ETV Bharat / bharat

Maharashtra political crisis: ಎಲ್ಲ ಬಂಡುಕೋರರನ್ನು ಎನ್‌ಸಿಪಿಯಿಂದ ಅನರ್ಹಗೊಳಿಸಲಾಗುವುದು: ಶರದ್ ಪವಾರ್

author img

By

Published : Jul 8, 2023, 5:09 PM IST

Updated : Jul 8, 2023, 6:20 PM IST

Maharashtra political crisis
ಎಲ್ಲಾ ಬಂಡುಕೋರರನ್ನು ಎನ್‌ಸಿಪಿಯಿಂದ ಅನರ್ಹಗೊಳಿಸಲಾಗುವುದು: ಶರದ್ ಪವಾರ್

''ಎಲ್ಲಾ ಬಂಡುಕೋರರನ್ನು ಎನ್‌ಸಿಪಿಯಿಂದ ಅನರ್ಹಗೊಳಿಸಲಾಗುವುದು'' ಎಂದು ಎನ್​ಸಿಪಿಯ ಮುಖಸ್ಥ ಶರದ್ ಪವಾರ್ ಹೇಳಿದ್ದಾರೆ. ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಪಕ್ಷದ ಬಲ ಹೆಚ್ಚಿಸಲು ಶರದ್ ಪವಾರ್ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ.

ನವದೆಹಲಿ: ತಮ್ಮ ನಾಯಕತ್ವದ ವಿರುದ್ಧ ಬಂಡಾಯ ಎದ್ದ ತಮ್ಮ ಸಹೋದರನ ಪುತ್ರ ಅಜಿತ್ ಪವಾರ್ ಅವರೊಂದಿಗಿನ ಅಧಿಕಾರದ ಹೋರಾಟದ ನಡುವೆಯೇ ಎನ್‌ಸಿಪಿಯ ಶರದ್ ಪವಾರ್, ಪಕ್ಷದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಶನಿವಾರ ನಾಸಿಕ್‌ನಿಂದ ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಿದರು. ಎಲ್ಲಾ ಬಂಡುಕೋರರನ್ನು ಎನ್‌ಸಿಪಿಯಿಂದ ಅನರ್ಹಗೊಳಿಸಲಾಗುವುದು ಎಂದು ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ನಾನು ದಣಿದಿಲ್ಲ, ನಾನು ನಿವೃತ್ತಿ ಪಡೆದುಕೊಂಡಿಲ್ಲ , ನಾನು ಬೆಂಕಿಯಾಗಿದ್ದೇನೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಹೋದರನ ಪುತ್ರನಿಗೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿನ ಈವರೆಗಿನ ಅಪ್‌ಡೇಟ್ಸ್​:

