ETV Bharat / bharat

ಅಂಕಿತಾ ಭಂಡಾರಿ ನೀರಿನಲ್ಲಿ ಮುಳುಗಿ ಸಾವು.. ತಾತ್ಕಾಲಿಕ ಮರಣೋತ್ತರ ಪರೀಕ್ಷೆ ವರದಿಗೆ ಪೋಷಕರ ಆಕ್ಷೇಪ

author img

By

Published : Sep 25, 2022, 1:57 PM IST

Ankita Bhandari drowned and died
ಅಂಕಿತಾ ಭಂಡಾರಿ ನೀರಿನಲ್ಲಿ ಮುಳುಗಿ ಸಾವು

ಋಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಾತ್ಕಾಲಿಕ ವರದಿ ಬಿಡುಗಡೆ ಮಾಡಿದ್ದು, ಗಾಯಗಳ ವಿವರಗಳು ಹಾಗೂ ಇತರ ಸಂಶೋಧನೆಗಳನ್ನು ವಿವರವಾದ ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ನೀಡಲಾಗುವುದು ಎಂದು ತಿಳಿಸಿದೆ.

ಋಷಿಕೇಶ: ಉತ್ತರಾಖಂಡದ ಬಿಜೆಪಿ ನಾಯಕನ ಪುತ್ರ ಮತ್ತು ಅವರ ರೆಸಾರ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಹಚರರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದ ಅಂಕಿತಾ ಭಂಡಾರಿಯ ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಅಂಕಿತಾ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಬಹಿರಂಗಪಡಿಸಿದೆ. ಅವರ ದೇಹದ ಮೇಲೆ ಹಲವಾರು ಗಾಯಗಳಿವೆ ಎಂದು ವರದಿ ಹೇಳಿದೆ.

ಋಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ತಾತ್ಕಾಲಿಕ ವರದಿ ಬಿಡುಗಡೆ ಮಾಡಿದ್ದು, ದೇಹದ ಮೇಲೆ ಆಂಟಿಮಾರ್ಟಮ್ (ಸಾವಿಗೂ ಮುಂಚೆ ಆದ) ಗಾಯಗಳು ಕಂಡುಬಂದಿವೆ. ಇದು ವಸ್ತುವಿನಿಂದಾದ ಗಾಯಗಳು. ನೀರಿನಲ್ಲಿ ಮುಳುಗಿ ಉಸಿರುಗಟ್ಟಿರುವುದರಿಂದ ಸಾವನ್ನಪ್ಪಿರುವುದು ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ. ಗಾಯಗಳ ವಿವರಗಳು ಹಾಗೂ ಇತರ ಸಂಶೋಧನೆಗಳನ್ನು ಪೋಸ್ಟ್​ ಮಾರ್ಟಮ್​ ವರದಿಯಲ್ಲಿ ನೀಡಲಾಗುವುದು ಎಂದು ತಿಳಿಸಿದೆ. ನಾಲ್ವರು ವೈದ್ಯರ ತಂಡ ಶನಿವಾರ ಏಮ್ಸ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದೆ.

ಮೃತಳ ತಂದೆ ಮತ್ತು ಸಹೋದರ ಅಂತಿಮ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ಆಕೆಯ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿದ್ದಾರೆ. "ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿಯಿಂದ ನನಗೆ ತೃಪ್ತಿ ಇಲ್ಲ. ಅಂತಿಮ ವಿವರವಾದ ವರದಿಯನ್ನು ನಾವು ಪಡೆಯುವವರೆಗೆ ಆಕೆಯ ಅಂತ್ಯಕ್ರಿಯೆಯನ್ನು ನಡೆಸುವುದಿಲ್ಲ" ಎಂದು ಅಂಕಿತಾ ತಂದೆ ವೀರೇಂದ್ರ ಸಿಂಗ್ ಭಂಡಾರಿ ಹೇಳಿದ್ದಾರೆ.

ಅಂಕಿತಾ ಸಹೋದರ ಅಜಯ್ ಸಿಂಗ್ ಭಂಡಾರಿ ಅವರು ತಾತ್ಕಾಲಿಕ ವರದಿಯಲ್ಲಿ ವಿವರಗಳ ಕೊರತೆಯಿದೆ. ಇದು ಸಾಕ್ಷ್ಯ ನಾಶಪಡಿಸುವ ಪ್ರಯತ್ನವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ರೆಸಾರ್ಟ್ ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಅವರ ಒಡೆತನದಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಲ್ಕಿತ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಶನಿವಾರ ಋಷಿಕೇಶ ಸಮೀಪದ ಚೀಲಾ ಕಾಲುವೆಯಲ್ಲಿ ಅಂಕಿತಾ ಶವ ಪತ್ತೆಯಾಗಿತ್ತು.

ಇದನ್ನೂ ಓದಿ: ಅಂಕಿತಾ ಕೊಲೆ ತನಿಖೆಗೆ ಎಸ್​ಐಟಿ ರಚನೆ; ಪಕ್ಷದಿಂದ ಆರ್ಯ ಉಚ್ಛಾಟನೆ, ಸಾವಿಗೆ ಉತ್ತರಾಖಂಡ್ ಸಿಎಂ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.