ETV Bharat / bharat

ವಿಶೇಷ ಅಂಕಣ: ಶಾಸಕಾಂಗಗಳಲ್ಲಿ ಮೌಲ್ಯಗಳ ಉಲ್ಲಂಘನೆ..!

author img

By

Published : Sep 24, 2020, 2:00 PM IST

ಶಾಸಕಾಂಗಗಳಲ್ಲಿ ಮೌಲ್ಯಗಳ ಉಲ್ಲಂಘನೆ
ಶಾಸಕಾಂಗಗಳಲ್ಲಿ ಮೌಲ್ಯಗಳ ಉಲ್ಲಂಘನೆ

ಅನೇಕ ರೈತ ಸಂಘಗಳು ಮತ್ತು ರಾಜ್ಯ ಸರ್ಕಾರಗಳು ಮಸೂದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರೂ, ಕೇಂದ್ರ ಸರ್ಕಾರ ಸಮಗ್ರ ಚರ್ಚೆ ಮತ್ತು ಸರಿಯಾದ ಪರಿಶೀಲನೆ ಇಲ್ಲದೆ ಮುಂದುವರಿಯುವುದು ಅಸಮಂಜಸವಾಗಿದೆ. ಸಂಸತ್ತು ಶಾಸನ ರಚನೆಗೆ ಒಂದು ವೇದಿಕೆ‌ ಮಾತ್ರವಲ್ಲ, ಸಮಗ್ರ ಚರ್ಚೆಯ ವೇದಿಕೆಯಾಗಿದೆ.

ಕಳೆದ ಐದು ವರ್ಷಗಳಲ್ಲಿ ಸುಮಾರು ನಾಲ್ಕು ಲಕ್ಷ ರೈತರ ಆತ್ಮಹತ್ಯೆ ಪ್ರಕರಣಗಳು ದೇಶದ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಕುರಿತು ಬೆಳಕು ಚೆಲ್ಲುತ್ತವೆ. ಕೃಷಿ ಆರ್ಥಿಕತೆಯನ್ನು ಉತ್ತೇಜಿಸಲು ಮತ್ತು ಕ್ರೋಢೀಕರಿಸಲು ಎನ್​ಡಿಎ ಸರ್ಕಾರ ಸಂಸತ್​ನಲ್ಲಿ ಮಂಡಿಸಿರುವ ರೈತರ ಕಲ್ಯಾಣಕ್ಕಾಗಿ ವಿಸ್ತೃತ ಪರಿಹಾರ ಒದಗಿಸಲು ಉದ್ದೇಶಿಸಿರುವ ಪ್ರಮುಖ ಮಸೂದೆಗಳು ಪಂಜಾಬ್ ಮತ್ತು ಹರಿಯಾಣದ ರೈತರಲ್ಲಿ ಆಕ್ರೋಶವನ್ನು ಉಂಟುಮಾಡಿವೆ. ಇದು ರಾಜ್ಯಸಭೆಯಲ್ಲಿ ಕೋಲಾಹಲವನ್ನ ಸಹ ಸೃಷ್ಟಿಸಿದೆ.

