ಕರ್ನಾಟಕ

karnataka

ಸ್ವಾಧೀನ ಕಳೆದುಕೊಂಡ ಚಿರತೆ.. ಬರಿಗೈಯಲ್ಲೇ ಹೊತ್ತೊಯ್ದ ಅರಣ್ಯ ಇಲಾಖೆ ಸಿಬ್ಬಂದಿ

By

Published : Jul 27, 2022, 2:21 PM IST

Updated : Feb 3, 2023, 8:25 PM IST

ಕಾಲಿನ ಸ್ವಾಧೀನ ಕಳೆದುಕೊಂಡು ಅಸ್ವಸ್ಥವಾಗಿದ್ದ ಚಿರತೆಯನ್ನ ರಕ್ಷಣೆ ಮಾಡಿದ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ. ಮಂಗಸಂದ್ರ ಗ್ರಾಮದ ಬಳಿ ಅಸ್ವಸ್ಥಗೊಂಡಿದ್ದ ಚಿರತೆಯನ್ನ ಬನ್ನೇರುಘಟ್ಟದಿಂದ ಬಂದಿದ್ದ ತಂಡ ರಕ್ಷಿಸಿತು. ಬನ್ನೇರುಘಟ್ಟದ ಉಮಾಶಂಕರ್​ ಹಾಗೂ ಕೋಲಾರ ತಾಲ್ಲೂಕು ಆರ್​.ಎಫ್​.ಓ ವಾಸದೇವಮೂರ್ತಿ ಅವರ ತಂಡ, ಮಂಗಸಂದ್ರ ಗ್ರಾಮದ ಬಳಿ ಹುಲ್ಲಿನ ಮೆದೆಯಡಿ ಸಿಲುಕಿಕೊಂಡಿದ್ದ ಒಂದು ವರ್ಷದ ಗಂಡು ಚಿರತೆಗೆ ಅರವಳಿಕೆ ನೀಡಿ ರಕ್ಷಣೆ ಮಾಡಿದರು. ಬಳಿಕ ಆ ಚಿರತೆಯನ್ನು ಅರಣ್ಯ ಸಿಬ್ಬಂದಿ ಬರಿಗೈಯಲ್ಲೇ ಹಿಡಿದು ವಾಹನದ ಬಳಿ ತಂದರು. ಚಿರತೆ ಹಾವಳಿಯಿಂದ ಬೇಸತ್ತಿದ್ದ ಗ್ರಾಮಸ್ಥರು ಹಲವಾರು ಬಾರಿ ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ರು. ಈ ಹಿನ್ನೆಲೆ ಅರಣ್ಯ ಇಲಾಖೆಯವರು ಸಹ ಬೆಟ್ಟದ ತಪ್ಪಲಿನಲ್ಲಿ ಬೋನ್ ಇಟ್ಟಿದ್ದರು.
Last Updated :Feb 3, 2023, 8:25 PM IST

ABOUT THE AUTHOR

...view details