ETV Bharat / bharat

ಬಂಡಾಯ ಶಾಸಕರ ರಾಜೀನಾಮೆ ಪರಿಶೀಲಿಸಿ: ಸುಪ್ರೀಂಕೋರ್ಟ್​ಗೆ ಕಾಂಗ್ರೆಸ್​​​ ಮನವಿ

author img

By

Published : Mar 18, 2020, 4:51 PM IST

MLAs submitted to Speaker
ಸುಪ್ರೀಂಕೋರ್ಟ್​ಗೆ ಕಾಂಗ್ರೆಸ್​​​ ಆಗ್ರಹ

ಕಾಂಗ್ರೆಸ್​​ನ ಬಂಡಾಯ ಶಾಸಕರು ಸಲ್ಲಿಸಿರುವ ರಾಜೀನಾಮೆ ಪರಿಶೀಲಿಸುವ ಅಗತ್ಯವಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ​ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.

ನವದೆಹಲಿ: ಕಾಂಗ್ರೆಸ್​​ನ ಬಂಡಾಯ ಶಾಸಕರು ಸ್ಪೀಕರ್​ಗೆ ಸಲ್ಲಿಸಿರುವ ರಾಜೀನಾಮೆ ಪತ್ರಗಳ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್​​ ಸುಪ್ರೀಂಕೋರ್ಟ್​ ಗೆ ಮನವಿ ಮಾಡಿದೆ.

ಕಾಂಗ್ರೆಸ್​​ನ ಬಂಡಾಯ ಶಾಸಕರು ಒತ್ತಡಕ್ಕೊಳಗಾಗಿ ರಾಜೀನಾಮೆ ಕೊಟ್ಟಿದ್ದಾರೆ. ಅವರು ಸ್ವಇಚ್ಛೆಯಿಂದ ನೀಡಿಲ್ಲ. ಹಾಗಾಗಿ ಈ ಕುರಿತು ತನಿಖೆ ನಡೆಸುವ ಅವಶ್ಯಕತೆ ಇದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್​​ ಮತ್ತು ಹೇಮಂತ್​​ ಗುಪ್ತಾ ಅವರ ಮುಂದೆ ಕಾಂಗ್ರೆಸ್​​ ಹೇಳಿದೆ.

ಬಂಡಾಯ ಶಾಸಕರನ್ನು ವಿಮಾನಗಳಲ್ಲಿ ಕರೆದುಕೊಂಡು ಹೋಗಿದ್ದು, ಅವರನ್ನು ಪ್ರಸ್ತುತ ಬಿಜೆಪಿಯ ಹದ್ದುಬಸ್ತಿನಲ್ಲಿರುವ ರೆಸಾರ್ಟ್​ನಲ್ಲಿ, ಯಾರಿಗೂ ಸಿಗದಂತೆ ಇಡಲಾಗಿದೆ. ಬಹುಮತ ಸಾಬೀತು ಪಡಿಸಿ ಎಂದು ಸಿಎಂಗೆ ಅಥವಾ ಸ್ಪೀಕರ್​ಗೆ ಹೇಳುವ ಅಧಿಕಾರ ಗವರ್ನರ್​​ಗೆ ಇಲ್ಲ ಎಂದು ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ಅವರು ಕೋರ್ಟ್​ಗೆ ತಿಳಿಸಿದ್ದಾರೆ.

"ಸ್ಪೀಕರ್ ಅಂತಿಮ ಮಾಸ್ಟರ್ ಮತ್ತು ಮಧ್ಯಪ್ರದೇಶ ರಾಜ್ಯಪಾಲರು ಅವರನ್ನು ನಿಯಂತ್ರಿಸುತ್ತಿದ್ದಾರೆ" ಎಂದು ದುಶ್ಯಂತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.