ಈ ವಿವಾದಾತ್ಮಕ ಮಸೂದೆ ಲೋಕಸಭೆಯಲ್ಲಿ ಬಹಳ ಸುಲಭವಾಗಿ ಅಂಗೀಕಾರಗೊಂಡಿತು. ಆದರೆ ಆಡಳಿತ ಪಕ್ಷದ ಬೆಂಬಲಿತ ಪಕ್ಷವಾಗಿರುವ ಹಾಗೂ ಕೇಂದ್ರ ಸಚಿವ ಸ್ಥಾನ ಹೊಂದಿದ್ದ ಶಿರೋಮಣಿ ಅಕಾಲಿದಳದ ಸದಸ್ಯರ ರಾಜೀನಾಮೆಯೊಂದಿಗೆ ವಿವಾದ ನಾಂದಿ ಪಡೆಯಿತು. ಆಡಳಿತ ಪಕ್ಷದ ಕಡು ವಿರೋಧಿಗಳಾದ ಬಿಜೆಡಿ, ಎಐಎಡಿಎಂಕೆ, ಟಿಆರ್‌ಎಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಅಕಾಲಿದಳದ ಸದಸ್ಯರು ಮೇಲ್ಮನೆಯಲ್ಲಿ ಕೋಲಾಹಲವನ್ನು ಎಬ್ಬಿಸಿದ್ದಾರೆ. ಮಸೂದೆಯನ್ನು ವಿರೋಧಿಸುತ್ತಿರುವ ಎನ್​ಡಿಎ ವಿರೋಧ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ಮಸೂದೆಯನ್ನು ಜಂಟಿ ಸದನ ಸಮಿತಿಗೆ ವರ್ಗಾಯಿಸುವಂತೆ ಒತ್ತಾಯಿಸಿವೆ ಮತ್ತು ಮಸೂದೆಯ ಸಮಗ್ರ ಪರಿಶೀಲನೆಗೆ ಆಗ್ರಹಿಸಿವೆ. ಜತೆಗೆ ಮಸೂದೆಯ ಚರ್ಚೆಯ ಮೇಲೆ ರಾಜ್ಯಸಭೆಯಲ್ಲಿ ಮತದಾನಕ್ಕೆ ಒತ್ತಾಯಿಸಿವೆ. ಈ ಮಧ್ಯೆ ಬಿಕ್ಕಟ್ಟು ಇನ್ನಷ್ಟು ಜಟಿಲಗೊಂಡಿದೆ ಮತ್ತು ಗೌರವಾನ್ವಿತ ಸದಸ್ಯರ ಅಶಿಸ್ತಿನ ನಡವಳಿಕೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಗದ್ದಲದ ನಡುವೆಯೇ ಮಸೂದೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ ಎಂಬ ಘೋಷಣೆ ಕೆಲವು ಮೂಲಭೂತ ಅನುಮಾನಗಳನ್ನು ಹುಟ್ಟುಹಾಕುತ್ತದೆ.

ದೇಶದ ಅರ್ಧದಷ್ಟು ಜನಸಂಖ್ಯೆಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಮಸೂದೆಗಳನ್ನು ಎನ್‌ಡಿಎ ಸರಕಾರ ಏಕೆ ಜಂಟಿ ಸದನ ಸಮಿತಿಗೆ ವರ್ಗಾಯಿಸಲಿಲ್ಲ ಮತ್ತು ಮೂರು ತಿಂಗಳಲ್ಲಿ ವರದಿಯನ್ನು ಪಡೆಯಲು ಪ್ರಯತ್ನಿಸಲಿಲ್ಲ. ನಂತರ ಮಸೂದೆಯನ್ನು ಸದನದಲ್ಲಿ ಚರ್ಚಿಸಿ, ಯಾವುದಾದರೂ ಸಲಹೆಗಳಿದ್ದರೆ ಅದನ್ನು ಅಳವಡಿಸಿ ಮತ್ತು ಸರಿಯಾದ ಮತದಾನ ಪ್ರಕ್ರಿಯೆಯ ಮೂಲಕ ಸುಧಾರಿತ ಮತ್ತು ಸ್ವೀಕಾರಾರ್ಹ ಮಸೂದೆಗಳನ್ನು ಅನುಮೋದಿಸಲು ಸರಕಾರ ಏಕೆ ಪ್ರಯತ್ನಿಸಲಿಲ್ಲ. ರಾಜ್ಯಗಳ ಪರಿಷತ್ತು ಎಂದು ಪರಿಗಣಿಸಲ್ಪಟ್ಟಿರುವ ರಾಜ್ಯಸಭೆಯು ಆಯಾ ರಾಜ್ಯಗಳ ಧ್ವನಿಯನ್ನು ಆಲಿಸದಿರುವುದು ದುರದೃಷ್ಟಕರ ವಿಚಾರ.

