ETV Bharat / bharat

ದಲಿತ ಮಹಿಳೆಯನ್ನು ಬಡಿಗೆಯಿಂದ ಹೊಡೆದು ಅಮಾನುಷವಾಗಿ ಕೊಂದ ಪಾಪಿಗಳು.. ಕಾರಣ ಏನು?

author img

By

Published : Feb 24, 2020, 11:20 AM IST

Updated : Feb 24, 2020, 11:58 AM IST

Dalit woman beaten with sticks during a mutiny in Bikaner, died during treatment
ದಲಿತ ಮಹಿಳೆಯನ್ನು ಬಡಿಗೆಯಿಂದ ಅಮಾನುಷವಾಗಿ ಬಡಿದ ದುರುಳರು: ಆಸ್ಪತ್ರೆಯಲ್ಲಿ ಮಹಿಳೆ ಸಾವು

ದಲಿತ ಸಮುದಾಯದವರ ಮೇಲೆ ನಡೆಯುವ ದಾಳಿಗಳು ಅಲ್ಲಲ್ಲಿ ವರದಿಯಾಗುತ್ತಿವೆ. ರಾಜಸ್ಥಾನದ ಬೀಕಾನೇರ್​​ ಸದ್ಯ ಅಂತಹ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಛತರ್​ಗಢದ ಖಾರ್​ಬಾರಾ ಗ್ರಾಮದಲ್ಲಿ ಕೆಲವರು ದಲಿತ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದರು. ಸದ್ಯ ಆಕೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ.

ಬೀಕಾನೆರ್(ರಾಜಸ್ಥಾನ್​): ದಲಿತ ಸಮುದಾಯದವರ ಮೇಲೆ ನಡೆಯುವ ದಾಳಿಗಳು ಅಲ್ಲಲ್ಲಿ ವರದಿಯಾಗುತ್ತಿವೆ. ರಾಜಸ್ಥಾನದ ಬೀಕಾನೇರ್​​ ಸದ್ಯ ಅಂತಹ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಛತರ್​ಗಢದ ಖಾರ್​ಬಾರಾ ಗ್ರಾಮದಲ್ಲಿ ಕೆಲವರು ದಲಿತ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿದ್ದರು. ಸದ್ಯ ಆಕೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ.

ದಲಿತ ಮಹಿಳೆಯನ್ನು ಬಡಿಗೆಯಿಂದ ಅಮಾನುಷವಾಗಿ ಬಡಿದ ದುರುಳರು: ಆಸ್ಪತ್ರೆಯಲ್ಲಿ ಮಹಿಳೆ ಸಾವು

ಛತರ್​ಗಢ ಪೊಲೀಸರ ಪ್ರಕಾರ, ಫೆಬ್ರವರಿ 17ರಂದು ರಾಜಗಢ ನಿವಾಸಿ ಸತ್ಯವೀರ್​ ಜಾಟ್ ನ ಹೊಟೆಲ್​ಗೆ ಏನೋ ತೆಗೆದುಕೊಳ್ಳಲೆಂದು ಬಂದಿದ್ದ ಓಂ ಪ್ರಕಾಶ್​ ಮೆಘವಾಲ್​ ಎಂಬುವವರನಿಗೂ ಹೋಟೆಲ್​ ಮಾಲಿಕ ಸತ್ಯವೀರ್​ಗೂ ಜಗಳವಾಗಿತ್ತು. ಈ ವಿಚಾರವಾಗಿ ಓಂ ಪ್ರಕಾಶ್​ ಮೆಘವಾಲ್​ ಅವರ ಪತ್ನಿ ವಿಚಾರಿಸಲು ಹೋಟೆಲ್​ಗೆ ಹೋದಾಗ ಹೋಟೆಲ್​ ಮಾಲಿಕ ಸತ್ಯವೀರ್ ತನ್ನ ಮಗ, ಹೆಂಡತಿ, ಅಳಿಯನೊಂದಿಗೆ ಸೇರಿ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನೂ, ಈ ಕುರಿತು ಫೆಬ್ರುವರಿ 18ರಂದು ಛತರ್​ಗಢ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲ್ಲೆಯಿಂದ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದ ಆಕೆಯನ್ನು ಪಿಬಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಲ್ಲೇ ಸಾವನ್ನಪ್ಪಿದ್ದಾಳೆ. ಸದ್ಯ ಮಹಿಳೆಯ ಸಾವಿನ ಹಿನ್ನೆಲೆ ಛತರ್​ಗಢ ಪೊಲೀಸ್​ ಠಾಣೆಯಲ್ಲಿ ಮೂವರ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

Last Updated :Feb 24, 2020, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.