ETV Bharat / bharat

ಕಾರು ಹರಿಸಿ ನಾಯಿ ಕೊಂದ ಕಿಡಿಗೇಡಿ: ವಿಡಿಯೋ ಶೇರ್​ ಮಾಡಿ ಮನೇಕಾ ಗಾಂಧಿ ಸಿಡಿಮಿಡಿ

author img

By

Published : Aug 18, 2020, 10:28 PM IST

Updated : Aug 19, 2020, 7:59 AM IST

Dog killed
ಶ್ವಾನ ಹತ್ಯೆ

ಈತನ ಹೆಸರು ಗುರಿಂದರ್​ ಸಿಂಗ್​, ಪಂಜಾಬ್​ನ ದಂದುಪುರ ಗ್ರಾಮದವಾನ ಈತ ವೃತ್ತಿ ನಾಯಿಗಳನ್ನು ಸಾಕುವುದು ಹಾಗೂ ನಾಯಿಗಳ ಕಾದಾಟಕ್ಕೆ ಒಳ್ಳೆಯ ಶ್ವಾನಗಳನ್ನು ಪೂರೈಸುವುದು. ಏನೂ ಉಪಯೋಗವಿಲ್ಲದಿದ್ದಾಗ ಆತ ನಾಯಿಯನ್ನು ಹೇಗೆ ವಿಕೃತವಾಗಿ ಸಾಯಿಸಿದ್ದಾನೆ ನೋಡಿ. ಎಂದು ಮನೇಕಾ ಗಾಂಧಿ ಟ್ವೀಟ್​ ಮಾಡಿದ್ದಾರೆ.

ಚಂಡೀಗಢ: ರಸ್ತೆ ಮೇಲೆ ಮಲಗಿರುವ ಶ್ವಾನದ ಮೇಲೆ ಕಾರು ಹಾಯಿಸಿ ವಿಕೃತಿ ಪ್ರದರ್ಶಿಸಿದ ವ್ಯಕ್ತಿಯೊಬ್ಬನ ವಿಡಿಯೋವನ್ನು ಬಿಜೆಪಿ ಸಂಸದೆ ಮನೇಕಾ ಗಾಂಧಿ ಅವರು ಮಂಗಳವಾರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈತನ ಹೆಸರು ಗುರಿಂದರ್​ ಸಿಂಗ್​, ಪಂಜಾಬ್​ನ ದಂದುಪುರ ಗ್ರಾಮದವಾನ ಈತ ವೃತ್ತಿ ನಾಯಿಗಳನ್ನು ಸಾಕುವುದು ಹಾಗೂ ನಾಯಿಗಳ ಕಾದಾಟಕ್ಕೆ ಒಳ್ಳೆಯ ಶ್ವಾನಗಳನ್ನು ಪೂರೈಸುವುದು. ಏನೂ ಉಪಯೋಗವಿಲ್ಲದಿದ್ದಾಗ ಆತ ನಾಯಿಯನ್ನು ಹೇಗೆ ವಿಕೃತವಾಗಿ ಸಾಯಿಸಿದ್ದಾನೆ ನೋಡಿ. ಈ ನಾಯಿ 30 ನಿಮಿಷಗಳ ನೋವಿನಿಂದ ಬಳಲಿ ಮೃತಪಟ್ಟಿದೆ ಎಂದು ಮನೇಕಾ ಗಾಂಧಿ ತಮ್ಮ ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡು ಬರೆದಿದ್ದಾರೆ.

  • This is Gurinder Singh s/o Harbans Singh, village Dandupur, Kapurthala in Punjab. He is a breeder and seller of dogs for dog fights. This is what he does to dogs when they are no longer useful.

    This dog died after 30 minutes of being in excruciating pain. pic.twitter.com/lIvBpzXOhp

    — Maneka Sanjay Gandhi (@Manekagandhibjp) August 18, 2020 " class="align-text-top noRightClick twitterSection" data=" ">

ಪೀಪಲ್ ಫಾರ್ ಅನಿಮಲ್ಸ್ ಪ್ರತಿನಿಧಿಯ ದೂರಿನ ಮೇರೆಗೆ ಗುರಿಂದರ್​ ಸಿಂಗ್ ಎಂದು ಗುರುತಿಸಲಾಗಿರುವ ಆರೋಪಿ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪುರ್ಥಾಲಾದ ದಾಂಡುಪುರ ನಿವಾಸಿ ಸಿಂಗ್ ಎಂಬುವವ ಈ ಕೃತ್ಯ ಎಸಗಿದ್ದು, ಈಗ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ ಎಂದು ಕಪುರ್ಥಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಜಸ್ಪ್ರೀತ್ ಸಿಂಗ್ ಸಿಧು ಹೇಳಿದರು.

Last Updated :Aug 19, 2020, 7:59 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.