ಕರ್ನಾಟಕ

karnataka

ಭಾವೈಕ್ಯತೆಯ ಸಂಕೇತ.. ಆಂಜನೇಯ ಸ್ವಾಮಿ ರಥ ಎಳೆದ ಹಿಂದೂ-ಮುಸ್ಲಿಂ ಬಾಂಧವರು

By

Published : Jul 12, 2022, 2:38 PM IST

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯ ಸ್ವಾಮಿ ರಥೋತ್ಸವದ ವೇಳೆ ಮಾರ್ಗ ಮಧ್ಯೆ ಸಿಕ್ಕ ಮಸೀದಿ ಬಳಿ ಜಮಾಯಿಸಿದ್ದ ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿಗೆ ವಿಶೇಷ ಅರ್ಚನೆ ಮಾಡಿಸಿದರು. ಅಲ್ಲದೆ ಆಂಜನೇಯ ಸ್ವಾಮಿ ರಥವನ್ನು ಎಳೆಯಲು ಮುಸ್ಲಿಮರು ಕೂಡ ಸಾಥ್​ ನೀಡಿದ್ದು, ವಿಶೇಷವಾಗಿತ್ತು. ಹಾಗಲವಾಡಿ ಪಾಣೆಗಾರರು ಆಳ್ವಿಕೆ ನಡೆಸಿದ ಐತಿಹಾಸಿಕ ನೆಲೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯ ಹಾಗೂ ತಾತಯ್ಯನವರ ಭಾವೈಕ್ಯದ ಸಂಕೇತವಾಗಿದೆ ಈ ಉತ್ಸವ. ತಲೆತಲಾಂತರದಿಂದಲೂ ಆಂಜನೇಯ ಸ್ವಾಮಿ ಉತ್ಸವದಲ್ಲಿ ಮುಸ್ಲಿಮರು ಕೂಡ ಭಾಗಿಯಾಗುವುದು ಸದ್ದಿಲ್ಲದೆ ನಡೆದುಕೊಂಡು ಬಂದಿದೆ.

ABOUT THE AUTHOR

...view details