ಕರ್ನಾಟಕ

karnataka

ಕೋಲಾರದಲ್ಲಿ ಈ ಬಾರಿ ಯಾರಿಗೆ ಒಲಿಯುವಳು ಅದೃಷ್ಟ ಲಕ್ಷ್ಮಿ: ಹೇಗಿದೆ ಚುನಾವಣಾ ಅಖಾಡ? - Lok Sabha election

By ETV Bharat Karnataka Team

Published : Mar 30, 2024, 8:12 PM IST

Updated : Apr 12, 2024, 1:31 PM IST

ಕಾಂಗ್ರೆಸ್ ಹಾಗೂ ಜೆಡಿಎಸ್​ ಎರಡೂ ಪಕ್ಷಗಳಿಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕೊನೆಗೂ ಅಂತಿಮವಾಗಿದೆ. ಕಾಂಗ್ರೆಸ್​​​​ನಲ್ಲಿ ಬಣ ರಾಜಕೀಯ ತಾರಕಕ್ಕೇರಿದರೆ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.
STRENGTH OF JDS AND CONGRESS  JDS AND CONGRESS CANDIDATES  KOLAR CONSTITUENCY  KOLAR
ಕೋಲಾರ ಕ್ಷೇತ್ರದ ಅಭ್ಯರ್ಥಿಗಳು

ಕೋಲಾರ ಕ್ಷೇತ್ರದ ಅಭ್ಯರ್ಥಿಗಳ ಮಾತು

ಕೋಲಾರ:ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕೋಲಾರ ಕಾಂಗ್ರೆಸ್​ನಲ್ಲಿದ್ದ ಎರಡು ಗುಂಪುಗಳ ನಡುವಿನ ಪ್ರತಿಷ್ಠೆ, ಬಣ ರಾಜಕೀಯ ತಾರಕಕ್ಕೇರಿತ್ತು. ಬಣ ರಾಜಕೀಯ ಶಮನ ಮಾಡಲು ಹೈಕಮಾಂಡ್​ ಕೊನೆಗೂ ಎರಡೂ ಬಣಗಳನ್ನು ಹೊರತು ಪಡಿಸಿ ಮೂರನೇ ಅಭ್ಯರ್ಥಿಗೆ ಮಣೆ ಹಾಕಿದೆ. ಇಲ್ಲಿ ಸಚಿವ ಕೆಎಚ್ ಮುನಿಯಪ್ಪಗೆ ತೀವ್ರ ಹಿನ್ನಡೆಯಾಗಿದ್ದು, ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೈ ತಪ್ಪಿದೆ.

ಕೋಲಾರ ಬಣ ರಾಜಕೀಯಕ್ಕೆ ಟಕ್ಕರ್ ಕೊಟ್ಟಿರುವ ಕಾಂಗ್ರೆಸ್​ ಹೈ ಕಮಾಂಡ್ ಅಚ್ಚರಿ ಅಭ್ಯರ್ಥಿಯಾಗಿ ಬೆಂಗಳೂರು ಮೂಲದ ಗೌತಮ್​ ಹೆಸರು ಘೋಷಣೆ ಮಾಡಿದೆ. ಕೊನೆಗೂ ಮೇಲುಗೈ ಸಾಧಿಸಿದ ರಮೇಶ್ ಕುಮಾರ್ ಬಣದ ಒತ್ತಾಯಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಹೈ ಕಮಾಂಡ್ 7 ಬಾರಿ ಸಂಸದರಾಗಿ, 2 ಬಾರಿ ಕೇಂದ್ರ ಸಚಿವರಾಗಿ, ಸದ್ಯ ಆಹಾರ ಸಚಿವರಾಗಿರುವ ಮುನಿಯಪ್ಪ ಅವರ ಬೇಡಿಕೆ ಮನ್ನಿಸಿಲ್ಲ. ಈ ಮೂಲಕ ಕಾಂಗ್ರೆಸ್ ಹೈಕಮಾಂಡ್​ನಲ್ಲಿ ತಮ್ಮ ಪ್ರಭಾವ ಹೊಂದಿದ್ದ ಮುನಿಯಪ್ಪಗೆ ದೊಡ್ಡ ಹಿನ್ನಡೆ ಇದಾಗಿದೆ.