  • 82 ವರ್ಷದ ಶರದ್ ಪವಾರ್ ಅವರು, ಪಕ್ಷವನ್ನು ತಳಮಟ್ಟದಿಂದ ಪುನರ್ನಿರ್ಮಾಣ ಮಾಡುವ ಕಾರ್ಯವನ್ನು ತಮ್ಮ ಮಿಷನ್ ಎಂದು ಕರೆದಿದ್ದಾರೆ. ನಾಸಿಕ್ ನಂತರ ಅವರು ಪುಣೆ, ಸೊಲ್ಲಾಪುರ ಮತ್ತು ವಿದರ್ಭ ಪ್ರದೇಶದ ಕೆಲವು ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಚಗನ್ ಭುಜಬಲ್, ಧನಂಜಯ್ ಮುಂಡೆಮ್ ಮತ್ತು ಇತರ ಬಂಡಾಯ ಎನ್‌ಸಿಪಿ ಶಾಸಕರ ಕ್ಷೇತ್ರಗಳಿವು.
  • ಏಕನಾಥ್ ಶಿಂಧೆ ಇಂದು ಶನಿವಾರ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ಇಬ್ಬರು ನಿಯೋಗಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ ಭಾಗವಹಿಸಿದರು. ಕಳೆದ ಭಾನುವಾರ ಪವಾರ್ ಜೂನಿಯರ್ ಬಿಗ್ ಸ್ವಿಚ್ ನಂತರ ಮೂವರು ವೇದಿಕೆ ಹಂಚಿಕೊಂಡಿದ್ದು ಇದೇ ಮೊದಲು.
  • ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ರಾಜ್ಯ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ ಶಿವಸೇನೆಯ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆ ದೇವೇಂದ್ರ ಫಡ್ನವಿಸ್ ಅವರು, ಎರಡು ದಿನಗಳಲ್ಲಿ ಎರಡನೇ ಬಾರಿಗೆ ಏಕನಾಥ್ ಶಿಂಧೆ ಅವರನ್ನು ಭೇಟಿಯಾದ ಕೆಲವೇ ಗಂಟೆಗಳ ನಂತರ ಗಡ್‌ಚಿರೋಲಿ ಕಾರ್ಯಕ್ರಮವು ನಡೆದಿದೆ. ‘ಮುಖ್ಯಮಂತ್ರಿ ಆಗಬೇಕು’ ಎಂದು ಅಜಿತ್ ಪವಾರ್ ಹೇಳಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನೇ ಮೂಡಿಸಿತ್ತು.
  • ಜೊತೆಯಲ್ಲಿ ಬರಲು ಬಯಸುವವರನ್ನು ಎಂದಿಗೂ ನಿಲ್ಲಿಸುವುದಿಲ್ಲ-ಫಡ್ನವೀಸ್: ಮತ್ತೊಬ್ಬ ಮಿತ್ರ ಪಕ್ಷದ ಅಜಿತ್ ಪವಾರ್ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಂಡ ಬೆನ್ನಲ್ಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಫಡ್ನವೀಸ್ ಹೇಳಿದರು. ತಮ್ಮ ಪಕ್ಷವು ಇತರ ಪಕ್ಷಗಳಲ್ಲಿ ಒಡಕು ಮೂಡಿಸುವುದಿಲ್ಲ. ಆದರೆ, ಜೊತೆಯಲ್ಲಿ ಬರಲು ಬಯಸುವವರನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ಬಿಜೆಪಿ ಇತರ ಪಕ್ಷಗಳನ್ನು ಒಡೆಯುವುದಿಲ್ಲ. ಆದರೆ, ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಹಾಗೂ ಜೊತೆಯಲ್ಲಿ ಬರಲು ಬಯಸುವವರಿಗೆ ಯಾವುದೇ ವಿರೋಧವಿರುವುದಿಲ್ಲ ಎಂದು ಫಡ್ನವಿಸ್ ತಿಳಿಸಿದ್ದಾರೆ.
  • ಶಿಂಧೆಗೆ ರಾಜೀನಾಮೆ ಕೊಡುವಂತೆ ಕೇಳಲಾಗಿದೆ- ಆದಿತ್ಯ ಠಾಕ್ರೆ: ಏಕನಾಥ್ ಶಿಂಧೆ ಅವರಿಗೆ ರಾಜೀನಾಮೆ ಕೊಡುವಂತೆ ಕೇಳಲಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ. "ಏಕನಾಥ್ ಶಿಂಧೆ ಅವರಿಗೆ ರಾಜೀನಾಮೆ ನೀಡುವಂತೆ ಕೇಳಲಾಗಿದೆ. ಸರ್ಕಾರದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು ಎಂದು ನಾನು ಕೇಳಿದ್ದೇನೆ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
