ETV Bharat / bharat

ಗುಜರಾತ್​ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಅಲ್ - ಖೈದಾ ಶಂಕಿತ ಉಗ್ರರು: ತನಿಖೆಯಲ್ಲಿ ಬಯಲು

author img

By

Published : Aug 3, 2023, 11:04 AM IST

Updated : Aug 3, 2023, 11:38 AM IST

ಅಲ್-ಖೈದಾ ಭಯೋತ್ಪಾದನ ಸಂಘಟನೆಗೆ ಸೇರಿದ್ದ ಮೂವರು ಶಂಕಿತ ಉಗ್ರರನ್ನು ಎಟಿಎಸ್ ಬಂಧಿಸಿದ್ದು, ಗುಜರಾತ್​ನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.

terrorists
ಅಲ್-ಖೈದಾ ಶಂಕಿತ ಉಗ್ರರು

ರಾಜ್​ಕೋಟ್​ (ಗುಜರಾತ್​​): ಗುಜರಾತ್​ನಲ್ಲಿ ಭಾರಿ ದುರಂತವೊಂದು ತಪ್ಪಿದೆ. ನಗರದಲ್ಲಿ ದೊಡ್ಡ ಸ್ಫೋಟಕ್ಕೆ ಸಂಚು ರೂಪಿಸಿದ್ದ ಅಲ್-ಖೈದಾ ಭಯೋತ್ಪಾದನ ಸಂಘಟನೆಗೆ ಸೇರಿದ್ದ ಮೂವರು ಶಂಕಿತ ಉಗ್ರರನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್​) ಬಂಧಿಸಿದೆ. ವಿಚಾರಣೆ ವೇಳೆ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಬಂಧಿತ ಮೂವರು ಉಗ್ರರು ಸೌರಾಷ್ಟ್ರದ ಜನ್ಮಾಷ್ಟಮಿಯಂದು ಭಯೋತ್ಪಾದಕ ದಾಳಿ ನಡೆಸಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಗುಜರಾತ್​ನ ರಾಜ್​ಕೋಟ್​ನಲ್ಲಿ ಎರಡು ದಿನಗಳ ಹಿಂದೆ ಭಯೋತ್ಪಾದಕ ಸಂಘಟನೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ, ಎಟಿಎಸ್ ತೀವ್ರ ವಿಚಾರಣೆ ನಡೆಸಿದೆ. ಈ ವೇಳೆ ಸೌರಾಷ್ಟ್ರದ ಜನ್ಮಾಷ್ಟಮಿಯಂದು ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಗುಜರಾತ್​ನಲ್ಲಿ ಸೌರಾಷ್ಟ್ರದ ಜನ್ಮಾಷ್ಟಮಿಯನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಡೀ ರಾಜ್ಯವೇ ಈ ಹಬ್ಬವನ್ನು ಸಂಭ್ರಮಿಸುತ್ತದೆ. ಇಂತಹ ವಿಶೇಷ ದಿನದಂದು ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿದ್ದರು ಎಂದು ತಿಳಿದು ಬಂದಿದೆ.

AK-47 ಆಪರೇಟ್ ಮಾಡಲು ತರಬೇತಿ: ವಿಚಾರಣೆ ವೇಳೆ ಮತ್ತೊಂದು ಗಂಭೀರ ವಿಚಾರ ಗೊತ್ತಾಗಿದೆ. ಈ ಮೂವರು ಉಗ್ರರು ಸಾಮಾಜಿಕ ಜಾಲತಾಣಗಳ ಮೂಲಕ ಎಕೆ-47 ಆಪರೇಟ್ ಮಾಡಲು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಜೊತೆಗೆ ಪಿಸ್ತೂಲ್​ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಖರೀದಿಸಿರುವ ಶಂಕೆ ಇದೆ. ಜನ್ಮಾಷ್ಟಮಿಯಂದು ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು. ಆದರೆ, ಗುಜರಾತ್​ ಭಯೋತ್ಪಾದನಾ ನಿಗ್ರಹ ದಳ ಈ ಪಿತೂರಿಯನ್ನು ವಿಫಲಗೊಳಿಸಿದೆ.

ಇದನ್ನೂ ಓದಿ: ಅಲ್​ಖೈದಾ ನಂಟು ಆರೋಪ: ರಾಜ್‌ಕೋಟ್‌ನ ಚಿನ್ನದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಸೆರೆ

ಶಂಕಿತರನ್ನು ಬಂಧಿಸಿದ ಎಟಿಎಸ್:​ ಗುಜರಾತ್​ ಎಟಿಎಸ್​ ತಂಡವು ಅಲ್ - ಖೈದಾ ಭಯೋತ್ಪಾದನ ಸಂಘಟನೆಗೆ ಸೇರಿದ್ದ ಮೂವರು ಶಂಕಿತರನ್ನು ರಾಜ್​ಕೋಟ್​ನಿಂದ ಬಂಧಿಸಿದೆ. ಅಮನ್​, ಅಬ್ದುಲ್​ ಶುಕೂರ್​ ಮತ್ತು ಸೈಫ್​ ನವಾಜ್​ ಬಂಧಿತ ಆರೋಪಿಗಳು. ಇವರು ಮೂಲತಃ ಪಶ್ಚಿಮ ಬಂಗಾಳದ ನಿವಾಸಿಗಳು ಎನ್ನಲಾಗಿದೆ. ಎಟಿಎಸ್​ ಪ್ರಕಾರ, ಈ ಮೂವರು ಅಲ್-ಖೈದಾ ಸಂಘಟನೆಯೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿದ್ದರು. ಕಳೆದ ಆರು ತಿಂಗಳಿನಿಂದ ಇವರು ರಾಜ್​ಕೋಟ್​ನ ಸೋನಿ ಬಜಾರ್​ನಲ್ಲಿ ಕೆಲಸ ಮಾಡುತ್ತಿದ್ದರು.

ಈ ಮೂವರು ಉಗ್ರರಿಂದ ಅಲ್-ಖೈದಾ ಕರಪತ್ರಗಳು, ಒಂದು ಪಿಸ್ತೂಲ್, 10 ಲೈವ್​ ಕಾಟ್ರಿಡ್ಜ್‌ಗಳು ಮತ್ತು ಐದು ಮೊಬೈಲ್​ ಫೋನ್​ಗಳನ್ನು ಎಟಿಎಸ್ ವಶಪಡಿಸಿಕೊಂಡಿದೆ. ಸದ್ಯ ಮೊಬೈಲ್​ ಫೋನ್​ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಮೂವರು ಶಂಕಿತ ಉಗ್ರರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ (ಅಪರಾಧ ಬಲದ ಮೂಲಕ ಅಥವಾ ಅಪರಾಧ ಬಲದ ಪ್ರದರ್ಶನ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಹಿಜ್ಬ್ ಉತ್ ತಹ್ರೀರ್ ಪ್ರಕರಣ: ಹೈದರಾಬಾದ್​ನಲ್ಲಿ ಪ್ರಮುಖ ಆರೋಪಿ ಬಂಧಿಸಿದ ಎನ್​ಐಎ ಅಧಿಕಾರಿಗಳು

Last Updated : Aug 3, 2023, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.