟುಮಾಡುವ ಅಸ್ತ್ರವನ್ನಾಗಿ ಬಳಸುತ್ತಾರೆ. ಅವರ ಕೈಗಳು ರಕ್ತದಿಂದ ಕೆಂಪಾಗಿರುತ್ತವೆ. ಬಿಜೆಪಿ ಪಕ್ಷಕ್ಕೆ ಹಣದ ಕೊರತೆಯಿಲ್ಲ, ಜನರ ಕಠಿಣ ಪರಿಶ್ರಮ ಅವರಿಗೆ ಅರ್ಥವಾಗುವುದಿಲ್ಲ. ಅವರಿಗೆ ಧರ್ಮದೊಂದಿಗೆ ರಾಜಕೀಯ ಹೇಗೆ ಮಾಡಬೇಕೆಂದು ಮಾತ್ರ ತಿಳಿದಿದೆ ಎಂದು ಬಿಜೆಪಿಗೆ ಸಂಸದೆ ಟಾಂಗ್ ನೀಡಿದ್ದಾರೆ.