ಪ್ರತಿಪಕ್ಷದ ಸದಸ್ಯರು ಸದನದ ರಾಜ್ಯಗಳ ಪರಿಷತ್ತು ಎಂದು ಪರಿಗಣಿಸಲ್ಪಟ್ಟಿರುವ ರಾಜ್ಯಸಭೆಯು ಆಯಾ ರಾಜ್ಯಗಳ ಧ್ವನಿಯನ್ನು ಕೇಳುತ್ತಿಲ್ಲ. ಪ್ರತಿಪಕ್ಷ ಶಿಬಿರವು ಸದನದ ಘನತೆ ಮತ್ತು ಸಭ್ಯತೆಯನ್ನು ನಿರ್ಲಕ್ಷಿಸಿ ಅಶಿಸ್ತಿಗೆ ಎಡೆ ಮಾಡಿಕೊಟ್ಟಿರುವುದು ಕೂಡ ತಲೆತಗ್ಗಿಸಬೇಕಾದ ವಿಚಾರ. ಎಂಟು ಸದಸ್ಯರನ್ನು ಅಮಾನತುಗೊಳಿಸಲು ಕಾರಣವಾದ ದಿನವು ಮೇಲ್ಮನೆಯ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿಯುತ್ತದೆ. ಎಂಟು ಸದಸ್ಯರನ್ನು ಅಶಿಸ್ತಿನ ನಡವಳಿಕೆ ಕಾರಣಕ್ಕೆ ಅಮಾನತುಗೊಳಿಸಲು ಕಾರಣವಾದ ದಿನವು ಮೇಲ್ಮನೆಯ ಇತಿಹಾಸದಲ್ಲಿ ಕರಾಳ ದಿನವಾಗಿ ಉಳಿಯುತ್ತದೆ!

ಸಂಸತ್ತು ಕೇವಲ ಶಾಸನ ರಚಿಸುವ ಸಂಸ್ಥೆಯಲ್ಲ. ಇದು ಚರ್ಚೆಯ ವೇದಿಕೆಯಾಗಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಅಮೂಲ್ಯವಾದ ಸೇವೆಗಳನ್ನು ಸಲ್ಲಿಸಬೇಕಾಗಿದೆ ಎಂದು ಮೇ 1952ರಲ್ಲಿ ರಾಜ್ಯಸಭೆಯ ಮೊದಲ ಅಧಿವೇಶನದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಒತ್ತಾಯಿಸಿದ್ದರು. ಉಭಯ ಸದನಗಳ ರಚನೆಯ ಉದ್ದೇಶವೇ ಭಾರತದ ಸಂಸತ್ತು ಎಂದು ಪಂಡಿತ್ ನೆಹರೂ ನಿರ್ಧರಿಸಿದ್ದರೂ, ಹಿರಿಯರ ಸದನದ ಅವಶ್ಯಕತೆಯ ಬಗ್ಗೆ ಸಂವಿಧಾನ ರಚನೆಯ ಸಭೆಯಲ್ಲಿ ಒಂದು ದೊಡ್ಡ ಚರ್ಚೆ ನಡೆಯಿತು. ರಾಜಕೀಯ ಕಾರಣಗಳಿಗಾಗಿ ಅಧಿಕಾರದಲ್ಲಿರುವ ಪಕ್ಷವು ಕೆಲವೊಮ್ಮೆ ಲೋಕಸಭೆಯಲ್ಲಿ ಶಾಸನಗಳನ್ನು ರಚಿಸಬಹುದು ಮತ್ತು ಶಾಸನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಮತ್ತೊಂದು ಸದನದ ಅವಶ್ಯಕತೆಯಿದೆ ಎಂದುಆ ದಿನಗಳಲ್ಲಿ ಜೋರಾಗಿ ಮತ್ತು ಸ್ಪಷ್ಟವಾದ ಅಭಿಪ್ರಾಯವಾಗಿತ್ತು. ನುರಿತ ಮತ್ತು ಹೆಚ್ಚು ಸಮರ್ಥ ಸದಸ್ಯರನ್ನು ಹೊಂದಿರುವ ಸದನಗಳ ದ್ವಿಪಕ್ಷೀಯ ವ್ಯವಸ್ಥೆಯು ಶಾಸಕಾಂಗ ವಿಚಾರಗಳ ಕುರಿತು ಆಳವಾದ ವಿಮರ್ಶೆ ಮಾಡಲು ಸೂಕ್ತವಾಗಿರುತ್ತದೆ ಮತ್ತು ಸಂಯೋಜಿತ ಬುದ್ಧಿವಂತಿಕೆಯು ದೇಶಕ್ಕೆ ಸಾಕಷ್ಟು ಒಳ್ಳೆಯದನ್ನುಮಾಡುತ್ತದೆ ಎಂಬ ಆಶಾವಾದಿ ದೃಷ್ಟಿಕೋನದಿಂದ ರಾಜ್ಯಸಭೆಯು ಜನ್ಮತಾಳಿತು.

