ETV Bharat / bharat

ತಂದೆಯನ್ನು ಜೈಲಿನಿಂದ ಬಿಡುಗಡೆ ಮಾಡಿ: ರಾಷ್ಟ್ರಪತಿಗೆ ಪತ್ರ ಬರೆದ ಲಾಲೂ ಪುತ್ರಿ!

author img

By

Published : Jan 25, 2021, 5:35 PM IST

Rohini Acharya
Rohini Acharya

ಆರೋಗ್ಯ ಹದಗೆಟ್ಟಿರುವ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಲಾಲೂ ಪ್ರಸಾದ್​ ಯಾದವ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಅವರ ಮಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಆರೋಪಿಯಾಗಿ ಜೈಲು ಶಿಕ್ಷೆಗೊಳಗಾಗಿರುವ ಲಾಲೂ ಪ್ರಸಾದ್ ಯಾದವ್ ಆರೋಗ್ಯ ತೀವ್ರ ಹದಗೆಟ್ಟಿದ್ದು, ಸದ್ಯ ದೆಹಲಿ ಏಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇದರ ಬೆನ್ನಲ್ಲೇ ಅವರ ಮಗಳು ರೋಹಿಣಿ ಆಚಾರ್ಯ ಇದೀಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ತಮ್ಮ ತಂದೆಯನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡಿದ್ದಾರೆ.

ಓದಿ: ಲಾಲೂ ಆರೋಗ್ಯದಲ್ಲಿ ಏರುಪೇರು; ದೆಹಲಿಯ ಏಮ್ಸ್​​ಗೆ​​​ ಶಿಫ್ಟ್‌

ಬರೆದಿರುವ ಪತ್ರದಲ್ಲಿ ಏನಿದೆ!?

ಬಡವರ ಭಗವಾನ್​ ಶ್ರೀ ಲಾಲೂ ಪ್ರಸಾದ್ ಯಾದವ್​ ಅವರನ್ನು ಬಿಡುಗಡೆ ಮಾಡಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರಿಗೆ ಪತ್ರ ಬರೆದಿದ್ದಾರೆ. ಜತೆಗೆ ಈ ಅಭಿಯಾನಕ್ಕೆ ಕೈಜೋಡಿಸಿ ಹಾಗೂ ನಾಯಕನ ಬಿಡುಗಡೆಗಾಗಿ ಮನವಿ ಮಾಡಿ ಎಂದಿದ್ದಾರೆ. ಯಾರು ನಿಮಗೆ ಶಕ್ತಿ ನೀಡಿದರೂ, ಇಂದು ಅವರಿಗೆ ನೀವೂ ಶಕ್ತಿಯಾಗುವ ಸಮಯ ಎಂದು ಟ್ವೀಟರ್​ನಲ್ಲೂ ಬರೆದುಕೊಂಡಿದ್ದಾರೆ.

lalu yadav daughter
ರಾಷ್ಟ್ರಪತಿಗೆ ಪತ್ರ ಬರೆದ ಲಾಲೂ ಪುತ್ರಿ

72 ವರ್ಷದ ಲಾಲು ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.