ETV Bharat / bharat

ಬಿಜೆಪಿಗೆ ಕಾಂಗ್ರೆಸ್ ಟಾಂಗ್​ ; ವಿವೇಕಾನಂದ ಫೌಂಡೇಶನ್,ಆರ್​ಎಸ್​ಎಸ್​ ದೇಣಿಗೆ ಬಗ್ಗೆ ಪ್ರಶ್ನೆ!!

author img

By

Published : Jul 8, 2020, 6:23 PM IST

ಬಿಜೆಪಿಗೆ ಟಾಂಗ್​ ನೀಡಿದ ಕಾಂಗ್ರೆಸ್
ಬಿಜೆಪಿಗೆ ಟಾಂಗ್​ ನೀಡಿದ ಕಾಂಗ್ರೆಸ್

ನೆಹರೂ-ಗಾಂಧಿ ಕುಟುಂಬ ಸಂಬಂಧಿತ ಟ್ರಸ್ಟ್‌ಗಳ ಮನಿ ಲಾಂಡರಿಂಗ್ ಮತ್ತು ವಿದೇಶಿ ಕೊಡುಗೆಗಳ ಬಗ್ಗೆ ತನಿಖೆ ನಡೆಸಲು ಎಂಎಚ್‌ಎ ಸಮಿತಿಯನ್ನು ರಚಿಸಿದ ನಂತರ, ಬಿಜೆಪಿ ಸಂಬಂಧಿತ ಸಂಸ್ಥೆಗಳಾದ ಆರ್‌ಎಸ್‌ಎಸ್ ಮತ್ತು ವಿವೇಕಾನಂದ ಇಂಟರ್​​​ ನ್ಯಾಷನಲ್ ಫೌಂಡೇಶನ್‌ಗೆ ದೇಣಿಗೆ ನೀಡುವ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತಿದೆ..

ನವದೆಹಲಿ : ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಮೂರು ಟ್ರಸ್ಟ್‌ಗಳ ವಿರುದ್ಧದ ತನಿಖೆಗೆ ಕೇಂದ್ರ ಸರ್ಕಾರ ಸಮಿತಿ ರಚನೆ ಮಾಡಿದ ಬಳಿಕ ಕಾಂಗ್ರೆಸ್​ ಈ ವಿಷಯವಾಗಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಅಲ್ಲದೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ವಿವೇಕಾನಂದ್ ಫೌಂಡೇಶನ್, ಇಂಡಿಯಾ ಫೌಂಡೇಶನ್ ಮತ್ತು ಆರ್‌ಎಸ್‌ಎಸ್‌ಗೆ ನೀಡಿದ ವಿದೇಶಿ ದೇಣಿಗೆ ಕುರಿತು ಪ್ರಶ್ನೆಗಳನ್ನು ಎತ್ತಿದೆ.

ಆರ್‌ಜಿಎಫ್‌ಗೆ ನೀಡುವ ದೇಣಿಗೆ, ಬಿಜೆಪಿಯ ಸಂಸ್ಥೆಗಳಿಗೆ ನೀಡುವ ದೇಣಿಗೆಯ ಒಂದು ಭಾಗವೂ ಅಲ್ಲ ಎಂದು ಐಎನ್‌ಸಿ ಹೇಳಿದೆ. ರಾಜೀವ್ ಗಾಂಧಿ ಫೌಂಡೇಶನ್ ಸೇರಿ ಮೂರು ಗಾಂಧಿ ಕುಟುಂಬ ಟ್ರಸ್ಟ್‌ಗಳ ವಿರುದ್ಧ ತೆರಿಗೆ ಉಲ್ಲಂಘನೆ ಮತ್ತು ಮನಿ ಲಾಂಡರಿಂಗ್ ಆರೋಪ ಮಾಡಲಾಗಿದೆ. ಇದನ್ನು ತನಿಖೆ ಮಾಡಲು ಗೃಹ ಸಚಿವಾಲಯ (ಎಂಎಚ್‌ಎ) ಸಮಿತಿಯನ್ನು ರಚಿಸಿದ ಕೂಡಲೇ ಈ ಹೇಳಿಕೆ ಹೊರಬಿದ್ದಿದೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ವಕ್ತಾರ ಮತ್ತು ಸಂಸದ ಅಭಿಷೇಕ್ ಮನು ಸಿಂಗ್ವಿ, "ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಏನನ್ನೂ ಸೇರಿಸಬೇಕಾಗಿಲ್ಲ. ತೆರವುಗೊಳಿಸಲು ಏನೂ ಇಲ್ಲ. ಯಾಕೆಂದರೆ, ನೀವು ಕೇಳುವ ಪ್ರತಿ ಪ್ರಶ್ನೆಗೆ, ನಾವು ಕಾನೂನು ರೀತಿಯಲ್ಲೇ ಉತ್ತರ ನೀಡುತ್ತೇವೆ. ಈ ರೀತಿ ಆರೋಪ ಮಾಡುವುದರ ಮೂಲಕ ನೀವು ವ್ಯಕ್ತಿ ಅಥವಾ ಸಂಸ್ಥೆಗೆ ಕಿರುಕುಳ ನೀಡುತ್ತಿದ್ದೀರಿ" ಎಂದಿದ್ದಾರೆ.

