ಕರ್ನಾಟಕ

karnataka

ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್‌ಗೆ ಗ್ರಾಮಸ್ಥರ ತರಾಟೆ- ವಿಡಿಯೋ

By

Published : Feb 26, 2023, 1:27 PM IST

ತರಾಟೆಗೆ ತೆಗೆದುಕೊಂಡ ದೃಶ್ಯ

ಗುರುಮಠಕಲ್(ಯಾದಗಿರಿ):ವಿಧಾನ ಪರಿಷತ್ ಬಿಜೆಪಿ ಸದಸ್ಯ ಬಾಬುರಾವ್ ಚಿಂಚನಸೂರ್​ಅವರನ್ನು ಜನರು ತರಾಟೆಗೆ ತೆಗೆದುಕೊಂಡ ಘಟನೆ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ. ಶನಿವಾರ ಗ್ರಾಮಕ್ಕೆ‌ ಭೇಟಿ ನೀಡಿದ್ದ ಚಿಂಚನಸೂರ್ ಗ್ರಾಮದ ನೀರಿನ ಸಮಸ್ಯೆ ಬಗೆ ಹರಿಸುತ್ತೇನೆ‌. ನಾನು ಬರುವ ಚುನಾವಣೆಯಲ್ಲಿ ಗೆದ್ದರೆ ಗ್ರಾಮದ ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿದರು.‌ 

ಈ ವೇಳೆ‌ ಗಾಜರಕೋಟ್ ಗ್ರಾಮಸ್ಥನೋರ್ವ, "ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಏನು ಕೆಲಸ ಮಾಡಿದ್ದೀರಿ" ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು. ಇದರಿಂದ ಕೋಪಗೊಂಡ ಚಿಂಚನಸೂರ್,​" ಏ ವೋಟ್ ಯಾರಿಗಾದ್ರೂ ಹಾಕು, ಬಿಡು. ನಿನ್ನ ವೋಟ್ ಬೇಕಾಗಿಲ್ಲ ಹೋಗು" ಎಂದು ಗರಂ ಆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಚಿಂಚನಸೂರ್​ ಸ್ಥಳದಿಂದ ತೆರಳಿದರು. 

ಇದನ್ನೂ ಓದಿ:ಹಾಡಹಗಲೇ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ABOUT THE AUTHOR

...view details