ಕರ್ನಾಟಕ

karnataka

ಸೀತಾರಾಮನ್​​ ಉಟ್ಟ ಸೀರೆಯತ್ತಲೇ ಎಲ್ಲರ ಚಿತ್ತ.. ಈ ಬಾರಿ ಅವರುಟ್ಟ ಸೀರೆಯ ಮಹತ್ವ ಏನು ಅಂತೀರಾ?

By ETV Bharat Karnataka Team

Published : Feb 2, 2024, 3:23 PM IST

ನಿನ್ನೆ ತಾನೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಮಧ್ಯಂತರ ಬಜೆಟ್​ ಮಂಡನೆ ಮಾಡಿದರು. ಬಜೆಟ್​ನಷ್ಟೇ ಇವರ ಸೀರೆ ಮೇಲೆ ಕೂಡ ಎಲ್ಲರ ಕಣ್ಣು ಬಿದ್ದಿದ್ದು ವಿತ್ತ ಸಚಿವೆ ಧರಿಸಿದ ಸೀರೆ ಕುರಿತು ಮಾಹಿತಿ ಇಲ್ಲಿದೆ ನೋಡಿ.

ಸಚಿವೆ ನಿರ್ಮಲಾ ಸೀರೆಯತ್ತಾ ಎಲ್ಲರ ಚಿತ್ತಾ
ಸಚಿವೆ ನಿರ್ಮಲಾ ಸೀರೆಯತ್ತಾ ಎಲ್ಲರ ಚಿತ್ತಾ

ಬಜೆಟ್​ ಮಂಡನೆ ಬಂತೆಂದರೆ ಈ ಬಾರಿ ಯಾವ ಹೊಸ ಯೋಜನೆಗೆ ಎಷ್ಟು ಅನುದಾನ ಬರಲಿದೆ ಎಂಬ ನಿರೀಕ್ಷೆಯಲ್ಲಿ ದೇಶದ ಜನರಿರುತ್ತಾರೆ. ಆದರೆ ಹೆಚ್ಚಿನವರು ಮಾತ್ರ ವಿತ್ತ ಸಚಿವೆ ಯಾವ ಸೀರೆ ಉಟ್ಟು ಬರುತ್ತಾರೆ ಎಂಬ ಕುತೂಹಲದಲ್ಲಿ ಇದ್ದಿದ್ದಂತೂ ನಿಜ. ಹೌದು, ಹೆಸರಿನಂತೆ ನಿರ್ಮಲ ನಗೆ ಬೀರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಹಲವಾರು ಅಭಿಮಾನಿಗಳಿದ್ದಾರೆ. ಯಾವ ಸೆಲೆಬ್ರೆಟಿಗೂ ಕಮ್ಮಿ ಇಲ್ಲದಂತೆ ಇವರ ಔಟ್​ಫಿಟ್​ನ್ನು ಪಾಲೋ ಮಾಡುವ ಮಹಿಳೆಯರಿದ್ದಾರೆ. ಹಣಕಾಸು ಸಚಿವೆಯಾದಾಗಿನಿಂದ ನಿರ್ಮಲಾ ಸೀತಾರಾಮನ್​ ಇಲ್ಲಿವರೆಗೆ ಒಟ್ಟು 6 ಬಾರಿ ಬಜೆಟ್​ ಮಂಡನೆ ಮಾಡಿ ದಾಖಲೆ ಬರೆದಿದ್ದಾರೆ.

ಹೆಚ್ಚಾಗಿ ನೇಯ್ದ ಸೀರೆಗಳತ್ತ ಒಲವು ತೋರುವ ಇವರು ಈ ಬಾರಿ ರಾಮ - ನೀಲಿ ಮತ್ತು ಕ್ರೀಂ ಬಣ್ಣದ ಕಾಂಬೀನೇಷನ್​ನಲ್ಲಿ ಕಸೂತಿ ಟಸ್ಸಾರ್ ರೇಷ್ಮೆ ಸೀರೆಯನ್ನು ಧರಿಸಿ ನೂತನ ಸಂಸತ್​ಗೆ ಕೆಂಪು ಬಣ್ಣದ ಪೌಚ್​ ಹೊಂದಿದ ಟಾಬ್​ ಹಿಡಿದು ಬಜೆಟ್​ ಮಂಡಿಸಲು ಆಗಮಿಸುವ ಮೂಲಕ ಗುರುವಾರ ಎಲ್ಲರ ಗಮನ ಸೆಳೆದಿದ್ದಾರೆ.