"9ನೇ ವೇಳಾಪಟ್ಟಿ ವಿನಾಯಿತಿಗಳಂತಹ ಈ ಪ್ರಶ್ನೆಗಳನ್ನು ವಿವೇಕಾನಂದ್ ಫೌಂಡೇಶನ್, ಬಿಜೆಪಿ ಫೌಂಡೇಶನ್‌ನ ಸಾಗರೋತ್ತರ ಸ್ನೇಹಿತರು, ಇಂಡಿಯಾ ಫೌಂಡೇಶನ್​ಗೆ ಏಕೆ ಕೇಳಲಾಗುವುದಿಲ್ಲ. ಈ ಪ್ರಶ್ನೆಗಳಿಂದ ಆರ್‌ಎಸ್‌ಎಸ್​ನಲ್ಲಿರುವ ದೊಡ್ಡ ಮೊತ್ತದ ಹಣದ ಬಗ್ಗೆ ಯಾಕೆ ಕೇಳುತ್ತಿಲ್ಲ" ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ, ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಈ ಸಂಸ್ಥೆಗಳ ಬಗ್ಗೆ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದ್ದು, ತನ್ನ ಎಲ್ಲ ದಾನಿಗಳ ಪಟ್ಟಿ ಮತ್ತು ಎಲ್ಲಾ ವಿದೇಶಿ ಮೂಲಗಳಿಂದ ಪಡೆದ ಮೊತ್ತವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸರ್ಕಾರವನ್ನು ಕೇಳಿಕೊಂಡಿದ್ದರು.

ನೆಹರೂ-ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಟ್ರಸ್ಟ್‌ಗಳ ವಹಿವಾಟಿನ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರ್ಕಾರದ ಆದೇಶದ ನಂತರ, ಆರ್‌ಜಿಎಫ್ ವಹಿವಾಟಿನ ತನಿಖೆಯ ಹಿಂದೆ ರಾಜಕೀಯ ಇದ್ದರೆ ಸರ್ಕಾರ ಆರು ವರ್ಷಗಳ ಕಾಲ ಕಾಯುತ್ತಿರಲಿಲ್ಲ ಎಂದು ಬಿಜೆಪಿ ಹೇಳಿದೆ.

ಪ್ರತಿಪಕ್ಷದ ನಾಯಕ ಮನೀಶ್ ತಿವಾರಿ ಈ ನಿರ್ಧಾರವನ್ನು ಕಾನೂನುಬಾಹಿರ ಎಂದು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, "ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧದ ತನಿಖೆಗೆ ಆದೇಶ ನೀಡಿದ ಬಳಿಕ, ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಯಲ್ಲಿ ಬಿಜೆಪಿ ವೈಫಲ್ಯವನ್ನು ಬಹಿರಂಗಪಡಿಸುವುದನ್ನು ಕಾಂಗ್ರೆಸ್ ನಿಲ್ಲಿಸುವುದಿಲ್ಲ" ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.