ETV Bharat / bharat

ಇಷ್ಟು ಮಾಡಿ ಖಿನ್ನತೆ ದೂರಾಗುತ್ತೆ.. ಸೋಲಿನಿಂದ ಒತ್ತಡದಲ್ಲಿರುವ ರಾಹುಲ್‌ ಗಾಂಧಿಗೆ ಬಾಬಾ'ರಾಮ'ಬಾಣ!

author img

By

Published : May 25, 2019, 10:07 AM IST

ಬಾಬಾ ರಾಮ್​ ದೇವ್​

ಲೋಕಸಭಾ ಚುನಾವಣೆ ಫಲಿತಾಂಶದಿಂದ ಕಂಗಾಲಾಗಿ, ಒತ್ತಡಕ್ಕೆ ಸಿಲುಕಿರುವ ಕಾಂಗ್ರೆಸ್​ ನಾಯಕರೆಲ್ಲ ಯೋಗ ಮಾಡಿ ಎಂದು ಯೋಗ ಗುರು ಬಾಬಾ ರಾಮ್​ ದೇವ್​ ಸಲಹೆ ನೀಡಿದ್ದಾರೆ.

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಕಂಡ ಕಾಂಗ್ರೆಸ್ ಪಕ್ಷದ ನಾಯಕರೆಲ್ಲ ಕಪಾಲಭಾತಿ ಪ್ರಾಣಾ​ಯಾಮ ಮಾಡಿ. ಮುಖ್ಯವಾಗಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಧ್ಯಾನ ಯೋಗ ಮಾಡಬೇಕು ಎಂದು ಯೋಗ ಗುರು ಬಾಬಾ ರಾಮ್​ ದೇವ್​ ಸಲಹೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಮಾತನಾಡಿರುವ ಬಾಬಾ ರಾಮ್​ ದೇವ್​, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ 52 ಕ್ಷೇತ್ರದಲ್ಲಿ ಗೆಲುವು ಸಾಧಿಸಿರೋದು ಅವರ ಬಹುದೊಡ್ಡ ಸಾಧನೆ. ರಾಹುಲ್​ ಗಾಂಧಿ ವಯನಾಡು ಕ್ಷೇತ್ರದಲ್ಲಾದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಪಾಲಭಾತಿ ಪ್ರಾಣಾಯಾಮದಿಂದ ದೇಹದ ಆರೋಗ್ಯ ವೃದ್ಧಿಯಾಗುವುದರ ಜೊತೆಯಲ್ಲಿ ಒತ್ತಡವನ್ನ ಕಡಿಮೆ ಮಾಡುತ್ತದೆ. ಫಲಿತಾಂಶ ಬಂದಾಗಿನಿಂದ ಕಾಂಗ್ರೆಸ್​ ನಾಯಕರಲ್ಲಿ ಒತ್ತಡ ಹೆಚ್ಚಾಗಿದೆ. ಹೀಗಾಗಿ ಪ್ರಣಾಯಾಮ ಮಾಡಿದರೆ ಉತ್ತಮ ಎಂದಿದ್ದಾರೆ. ಅಮೇಠಿ ಕ್ಷೇತ್ರದಲ್ಲಿ ಸೋಲುಕಂಡಿರುವ ರಾಹುಲ್​ ಗಾಂಧಿ ಧ್ಯಾನಯೋಗ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.

Intro:Body:

nill


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.