ETV Bharat / bharat

ಎಂಎಸ್​ಪಿ ಕೊನೆಗೊಳ್ಳುತ್ತದೆ ಎಂದು ನಾವು ಯಾವತ್ತು ಹೇಳಿದ್ದೇವೆ..? ಪ್ರಧಾನಿ ಹೇಳಿಕೆ ಟಿಕಾಯತ್ ತಿರುಗೇಟು!​

author img

By

Published : Feb 8, 2021, 1:54 PM IST

Rakesh Tikait
ರಾಕೇಶ್ ಟಿಕೈಟ್

ಎಂಎಸ್​ಪಿ ಹೀಗೆಯೇ ಮುಂದುವರಿಯುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಆಶ್ವಾಸನೆ ನೀಡಿದ ಬೆನ್ನಲ್ಲೇ ನಾವೇನು ಕೊನೆಗೊಳಿಸಿ ಎಂದಿಲ್ಲ ಎಂದು ರಾಕೇಶ್ ಟಿಕಾಯತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಕನಿಷ್ಠ ಬೆಂಬಲ ಬೆಲೆ ಹೀಗೆ ಮುಂದುವರಿಯುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಆಶ್ವಾಸನೆ ನೀಡಿದ ಬೆನ್ನಲ್ಲೇ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್​ ಪ್ರತಿಕ್ರಿಯಿಸಿದ್ದಾರೆ.

ಎಂಎಸ್​ಪಿ ಕೊನೆಗೊಳ್ಳುತ್ತಿದೆ ಎಂದು ನಾವು ಯಾವತ್ತು ಹೇಳಿದ್ದೇವೆ? ಎಂಎಸ್‌ಪಿ ಮೇಲೆ ಕಾನೂನು ರಚಿಸಿ ಎಂದು ನಾವು ಹೇಳಿದ್ದೇವೆ. ಅಂತಹ ಕಾನೂನು ರೂಪುಗೊಂಡರೆ ದೇಶದ ಎಲ್ಲ ರೈತರಿಗೆ ಅನುಕೂಲವಾಗಲಿದೆ. ಆದರೆ, ಇಲ್ಲಿಯವರೆಗೆ ಎಂಎಸ್‌ಪಿಗೆ ಯಾವುದೇ ಕಾನೂನು ಇಲ್ಲ. ಹಾಗಾಗಿ ವ್ಯಾಪಾರಿಗಳು ರೈತರನ್ನು ಲೂಟಿ ಮಾಡುತ್ತಾರೆ, ಎಂದು ಟಿಕಾಯತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ: ರೈತರಿಗೆ ಮೋದಿ ಭರವಸೆ

ಎಂಎಸ್​ಪಿ ಹೀಗೆಯೇ ಮುಂದುವರಿಯುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರಧಾನಿ ಆಶ್ವಾಸನೆ ನೀಡಿದ್ದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯೂ ಅದೇ ರೀತಿ ಸಾಗುತ್ತದೆ. ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಹಾಗೂ ಕೃಷಿ ಕಾನೂನುಗಳ ಬಗ್ಗೆ ರೈತರ ಆಕ್ಷೇಪಣೆಯನ್ನು ಪರಿಹರಿಸಲು ಸಿದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.