ಕರ್ನಾಟಕ

karnataka

ನಾಮಪತ್ರ ಸಲ್ಲಿಕೆಗೂ ಮುನ್ನ ಶೃಂಗೇರಿ ಕಿರಿಯ ಶ್ರೀಗಳ ಆಶೀರ್ವಾದ ಪಡೆದ ಶೋಭಾ ಕರಂದ್ಲಾಜೆ - Shobha Karandlaje

By ETV Bharat Karnataka Team

Published : Apr 2, 2024, 9:52 PM IST

ಸಚಿವೆ ಶೋಭಾ ಕರಂದ್ಲಾಜೆ ಅವರು ಶೃಂಗೇರಿ ಕಿರಿಯ ಶ್ರೀಗಳ ಕೈಗೆ ನಾಮಪತ್ರವಿಟ್ಟು ಆಶೀರ್ವಾದ ಪಡೆದಿದ್ದಾರೆ.

Sri Jagadguru Vidhusekhara Bharati Theertha Swamiji
ಶ್ರೀ ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ

ಶೃಂಗೇರಿ ಕಿರಿಯ ಶ್ರೀಗಳ ಕೈಗೆ ನಾಮಪತ್ರವಿಟ್ಟು ಆಶೀರ್ವಾದ ಪಡೆದ ಸಚಿವೆ ಶೋಭಾ ಕರಂದ್ಲಾಜೆ

ಚಿಕ್ಕಮಗಳೂರು:ಲೋಕಸಭೆ ಚುನಾವಣಾ ಭರಾಟೆ ಜೋರಾಗಿದೆ. ಸಭೆ, ಸಮಾರಂಭ, ಮತ ಪ್ರಚಾರದ ಜತೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ನಡೆಯುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶೃಂಗೇರಿಯ ಶಾರದಾ ಪೀಠದ ಕಿರಿಯ ಶ್ರೀಗಳಾದ ಜಗದ್ಗುರು ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ಅವರನ್ನು ಇಂದು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

ನಾಮಪತ್ರ ಸಲ್ಲಿಕೆಯ ದಾಖಲೆಗಳನ್ನು ಪರಿಶೀಲಿಸಿದ ಶ್ರೀಗಳು, ಒಳ್ಳೆಯದಾಗಲೆಂದು ಆಶೀರ್ವದಿಸಿ, ನಾಮಪತ್ರ ಹಾಗೂ ಅಕ್ಷತೆ ಕಾಳನ್ನು ಶೋಭಾ ಅವರ ಸೆರಗಿನ ಮಡಿಲಿಗೆ ಹಾಕಿದರು.

ಬೆಂಗಳೂರಿನ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಕಳೆದ ಹತ್ತು ವರ್ಷಗಳ ಕಾಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ, ಕೇಂದ್ರ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಗೋ ಬ್ಯಾಕ್ ಶೋಬಾ ಎಂಬ ಕೂಗು ಜೋರಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸುತ್ತಿದ್ದಾರೆ.

ಇದನ್ನೂ ಓದಿ:ಖರ್ಗೆ ಹೆಸರು ಬಿಟ್ಟು ಸ್ಪರ್ಧಿಸಿ ಗೆದ್ದು ತೋರಿಸಿ: ಪ್ರಿಯಾಂಕ್ ಖರ್ಗೆಗೆ ಶೋಭಾ ಕರಂದ್ಲಾಜೆ ಸವಾಲು - Shobha Karandlaje Slams

ABOUT THE AUTHOR

...view details