ಈ ಬಾರಿ ಬೆಂಗಾಲಿ ಮಹಿಳೆಯರು ಉಡುವ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು ಬಂದಿದ್ದು ವಿಶೇಷವಾಗಿತ್ತು. ಕಾಂತ ಕಸೂತಿ, ಪೂರ್ವ ಭಾರತದ ಕೈ ಹೊಲಿಗೆಗಳಲ್ಲಿ ಒಂದಾಗಿದೆ. ಈ ಸೀರೆ ಶತಮಾನಗಳ ಇತಿಹಾಸವನ್ನು ಹೊಂದಿದೆ. ಇದನ್ನೂ ಟಸ್ಸಾರ್​ ರೇಷ್ಮೆಯ ಮೂಲಕ ತಯಾರಿಸಲಾಗುತ್ತದೆ. ಬಂಗಾಳ ಹಾಗೂ ಒಡಿಶಾ ಮತ್ತು ತ್ರಿಪುರಾ ರಾಜ್ಯಗಳಲ್ಲಿ ಈ ಸೀರೆ ಜನಪ್ರಿಯವಾಗಿದೆ. ಈ ಬಾರಿ ನಿರ್ಮಲಾ ಸೀತಾರಾಮನ್​ ಧರಿಸಿರುವ ಸೀರೆಯ ಬಣ್ಣ, ಶಕ್ತಿ, ನಂಬಿಕೆ, ಸ್ಥಿರತೆ ಮತ್ತು ಏಕತೆಯ ಸೂಚಕವಾಗಿದೆ. ಅಲ್ಲದೇ ಅಯೋಧ್ಯೆಯು ರಾಮನ ಜೀವನದ ಪ್ರತಿಷ್ಠೆಯ ಸಂಕೇತವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಟಸ್ಸಾರ್ ರೇಷ್ಮೆ ವಿಶೇಷತೆ:ಟಸ್ಸಾರ್ ರೇಷ್ಮೆ ಕೂಡ ಒಂದು ರೀತಿಯ ರೇಷ್ಮೆ. ರೇಷ್ಮೆ ಹುಳುಗಳು ಬಿಳಿ ಮಡ್ಡಿ, ಕಪ್ಪು ಮಡ್ಡಿ, ಓಕ್ ಮುಂತಾದ ಕಾಡು ಮರಗಳ ಎಲೆಗಳನ್ನು ತಿಂದು ಗೂಡು ಕಟ್ಟುತ್ತವೆ. ಇವುಗಳಿಂದ ತೆಗೆದ ಎಳೆಗಳಿಂದ ಟಸ್ಸಾರ್ ರೇಷ್ಮೆಯನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸಿದ ಪ್ರದೇಶಗಳನ್ನು ಅವಲಂಬಿಸಿ ಅದರ ಹೆಸರು ಬದಲಾಗುತ್ತದೆ. ಜಾರ್ಖಂಡ್‌ನಲ್ಲಿ ಇದನ್ನು ಕೋಸಾ ರೇಷ್ಮೆ ಎಂದು ಕರೆಯಲಾಗುತ್ತದೆ ಮತ್ತು ಬಿಹಾರದ ಭಾಗಲ್‌ಪುರದಲ್ಲಿ ಉತ್ಪಾದಿಸುವ ಭಾಗಲ್‌ಪುರಿ ರೇಷ್ಮೆ ಎಂದು ಕರೆಯಲಾಗುತ್ತದೆ.

ಇನ್ನೂ ಹಲವು ವಿಧಗಳಿವೆ. ಮ್ಯಾಟ್ ಫಿನಿಶ್ ಹೊಂದಿರುವ ನೈಸರ್ಗಿಕ ಗೋಲ್ಡನ್ ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ರೇಷ್ಮೆ ಸಿಂಥೆಟಿಕ್ ಥ್ರೆಡ್​ಗಳೊಂದಿಗೆ ನೇಯ್ಗೆ ಕಷ್ಟ. ಆದಾಗ್ಯೂ, ಅದರ ವಿನ್ಯಾಸವು ಒರಟಾಗಿದ್ದರೂ, ಇದು ಧರಿಸುವವರಿಗೆ ತಂಪು ಮತ್ತು ಆರಾಮದಾಯಕ ಅನುಭವ ನೀಡುತ್ತದೆ. ಅಲ್ಲದೆ, ಬಂಗಾಳಿ ಕರಕುಶಲ ಮತ್ತು ಜಾನಪದ ಕಲಾ ಪ್ರಕಾರಗಳಲ್ಲಿ ಕಾಂತವರ್ಕ್ ವಿಶೇಷ ಸ್ಥಾನವನ್ನು ಹೊಂದಿದೆ. ಶಾಂತಿನಿಕೇತನ ಬಳಿಯ ಬಿರ್ಭುಮ್ ಜಿಲ್ಲೆಗಳಲ್ಲಿ ಈ ಕಸೂತಿ ಹುಟ್ಟಿಕೊಂಡಿತು.

ಇದನ್ನೂ ಓದಿ:2047ರ ವೇಳೆಗೆ 'ವಿಕ್ಷಿತ್ ಭಾರತ್': ಬಜೆಟ್​​​​​​​​ನಲ್ಲಿ ಸೀತಾರಾಮನ್​ ಘೋಷಣೆ..

ABOUT THE AUTHOR

...view details