  • ಸಂಜಯ್ ರಾವುತ್ ಹೇಳಿದ್ದೇನು?: ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು, ರಾಜ್ಯ ಸರ್ಕಾರಕ್ಕೆ ಸೇರಿದಾಗಿನಿಂದ ಶಿಂಧೆ ಅವರ ಗುಂಪಿನ ಸುಮಾರು 20 ಶಾಸಕರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಸಂಜಯ್ ರಾವುತ್​ ಇತ್ತೀಚೆಗೆ ಹೇಳಿಕೊಂಡಿದ್ದರು. "ಅಜಿತ್ ಪವಾರ್ ಮತ್ತು ಇತರ ಎನ್‌ಸಿಪಿ ನಾಯಕರು ಸರ್ಕಾರಕ್ಕೆ ಸೇರಿದಾಗಿನಿಂದ, ಶಿಂಧೆ ಗುಂಪಿನ 17ರಿಂದ 18 ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ" ಎಂದು ಸಂಜಯ್ ರಾವುತ್​ ಹೇಳಿದ್ದಾರೆ.
  • ನಮ್ಮ ಶಾಸಕರ ಬಲ 200ಕ್ಕಿಂತ ಹೆಚ್ಚಿದೆ- ಶಿಂಧೆ: ಅಜಿತ್ ಪವಾರ್ ಅವರು, ಆಡಳಿತಾರೂಢ ಸಮ್ಮಿಶ್ರಕ್ಕೆ ಪ್ರವೇಶಿಸುವುದರಿಂದ ಅವರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಒತ್ತಿ ಹೇಳಿದ್ದಾರೆ. "ಈಗ ನಮ್ಮ ಸರ್ಕಾರವು ಮೂರು ಪಕ್ಷಗಳಿಂದ ರಚಿಸಲ್ಪಟ್ಟಿದೆ. ನಮ್ಮ ಶಾಸಕರ ಬಲ 200ಕ್ಕಿಂತ ಹೆಚ್ಚಿದೆ. ನಮ್ಮ ಸರ್ಕಾರವು ಬಲಗೊಳ್ಳುತ್ತಿದೆ. ನಮಗೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಬೆಂಬಲವಿದೆ" ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
  • ಹಿರಿಯ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ಮಾತನಾಡಿ, ಜೂನ್ 30ರಂದು ಅಜಿತ್ ಪವಾರ್ ಅವರನ್ನು ಅವಿರೋಧವಾಗಿ ಪಕ್ಷದ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನು ಅಜಿತ್ ಪವಾರ್ ಅವರು ಆಡಳಿತಾರೂಢ ಮೈತ್ರಿಕೂಟಕ್ಕೆ ದಾಟುವ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. "ಅಜಿತ್ ಪವಾರ್ ಬಣದ ನಾಯಕರನ್ನು ಉಚ್ಚಾಟಿಸುವ ಅಥವಾ ಅನರ್ಹಗೊಳಿಸಿರುವುದಾಗಿ, ಶರದ್ ಪವಾರ್ ಗುಂಪು ತೆಗೆದುಕೊಂಡ ನಿರ್ಧಾರಗಳು ಕಾನೂನುಬಾಹಿರ ಮತ್ತು ಅನ್ವಯಿಸುವುದಿಲ್ಲ" ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
  • ತಮ್ಮ ಬಣವೇ ನಿಜವಾದ ಎನ್‌ಸಿಪಿ ಎಂದು ಅಜಿತ್ ಪವಾರ್ ಹೇಳುತ್ತಾರೆ. ಚುನಾವಣಾ ಆಯೋಗದಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕ್ಲೈಮ್ ಮಾಡಿದ್ದಾರೆ. ಇಲ್ಲಿಯವರೆಗೆ ಅವರಿಗೆ 32 ಶಾಸಕರ ಬೆಂಬಲವಿದೆಯಂತೆ. ಶರದ್ ಪವಾರ್ ಅವರಿಗೆ 14 ಮಂದಿಯ ಬೆಂಬಲವಿದೆ. ಆದರೆ, ಚುನಾವಣಾ ಸಂಸ್ಥೆಯು ಅವರ ಹಕ್ಕನ್ನು ಪರಿಗಣಿಸುವ ಮೊದಲು ಅವರಿಗೆ 36 ಶಾಸಕರು, ಪಕ್ಷದ 53 ಶಾಸಕರಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.
  • ಶರದ್ ಪವಾರ್ ಅವರು ತಮ್ಮ ಸಹೋದರನ ಪುತ್ರ ಪಕ್ಷದ ಚಿಹ್ನೆಗೆ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಪವಾರ್ ಹಿರಿಯರು ಕಾನೂನು ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಮುಂದಿನ ದಾರಿಯ ಬಗ್ಗೆ ಪಕ್ಷದ ನಾಯಕರೊಂದಿಗೆ ಸಮಾಲೋಚಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: PM Modi: ತೆಲಂಗಾಣದಲ್ಲಿ 6100 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

Last Updated :Jul 8, 2023, 6:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.