ಈಗಾಗಲೆ ಕಾಂಗ್ರೆಸ್‌ನ ಹಲವು ನಾಯಕರು ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದಾರೆ. ಅದರಂತೆ ತನ್ನ ಅಳಿಯ ಚಿಕ್ಕ ಪೆದ್ದಣ್ಣಗೆ ಟಿಕೆಟ್ ಕೊಡಿಸಲು ಮುನಿಯಪ್ಪ ಪ್ಲಾನ್ ಮಾಡಿದ್ರು. ಆದರೆ, ಕೆಹೆಚ್​ ಮುನಿಯಪ್ಪ ಇದರಲ್ಲಿ ಸಕ್ಸಸ್​ ಆಗಿಲ್ಲ. ರೆಬಲ್ ಶಾಸಕರ ಒತ್ತಡಕ್ಕೆ ಮಣಿದ ಹೈ ಕಮಾಂಡ್ 2 ಬಣಗಳನ್ನು ಮನವೊಲಿಸುವ ಬದಲಾಗಿ ಮೂರನೆಯವರಿಗೆ ಮಣೆ ಹಾಕಿದೆ.

ಶಾಸಕರು ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ಎದುರಾಳಿಗೆ ಪ್ರಬಲ ಪೈಪೋಟಿ ನೀಡಬಹುದಾಗಿದೆ. ಹಲವಾರು ಸವಾಲುಗಳನ್ನು ಗೌತಮ್​​​ ಎದುರಿಸಲೇಬೇಕಾದ ಅನಿವಾರ್ಯತೆ ಇದೆ.

ಇನ್ನೂ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದ ಜೆಡಿಎಸ್ ಸಹ ತನ್ನ ಮೈತ್ರಿ ಅಭ್ಯರ್ಥಿ ಘೋಷಣೆ ಮಾಡಿದೆ. ಜೆಡಿಎಸ್​​ನಿಂದ ಮಲ್ಲೇಶ್ ಬಾಬು ಅವರನ್ನು ಕಣಕ್ಕೆ ಇಳಿಸಿದರೆ, ಕಾಂಗ್ರೆಸ್​ನಿಂದ ಅಚ್ಚರಿ ಅಭ್ಯರ್ಥಿಯಾಗಿ ಗೌತಮ್ ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬುಗೆ ಲೋಕಲ್​ ಟ್ರಂಪ್​ ನೆರವಾಗಬಹುದು.

ಮಲ್ಲೇಶ್ ಬಾಬು ಕೋಲಾರ ಕ್ಷೇತ್ರದಲ್ಲಿ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆಯಿಂದ ಸ್ಪರ್ಧೆ ಮಾಡಿ ಸೋಲು ಕಂಡಿದ್ದರು. ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 3 ಕ್ಷೇತ್ರಗಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ಇವರಿಗೆ ಮೈನಸ್ ಅಂದ್ರೆ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ, ಮೈತ್ರಿ ಸಮನ್ವಯ ಕೊರತೆ ಎದುರಾದರೆ ಕಷ್ಟ. ಮಲ್ಲೇಶ್​ ಬಾಬು ಎದುರು ಕಾಂಗ್ರೆಸ್​ ಅಭ್ಯರ್ಥಿ, ಹೊಸ ನಾಯಕರೊಂದಿಗೆ ಹೊಸ ಮತದಾರರ ಬಳಿ ಹೇಗೆ ಮತ ಕೇಳ್ತಾರೆ, ಹೇಗೆ ಗೆಲ್ತಾರೆ ಅನ್ನೋದು ನಿಜಕ್ಕೂ ಕುತೂಹಲಕಾರಿಯಾಗಿದೆ.

ಓದಿ:ಕೋಲಾರದಲ್ಲಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ; ಕಾಂಗ್ರೆಸ್​ನಿಂದ​ ಕೆ. ವಿ. ಗೌತಮ್​ಗೆ ಟಿಕೆಟ್ - KOLAR LOK SABHA CONSTITUENCY

Last Updated :Apr 12, 2024, 1:31 PM IST

ABOUT THE AUTHOR

...view details