ಕರ್ನಾಟಕ

karnataka

ರಣಜಿಯಲ್ಲಿ ಆಡದಿರಲು ಬೆನ್ನುನೋವಿನ ಕಾರಣ ನೀಡಿದರಾ ಶ್ರೇಯಸ್​ ಅಯ್ಯರ್​; ಎನ್​ಸಿಎ ಹೇಳೋದೇನು?

By ETV Bharat Karnataka Team

Published : Feb 22, 2024, 1:20 PM IST

Updated : Feb 22, 2024, 1:25 PM IST

ಕಳಪೆ ಫಾರ್ಮ್​ನಿಂದಾಗಿ ಭಾರತ ತಂಡದಿಂದ ಹೊರಬಿದ್ದ ಶ್ರೇಯಸ್​ ಅಯ್ಯರ್​ ರಣಜಿ ಪಂದ್ಯಕ್ಕೂ ಅಲಭ್ಯರಿಲ್ಲ ಎಂದು ತಿಳಿಸಿದ್ದಾರೆ. ತಾವು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಇದನ್ನು ಎನ್​ಸಿಎ ನಿರಾಕರಿಸಿದೆ.

ಶ್ರೇಯಸ್​ ಅಯ್ಯರ್​
ಶ್ರೇಯಸ್​ ಅಯ್ಯರ್​

ನವದೆಹಲಿ:ರಣಜಿ ಟ್ರೋಫಿಯಲ್ಲಿ ಬರೋಡಾ ವಿರುದ್ಧದ ಕ್ವಾರ್ಟರ್​ಫೈನಲ್​ ಪಂದ್ಯಕ್ಕೆ ಬೆನ್ನುನೋವಿನ ಕಾರಣ ಲಭ್ಯರಿಲ್ಲ ಎಂದು ಅಯ್ಯರ್​ ಹೇಳಿದ್ದಾರೆ. ಆದರೆ, ಅಯ್ಯರ್​ ಸಂಪೂರ್ಣ ಫಿಟ್​ ಆಗಿದ್ದಾರೆ ಎಂದು ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ ತಿಳಿಸಿದೆ. ಇದರಿಂದ ಭಾರತ ಟೆಸ್ಟ್​ ತಂಡದಿಂದ ಹೊರಬಿದ್ದಿರುವ ಕ್ರಿಕೆಟಿಗ ಶ್ರೇಯಸ್​ ಅಯ್ಯರ್​ ಫಿಟ್​​ನೆಸ್​ ಬಗ್ಗೆ ಗೊಂದಲ ಏರ್ಪಟ್ಟಿದೆ.

ರಣಜಿ ಪಂದ್ಯದಲ್ಲಿ ಮುಂಬೈ ಪರವಾಗಿ ಆಡಲು ಶ್ರೇಯಸ್​ ಅಯ್ಯರ್​ ಅವರನ್ನು ಎಂಸಿಎ ಕೋರಿತ್ತು. ಆದರೆ, ಬೆನ್ನು ನೋವಿನ ಕಾರಣ ತಾವು ಪಂದ್ಯಕ್ಕೆ ಲಭ್ಯರಿಲ್ಲ ಎಂದು ಶ್ರೇಯಸ್​ ತಿಳಿಸಿದ್ದರು. ಈ ಕುರಿತು ಎನ್​ಸಿಗೆ ಮುಂಬೈ ಕ್ರಿಕೆಟ್​ ಬೋರ್ಡ್​ ಮಾಹಿತಿ ನೀಡಿದೆ. ಆದರೆ, ಕ್ರಿಕೆಟಿಗನಿಗೆ ಯಾವುದೇ ಗಾಯವಾಗಿಲ್ಲ. ಅವರು ಸಂಪೂರ್ಣ ಫಿಟ್​ ಆಗಿದ್ದಾರೆ ಎಂದು ಅಕಾಡೆಮಿಯ ಮುಖ್ಯಸ್ಥ ನಿತಿನ್​ ಪಟೇಲ್​ ಇಮೇಲ್​ ಮೂಲಕ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯಗಳು ಫೆಬ್ರವರಿ 23 ಮತ್ತು ಫೆಬ್ರವರಿ 27ರ ನಡುವೆ ನಡೆಯಲಿದೆ. ಬರೋಡಾ ವಿರುದ್ಧ ಮುಂಬೈ ಸೆಣಸಾಡಲಿದೆ. ಇದರಿಂದ ಶ್ರೇಯಸ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಮುಂಬೈ ಪ್ಲಾನ್​ ಮಾಡಿದೆ. ಆದರೆ, ಅಯ್ಯರ್​ ಅವರೇ ಬೆನ್ನುನೋವಿನ ಕಾರಣ ನೀಡಿ ಪಂದ್ಯದಿಂದ ಹೊರಗುಳಿದಿದ್ದಾರೆ.

ಶ್ರೇಯಸ್​ ಅಯ್ಯರ್​ಗೆ ಏನಾಗಿದೆ?:ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಎರಡೂ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ನೀರಸ ಪ್ರದರ್ಶನ ನೀಡಿದ ಅವರಿಗೆ ಉಳಿದ ಮೂರು ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ನೀಡಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಶ್ರೇಯಸ್ ಅಯ್ಯರ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಟೂರ್ನಿಯಿಂದ ಹೊರಗುಳಿದಿರುವ ಆಟಗಾರರು ಗಾಯಗೊಳ್ಳದಿದ್ದರೆ ರಣಜಿ ಪಂದ್ಯಗಳನ್ನು ಆಡುವಂತೆ ಬಿಸಿಸಿಐ ಸೂಚನೆ ನೀಡಿತ್ತು.

ಕಳೆದ ವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಭಾರತ ತಂಡದ ಗುತ್ತಿಗೆ ಆಟಗಾರರು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಂತೆ ಸೂಚಿಸಿದ್ದರು. ಡ್ಯಾಶಿಂಗ್​ ಬ್ಯಾಟರ್​ ಇಶಾನ್ ಕಿಶನ್ ಕೂಡ ವೈಯಕ್ತಿಕ ಕಾರಣ ನೀಡಿ ದಕ್ಷಿಣಾ ಆಫ್ರಿಕಾ ಸರಣಿಯಿಂದ ಹೊರಗುಳಿದಿದ್ದರು. ಐಪಿಎಲ್​ಗೆ ತಯಾರಿ ನಡೆಸಲಾಗುತ್ತಿದೆ ಎಂಬ ಮಾಹಿತಿಯ ಮಧ್ಯೆ ರಣಜಿ ಪಂದ್ಯವನ್ನು ಆಡುವಂತೆ ಕ್ರಿಕೆಟಿಗನಿಗೆ ನಿರ್ದೇಶಿಸಲಾಗಿದೆ. ಆದರೆ ಅವರೂ ಕೂಡ ಜಾರ್ಖಂಡ್‌ನ ಕೊನೆಯ ರಣಜಿ ಪಂದ್ಯವನ್ನು ಆಡಿರಲಿಲ್ಲ.

ಇದನ್ನೂ ಓದಿ:ಐಪಿಎಲ್‌ಗೆ ಆದ್ಯತೆ ನೀಡಿ ದೇಶೀಯ ಕ್ರಿಕೆಟ್‌ ಕಡೆಗಣಿಸುವುದು ಒಳ್ಳೆಯದಲ್ಲ: ಆಟಗಾರರಿಗೆ ಜಯ್ ಶಾ ಎಚ್ಚರಿಕೆ

Last Updated : Feb 22, 2024, 1:25 PM IST

ABOUT THE AUTHOR

...view details