ETV Bharat / bharat

ಎನ್​ಸಿಬಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ; ಮೂವರ ಬಂಧನ

author img

By

Published : Nov 23, 2020, 3:37 PM IST

ಮಾದಕ ವಸ್ತು ಕಳ್ಳ ಸಾಗಣಿಕೆ ಕುರಿತು ಗೋರೆಗಾಂವ್ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಎನ್​ಸಿಬಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಮೂವರನ್ನು ಬಂಧಿಸಲಾಗಿದೆ.

ಎನ್​ಸಿಬಿ
ಎನ್​ಸಿಬಿ

ಮುಂಬೈ(ಮಹಾರಾಷ್ಟ್ರ): ಮಾದಕ ವಸ್ತು ಕಳ್ಳ ಸಾಗಣಿಕೆ ಕುರಿತು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಎನ್​ಸಿಬಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಕಾರಣ ಮೂವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ.

ಗೋರೆಗಾಂವ್ ಪ್ರದೇಶದಲ್ಲಿ ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿ ತಂಡ ಕಾರ್ಯಾಚರಣೆಯ ನಡೆಸುವ ಸಂಧರ್ಭದಲ್ಲಿ ಕೆಲ ಜನರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಬಳಿಕ ನಡೆದ ನೂಕುನುಗ್ಗಾಟದಲ್ಲಿ ಇಬ್ಬರು ಎನ್​ಸಿಬಿ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸರ್ಕಾರಿ ಕೆಲಸಕ್ಕೆ ಅಡ್ಡಿಯುಂಟುಮಾಡಿದ ಕಾರಣ ಮೂವರ ವಿರುದ್ಧ ಸೆಕ್ಷನ್ 353ರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.