ಅಮೆರಿಕಾದ ಪ್ರಸಿದ್ಧ ಅಧ್ಯಕ್ಷರಲ್ಲೊಬ್ಬರಾದ ಜಾರ್ಜ್ ವಾಷಿಂಗ್ಟನ್ ಅವರ ಪ್ರಕಾರ, ಮೇಲ್ಮನೆ ಒಂದು ತಟ್ಟೆಯಂತೆ ಬಿಸಿ ಬಿಸಿ ಶಾಸನಗಳನ್ನು ತಣ್ಣಗಾಗಿಸುತ್ತದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಮೇಲ್ಮನೆ ಎಷ್ಟು ಪ್ರಾಯೋಗಿಕವಾಗಬೇಕು ಎಂದು ಅಮೆರಿಕಾ‌ದ ಅಧ್ಯಕ್ಷರ ಹೇಳಿಕೆ ವಿವರಿಸುತ್ತದೆ. ಸಂಯಮ ಮತ್ತು ಸಮತೋಲಿತ ಚಿಂತನೆಗೆ ಸಾಕ್ಷಿಯಾಗಬೇಕಾದ ರಾಜ್ಯಸಭೆಯು ಕೋಪ ಮತ್ತು ಅಶಿಸ್ತಿನ ನಡವಳಿಕೆಯ ಹಂತವಾಗಿ ಬದಲಾಗುತ್ತಿದೆ ಮತ್ತು ಇದು ವಿವೇಕಯುತ ಚಿಂತಕರಿಗೆ ಆತಂಕಕರ‌ ವಿಚಾರವಾಗಿದೆ‌. ದೇಶದ ಸರ್ವೋಚ್ಚ ಶಾಸಕಾಂಗ ಸಂಸ್ಥೆಯಾಗಿರುವ ಸಂಸತ್ ಉನ್ನತ ನಡವಳಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ದೇಶಾದ್ಯಂತದ ವಿಧಾನಸಭೆಗಳಿಗೆ ಆದರ್ಶ ಉದಾಹರಣೆಯಾಗಿ ನಿಲ್ಲಬೇಕು. ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಅಶಿಸ್ತಿನ ಮತ್ತು ಆಕ್ರಮಣಕಾರಿ ನಡವಳಿಕೆಯಿಂದ ಇಡೀ ದೇಶಕ್ಕೆ ಯಾವ ಸಂದೇಶವನ್ನು ನೀಡುತ್ತಿವೆ? ಮಹಾತ್ಮ ಗಾಂಧಿಯವರು ಹೇಳಿದಂತೆ ಒಳ್ಳೆಯದನ್ನು ಮಾಡುವುದು ಕೇವಲ ಸಾಕಾಗುವುದಿಲ್ಲ ಆದರೆ ಒಳ್ಳೆಯದನ್ನು ಮಾಡುವುದು ಸಹ ಮುಖ್ಯವಾಗಿದೆ ಎಂದು ಹೇಳಿದರು.

ಅನೇಕ ರೈತ ಸಂಘಗಳು ಮತ್ತು ರಾಜ್ಯ ಸರ್ಕಾರಗಳು ಮಸೂದೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರೂ, ಕೇಂದ್ರ ಸರ್ಕಾರ ಸಮಗ್ರ ಚರ್ಚೆ ಮತ್ತು ಸರಿಯಾದ ಪರಿಶೀಲನೆ ಇಲ್ಲದೆ ಮುಂದುವರಿಯುವುದು ಅಸಮಂಜಸವಾಗಿದೆ. ಸಂಸತ್ತು ಶಾಸನ ರಚನೆಗೆ ಒಂದು ವೇದಿಕೆ‌ ಮಾತ್ರವಲ್ಲ, ಸಮಗ್ರ ಚರ್ಚೆಯ ವೇದಿಕೆಯಾಗಿದೆ ಎಂಬ ಮೂಲಭೂತ ಅರಿವು ಕೊರತೆ ಹಾಗೂ ತೀವ್ರವಾದ ನಿರಾಶೆಯ ಕಾರ್ಮೋಡ ಭಾರತೀಯ ಪ್ರಜಾಪ್ರಭುತ್ವವು ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬ ಬಗ್ಗೆ ಪ್ರಶ್ನೆ ಮೂಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.