ಮುಂಬೈ(ಮಹಾರಾಷ್ಟ್ರ): ಮಾದಕ ವಸ್ತು ಕಳ್ಳ ಸಾಗಣಿಕೆ ಕುರಿತು ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಎನ್ಸಿಬಿ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಕಾರಣ ಮೂವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಗೋರೆಗಾಂವ್ ಪ್ರದೇಶದಲ್ಲಿ ಸಮೀರ್ ವಾಂಖೆಡೆ ನೇತೃತ್ವದ ಎನ್ಸಿಬಿ ತಂಡ ಕಾರ್ಯಾಚರಣೆಯ ನಡೆಸುವ ಸಂಧರ್ಭದಲ್ಲಿ ಕೆಲ ಜನರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದಿದೆ. ಬಳಿಕ ನಡೆದ ನೂಕುನುಗ್ಗಾಟದಲ್ಲಿ ಇಬ್ಬರು ಎನ್ಸಿಬಿ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸರ್ಕಾರಿ ಕೆಲಸಕ್ಕೆ ಅಡ್ಡಿಯುಂಟುಮಾಡಿದ ಕಾರಣ ಮೂವರ ವಿರುದ್ಧ ಸೆಕ್ಷನ್ 353ರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.